ಆ್ಯಪ್ನಗರ

ರಾಜಕಾಲುವೆ ಒತ್ತುವರಿ: ಮುಸ್ಲಿಂ ಫೆಡರೇಷನ್‌ಗೆ ಸೇರಿದ 6 ಕೋಟಿ ರೂ.ಮೌಲ್ಯದ ಜಾಗ ವಶ

ರಾಜಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಮುಂದುವರಿಸಿದ್ದು, ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಮುಸ್ಲಿಂ ಫೆಡರೇಷನ್‌ಗೆ ಸೇರಿದ ಜಾಗವನ್ನೂ ತೆರವುಗೊಳಿಸಲಾಗಿದೆ.

ವಿಕ ಸುದ್ದಿಲೋಕ 20 Sep 2016, 2:58 pm
ಬೆಂಗಳೂರು: ರಾಜಕಾಲುವೆ ಒತ್ತುವರಿ ಜಾಗ ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಮುಂದುವರಿಸಿದ್ದು, ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಮುಸ್ಲಿಂ ಫೆಡರೇಷನ್‌ಗೆ ಸೇರಿದ ಜಾಗವನ್ನೂ ತೆರವುಗೊಳಿಸಲಾಗಿದೆ.
Vijaya Karnataka Web rajakaluve encroachment being vacated
ರಾಜಕಾಲುವೆ ಒತ್ತುವರಿ: ಮುಸ್ಲಿಂ ಫೆಡರೇಷನ್‌ಗೆ ಸೇರಿದ 6 ಕೋಟಿ ರೂ.ಮೌಲ್ಯದ ಜಾಗ ವಶ


ನಾಗವಾರ ಸರ್ವೆ ನಂಬರ್‌ 32/33ರಲ್ಲಿ ಒಟ್ಟು 5.4 ಗುಂಟೆ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಫೆಡರೇಷನ್‌ ಒತ್ತುವರಿ ಮಾಡಿಕೊಂಡ ಸುಮಾರು 6 ಕೋಟಿ ರೂ.ಮೌಲ್ಯದ 180 ಮೀಟರ್ ಸಹ ಸೇರಿದೆ. ಈ ಎಲ್ಲ ಒತ್ತುವರಿ ಜಾಗವನ್ನು ಬಿಬಿಎಂಪಿ ಪೂರ್ವ ವಿಭಾಗದ ಮುಖ್ಯ ಎಂಜಿನಿಯರ್ ಪ್ರಸಾದ್ ನೇತೃತ್ವದ ಬಿಬಿಎಂಪಿ ಅಧಿಕಾರಿಗಳ ತಂಡ ತೆರವುಗೊಳಿಸಿದೆ.

'ಈ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣವಾಗಿರಲಿಲ್ಲ. ಖಾಲಿ ಜಾಗವನ್ನು ರಾಜಕಾಲುವೆ ಪಕ್ಕದಲ್ಲಿಯೇ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಲಾಗಿತ್ತು. ಇದೀಗ ಕಾಂಪೌಂಡನ್ನು ಮಾತ್ರ ತೆರವುಗೊಳಿಸಲಾಗಿದೆ,' ಎಂದು ಬಿಬಿಎಂಪಿ ಬೃಹತ್ ನೀರುಗಾಲುವೆ ಚೀಫ್ ಎಂಜಿನಿಯರ್ ಸಿದ್ದೇಗೌಡ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ