ಆ್ಯಪ್ನಗರ

ಉದ್ಘಾಟನೆಯಾದ ಹತ್ತು ತಿಂಗಳಲ್ಲೇ ರೈಲ್ವೆ ಮೇಲ್ಸುತೆವೆ ಕುಸಿತ

ಕಾಮಗಾರಿ ಮುಗಿದು ಒಂದು ವರ್ಷ ಪೂರ್ಣಗೊಳ್ಳವ ಮುನ್ನವೇ ತಾಲೂಕಿನ ಬಾಶೆಟ್ಟಿಹಳ್ಳಿ ರೈಲ್ವೆ ಮೇಲ್ಸೇತುವೆ ತಳಭಾಗದಲ್ಲಿ ಕುಸಿದಿದ್ದು , ಕೆಲಕಾಲ ವಾಹನ ಸವಾರರು, ನಾಗರಿಕರಲ್ಲಿ ಆತಂಕ ಉಂಟಾಯಿತು.

Vijaya Karnataka 13 Jul 2019, 5:00 am
ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ
Vijaya Karnataka Web BRL-12DBP1


ದೊಡ್ಡಬಳ್ಳಾಪುರ:
ಕಾಮಗಾರಿ ಮುಗಿದು ಒಂದು ವರ್ಷ ಪೂರ್ಣಗೊಳ್ಳವ ಮುನ್ನವೇ ತಾಲೂಕಿನ ಬಾಶೆಟ್ಟಿಹಳ್ಳಿ ರೈಲ್ವೆ ಮೇಲ್ಸೇತುವೆ ತಳಭಾಗದಲ್ಲಿ ಕುಸಿದಿದ್ದು , ಕೆಲಕಾಲ ವಾಹನ ಸವಾರರು, ನಾಗರಿಕರಲ್ಲಿ ಆತಂಕ ಉಂಟಾಯಿತು.

ಸೇತುವೆ ಕಂಪಿಸಿದ ಅನುಭವ: ಶುಕ್ರವಾರ ಮಧ್ಯಾಹ್ನ ಮೇಲ್ಸೇತುವೆ ಕುಸಿದ ಪರಿಣಾಮ ಸೇತುವೆ ಕಂಪಿಸುವ ಅನುಭವ ವಾಹನ ಸವಾರರಿಗೆ ಆಗಿದೆ. ವಿಷಯ ತಿಳಿದ ತಕ್ಷ ಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಜಾಗ್ರತ ಕ್ರಮವಾಗಿ ವಾಹನ ಸಂಚಾರವನ್ನು ಮೇಲ್ಸೇತುವೆಯ ಮತ್ತೊಂದು ಏಕ ಮುಖ ರಸ್ತೆಗೆ ಶಿಫ್ಟ್‌ ಮಾಡಿದರು. ಹೀಗಾಗಿ ಕೆಲಕಾಲ ವಾಹನ ದಟ್ಟಣೆಯನ್ನು ನಿಯಂತ್ರಸಲು ಪೊಲೀಸರು ಹರಸಾಹಸಪಟ್ಟರು. ನಂತರ ಜನ ಸ್ಥಳದಲ್ಲಿ ಜಮಾಯಿಸಿ ಕಳಪೆ ಕಾಮಗಾರಿಯೇ ಕುಸಿತಕ್ಕೆ ಕಾರಣ ಎಂದು ಆಕ್ಷೇಪ ವ್ಯಕಪಡಿಸಿದರು.

ರೈಲ್ವೆ ಇಲಾಖೆ ಸುಪರ್ಧಿಗೆ ಬರುವ ಮೇಲು ರೈಲ್ವೆ ಮೇಲ್ಸೇತುವೆ ಸುಮಾರು ರೂ 38 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಉದ್ಘಾಟನೆಗೂ ಮುನ್ನವೂ ಒಮ್ಮೆ ಸೇತುವೆ ಕುಸಿದಿತ್ತು. ಹೀಗಾಗಿ ವಾಹನ ಸಂಚಾರಕ್ಕೆ ತಡವಾಗಿ ಮುಕ್ತಗೊಳಿಸಲಾಗಿತ್ತು. ಉದ್ಘಾಟನೆಗೊಂಡ ಹತ್ತು ತಿಂಗಳ ನಂತರ ಕಳೆದ ಭಾರಿಗಿಂತ ಗಂಭೀರ ಪ್ರಮಾಣದಲ್ಲಿ ಕುಸಿದಿದ್ದು, ವಾಹನ ಸವಾರರಲ್ಲಿ ಪ್ರಾಣಭೀತಿ ಸಷ್ಟಿಯಾಗಿದೆ.ಪ ಕಾಮಗಾರಿ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
----

ಮೇಲ್ಸೇತುವೆ ಕಳಪೆ ಕಾಮಗಾರಿ ಎಂದು ಜನ ದೂರುತ್ತಿದ್ದಾರೆ. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ನಿರ್ಮಾಣ ಮಾಡಿರುವ ಕಾಮಗಾರಿಯಾದ್ದರಿಂದ ಇದಕ್ಕೂÜು ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಇಲ್ಲಿನ ಸೇತುವೆ ನಿರ್ಮಾಣದ ಸಮಯದಲ್ಲಿ ಮದ್ಯಭಾಗದಲ್ಲಿ ವಿದ್ಯುತ್‌ ತಂತಿಗಳು ಹಾದು ಹೋಗಿದ್ದ ಪರಿಣಾಮ ಕಾಮಗಾರಿಯಲ್ಲಿ ವ್ಯತ್ಯಾಸವಾಗಿರಬಹುದು. ಕುಸಿದಿರುವ ಭಾಗದಲ್ಲಿ ನೀರು ಸೇರಿರುವ ಪರಿಣಾಮ ಸಮಸ್ಯೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೂ ಸ್ಥಳೀಯ ಶಾಸಕನಾಗಿ ಈ ಸಂಬಂಧ ದುರಸ್ತಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶನಿವಾರ ನಾನು ಸಹ ಸ್ಥಳಕ್ಕೆ ಬೇಟಿ ನೀಡಲಿದ್ದೇನೆ.

-ಟಿ.ವೆಂಕಟರಮಣಯ್ಯ, ಶಾಸಕ ದೊಡ್ಡಬಳ್ಳಾಪುರ

ಕಾಮಗಾರಿ ರಾಜ್ಯ ಸರ್ಕಾರದ್ದೇ ಆಗಲಿ ಕೇಂದ್ರ ಸರ್ಕಾರದ್ದೇ ಆಗಲಿ ಜನಗಳ ಪ್ರಾಣಗಳ ಜೊತೆ ಆಟವಾಡುವ ಕಾಮಾಗಾರಿ ನಿರ್ಮಾಣ ಮಾಡಿದ ಗುತ್ತಿಗೆದಾರ ಮತ್ತು ರೈಲ್ವೆ ಇಲಾಖೆ ಇಂಜಿನೀಯರ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

-ಕೆ.ಎಂ.ಹನುಮಂತರಾಯಪ್ಪ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ರೈಲ್ವೆ ಮೇಲ್ಸೇತುವೆ ಎರಡನೇ ಭಾರಿ ಕುಸಿದಿರುವುದು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ