ನಂದಗುಡಿ (ಬೆಂಗಳೂರು ಗ್ರಾಮಾಂತರ): ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಐವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭೀಮಕನಹಳ್ಳಿಯಲ್ಲಿರುವ ಸೋಲೋಸ್ ರೆಸಾರ್ಟ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಎಎಸ್ಪಿ ನೇತೃತ್ವದ ತಂಡ ಸೋಮವಾರ ತಡ ರಾತ್ರಿ ದಾಳಿ ನಡೆಸಿತ್ತು.
ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಬರುತ್ತಿದ್ದ ಗ್ರಾಹಕರಿಗೆ ರೆಸಾರ್ಟ್ನಲ್ಲೇ ವೇಶ್ಯಾವಾಟಿಕೆಗೆ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿತ್ತು. ಗ್ರಾಹಕರಿಂದ ಮನಬಂದಂತೆ ಹಣ ಪೀಕುವುದನ್ನೇ ರೆಸಾರ್ಟ್ ಸಿಬ್ಬಂದಿ ಬಂಡವಾಳ ಮಾಡಿಕೊಂಡಿದ್ದರು.
ಬೆಂಗಳೂರು: ಅಕ್ರಮ ಮಸಾಜ್ ಸೆಂಟರ್ ಮೇಲೆ ಸಿಸಿಬಿ ದಾಳಿ, ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ!
ಬೆಂಗಳೂರು ಗ್ರಾಮಾಂತರ ಎಎಸ್ಪಿ ಲಕ್ಷ್ಮಿ ಗಣೇಶ್ ನೇತೃತ್ವದ ತಂಡ ರೆಸಾರ್ಟ್ ಮೇಲೆ ದಾಳಿ ನಡೆಸಿ, ರಾಜೇಶ್ ಹಾಗೂ ಕ್ರಾಂತಿ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಐವರು ಮಹಿಳೆಯರನ್ನು ರಕ್ಷಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ಆಂಧ್ರ ಪ್ರದೇಶದ ವಿವಿಧೆಡೆಗಳಿಂದ ಐವರು ಮಹಿಳೆಯರನ್ನು ರಾಜೇಶ್ ಹಾಗೂ ಕ್ರಾಂತಿ ಕರೆದು ತಂದು ಹಣದ ಆಮಿಷ ತೋರಿಸಿ ರೆಸಾರ್ಟ್ನಲ್ಲಿ ಕೂಡಿಹಾಕಿ ಅರೆಬರೆ ಬಟ್ಟೆ ತೊಡಿಸಿ, ಗ್ರಾಹಕರಿಗೆ ಮದ್ಯ ಸರಬರಾಜು ಮಾಡಿಸುವುದರೊಂದಿಗೆ ಅಶ್ಲೀಲ ನೃತ್ಯ ಮಾಡುವಂತೆ ಬೆದರಿಕೆ ಹಾಕಿ ಅನೈತಿಕ ಚಟುವಟಿಕೆಗೆ ಬಳೆಸಿಕೊಳ್ಳುತ್ತಿದ್ದರು ಎಂದು ಮಹಿಳೆಯರು ಹೇಳಿಕೆಯಲ್ಲಿ ದೂರಿದ್ದಾರೆ.
ವಿದೇಶಿ ಮದ್ಯ ದುಬಾರಿ ಬೆಲೆಗೆ ಮಾರಲು ಹೋಗಿ ಸಿಸಿಬಿ ಬಲೆಗೆ ಸಿಕ್ಕಿಬಿದ್ದ!
ದಾಳಿಯ ವೇಳೆ ಮಹಿಳೆಯರು ಅರೆ ಬರೆ ಬಟ್ಟೆ ತೊಟ್ಟು ಧ್ವನಿವರ್ಧಕದ ಹಾಡಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಿದ್ದರು. ರೆಸಾರ್ಟ್ನ ವ್ಯವಸ್ಥಾಪಕ ಪೃಥ್ವಿ ಹಾಗೂ ಗಿರಾಕಿಗಳು ಪೊಲೀಸರನ್ನು ಕಂಡೊಡನೇ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಮದ್ಯದ ಬಾಟಲುಗಳು ಹಾಗೂ ಕಾರನ್ನು ವಶಕ್ಕೆ ಪಡೆದು ರೆಸಾರ್ಟ್ಗೆ ಬೀಗ ಮುದ್ರೆ ಜಡಿದು, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ರೆಸಾರ್ಟ್ನ ಮೇಲೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೇಶ್ಯಾವಾಟಿಕೆ ಜಾಲದಿಂದ 12 ಯುವತಿಯರ ರಕ್ಷಣೆ
ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಬರುತ್ತಿದ್ದ ಗ್ರಾಹಕರಿಗೆ ರೆಸಾರ್ಟ್ನಲ್ಲೇ ವೇಶ್ಯಾವಾಟಿಕೆಗೆ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿತ್ತು. ಗ್ರಾಹಕರಿಂದ ಮನಬಂದಂತೆ ಹಣ ಪೀಕುವುದನ್ನೇ ರೆಸಾರ್ಟ್ ಸಿಬ್ಬಂದಿ ಬಂಡವಾಳ ಮಾಡಿಕೊಂಡಿದ್ದರು.
ಬೆಂಗಳೂರು: ಅಕ್ರಮ ಮಸಾಜ್ ಸೆಂಟರ್ ಮೇಲೆ ಸಿಸಿಬಿ ದಾಳಿ, ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ!
ಬೆಂಗಳೂರು ಗ್ರಾಮಾಂತರ ಎಎಸ್ಪಿ ಲಕ್ಷ್ಮಿ ಗಣೇಶ್ ನೇತೃತ್ವದ ತಂಡ ರೆಸಾರ್ಟ್ ಮೇಲೆ ದಾಳಿ ನಡೆಸಿ, ರಾಜೇಶ್ ಹಾಗೂ ಕ್ರಾಂತಿ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಐವರು ಮಹಿಳೆಯರನ್ನು ರಕ್ಷಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ.
ಕೆಲಸ ಕೊಡಿಸುವುದಾಗಿ ಆಂಧ್ರ ಪ್ರದೇಶದ ವಿವಿಧೆಡೆಗಳಿಂದ ಐವರು ಮಹಿಳೆಯರನ್ನು ರಾಜೇಶ್ ಹಾಗೂ ಕ್ರಾಂತಿ ಕರೆದು ತಂದು ಹಣದ ಆಮಿಷ ತೋರಿಸಿ ರೆಸಾರ್ಟ್ನಲ್ಲಿ ಕೂಡಿಹಾಕಿ ಅರೆಬರೆ ಬಟ್ಟೆ ತೊಡಿಸಿ, ಗ್ರಾಹಕರಿಗೆ ಮದ್ಯ ಸರಬರಾಜು ಮಾಡಿಸುವುದರೊಂದಿಗೆ ಅಶ್ಲೀಲ ನೃತ್ಯ ಮಾಡುವಂತೆ ಬೆದರಿಕೆ ಹಾಕಿ ಅನೈತಿಕ ಚಟುವಟಿಕೆಗೆ ಬಳೆಸಿಕೊಳ್ಳುತ್ತಿದ್ದರು ಎಂದು ಮಹಿಳೆಯರು ಹೇಳಿಕೆಯಲ್ಲಿ ದೂರಿದ್ದಾರೆ.
ವಿದೇಶಿ ಮದ್ಯ ದುಬಾರಿ ಬೆಲೆಗೆ ಮಾರಲು ಹೋಗಿ ಸಿಸಿಬಿ ಬಲೆಗೆ ಸಿಕ್ಕಿಬಿದ್ದ!
ದಾಳಿಯ ವೇಳೆ ಮಹಿಳೆಯರು ಅರೆ ಬರೆ ಬಟ್ಟೆ ತೊಟ್ಟು ಧ್ವನಿವರ್ಧಕದ ಹಾಡಿಗೆ ಅಶ್ಲೀಲವಾಗಿ ನೃತ್ಯ ಮಾಡುತ್ತಿದ್ದರು. ರೆಸಾರ್ಟ್ನ ವ್ಯವಸ್ಥಾಪಕ ಪೃಥ್ವಿ ಹಾಗೂ ಗಿರಾಕಿಗಳು ಪೊಲೀಸರನ್ನು ಕಂಡೊಡನೇ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಮದ್ಯದ ಬಾಟಲುಗಳು ಹಾಗೂ ಕಾರನ್ನು ವಶಕ್ಕೆ ಪಡೆದು ರೆಸಾರ್ಟ್ಗೆ ಬೀಗ ಮುದ್ರೆ ಜಡಿದು, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ರೆಸಾರ್ಟ್ನ ಮೇಲೆ ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೇಶ್ಯಾವಾಟಿಕೆ ಜಾಲದಿಂದ 12 ಯುವತಿಯರ ರಕ್ಷಣೆ