ದೇವನಹಳ್ಳಿಯಲ್ಲಿ ಮಹಿಳೆಯರು, ಮಕ್ಕಳಿಂದ ಪ್ರಾರ್ಥನೆ
ಬೆಂಗಳೂರು ಗ್ರಾಮಾಂತರ/ಕುಂದಾಣ : ರಂಜಾನ್ ಹಬ್ಬದ ಅಂಗವಾಗಿ ದೇವನಹಳ್ಳಿ ಪಟ್ಟಣದ ಜಾಮೀಯ ಮಸೀದಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಸೌದೀ ಅರೇಬಿಯಾ ಮಾದರಿಯಲ್ಲಿ ದೇವನಹಳ್ಳಿಯಲ್ಲಿ ರಂಜಾನ್ ಆಚರಣೆ ಮಾಡಲಾಗಿದೆ. ಸತತ 10 ವರ್ಷದಿಂದ ಜಾರಿಯಲ್ಲಿ ಬಂದಂತಹ ಮುಸ್ಲಲ್ಮಾನರ ಪವಿತ್ರ ಹಬ್ಬಗಳಾದ ಬಕ್ರೀದ್ ಸಹ ಇದೇ ರೀತಿಯಲ್ಲಿ ಆಚರಿಸುವುದುಂಟು.
ಮುಸಲ್ಮಾನರು ಪ್ರಾರ್ಥನೆ ಬಳಿಕ ಪ್ರತಿಯೊಬ್ಬರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಮಾಜ್ ಮುಗಿಸಿ ಬರುವವರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಇಲ್ಲಿ ಮತ್ತೊಂದು ವಿಶೇಷವೆಂದರೆ ಮಹಿಳೆಯರು ಸಹ ಈದ್ಗಾ ಮೈದಾನದಲ್ಲಿ ಅಲ್ಲಾಹನಿಗೆ ಪ್ರಾರ್ಥನೆ ಮಾಡಲು ಬರುತ್ತಾರೆ.
ಶಾಂತಿಗೆ ಒತ್ತು: ಜಾಮೀಯ ಅಹಲೇ ಅಹದೀಸ್ (ಸುನ್ನಿ) ಮಸೀದಿಯ ಮೌಲ್ವಿ ಅಬ್ದುಲ್ ಖುದ್ದೂಸ್ ಮಾತನಾಡಿ, ಶಾಂತಿ ಮತ್ತು ಸೌಹಾರ್ದತೆಗೆ ಒತ್ತು ನೀಡುವ ಧರ್ಮ ಇಸ್ಲಾಂ ಧರ್ಮ. ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಶ್ರದ್ಧಾ, ಭಕ್ತಿಯಿಂದ ರಂಜಾನ್ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕನ್ನಮಂಗಲಪಾಳ್ಯದಲ್ಲಿರುವ ಆಶಿಯಾನ ವೃದ್ಧಾಶ್ರಮದವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಜಾಮೀಯ ಮಸೀದಿಯ ಪ್ರಧಾನ ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ, ಮಾಜಿ ಪುರಸಭಾ ಉಪಾಧ್ಯಕ್ಷ ಸದ್ರು ಹುಸೇನ್, ಮುಖಂಡರಾದ ಹೈದರ್ಸಾಬ್, ಪಾಚಲ್ಸಾಬ್, ಷಂಶೀರ್, ಬಿದರಹಳ್ಳಿಯ ಮೊಹಮ್ಮದ್ ಅಲಿ, ಮತ್ತಿತರರು ಇದ್ದರು.
ಬೆಂಗಳೂರು ಗ್ರಾಮಾಂತರ/ಕುಂದಾಣ : ರಂಜಾನ್ ಹಬ್ಬದ ಅಂಗವಾಗಿ ದೇವನಹಳ್ಳಿ ಪಟ್ಟಣದ ಜಾಮೀಯ ಮಸೀದಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಸೌದೀ ಅರೇಬಿಯಾ ಮಾದರಿಯಲ್ಲಿ ದೇವನಹಳ್ಳಿಯಲ್ಲಿ ರಂಜಾನ್ ಆಚರಣೆ ಮಾಡಲಾಗಿದೆ. ಸತತ 10 ವರ್ಷದಿಂದ ಜಾರಿಯಲ್ಲಿ ಬಂದಂತಹ ಮುಸ್ಲಲ್ಮಾನರ ಪವಿತ್ರ ಹಬ್ಬಗಳಾದ ಬಕ್ರೀದ್ ಸಹ ಇದೇ ರೀತಿಯಲ್ಲಿ ಆಚರಿಸುವುದುಂಟು.
ಮುಸಲ್ಮಾನರು ಪ್ರಾರ್ಥನೆ ಬಳಿಕ ಪ್ರತಿಯೊಬ್ಬರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಮಾಜ್ ಮುಗಿಸಿ ಬರುವವರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಇಲ್ಲಿ ಮತ್ತೊಂದು ವಿಶೇಷವೆಂದರೆ ಮಹಿಳೆಯರು ಸಹ ಈದ್ಗಾ ಮೈದಾನದಲ್ಲಿ ಅಲ್ಲಾಹನಿಗೆ ಪ್ರಾರ್ಥನೆ ಮಾಡಲು ಬರುತ್ತಾರೆ.
ಶಾಂತಿಗೆ ಒತ್ತು: ಜಾಮೀಯ ಅಹಲೇ ಅಹದೀಸ್ (ಸುನ್ನಿ) ಮಸೀದಿಯ ಮೌಲ್ವಿ ಅಬ್ದುಲ್ ಖುದ್ದೂಸ್ ಮಾತನಾಡಿ, ಶಾಂತಿ ಮತ್ತು ಸೌಹಾರ್ದತೆಗೆ ಒತ್ತು ನೀಡುವ ಧರ್ಮ ಇಸ್ಲಾಂ ಧರ್ಮ. ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಶ್ರದ್ಧಾ, ಭಕ್ತಿಯಿಂದ ರಂಜಾನ್ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕನ್ನಮಂಗಲಪಾಳ್ಯದಲ್ಲಿರುವ ಆಶಿಯಾನ ವೃದ್ಧಾಶ್ರಮದವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಜಾಮೀಯ ಮಸೀದಿಯ ಪ್ರಧಾನ ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ, ಮಾಜಿ ಪುರಸಭಾ ಉಪಾಧ್ಯಕ್ಷ ಸದ್ರು ಹುಸೇನ್, ಮುಖಂಡರಾದ ಹೈದರ್ಸಾಬ್, ಪಾಚಲ್ಸಾಬ್, ಷಂಶೀರ್, ಬಿದರಹಳ್ಳಿಯ ಮೊಹಮ್ಮದ್ ಅಲಿ, ಮತ್ತಿತರರು ಇದ್ದರು.