ಆ್ಯಪ್ನಗರ

ಸಂಚಾರಿ ಪೊಲೀಸರಿಂದ ಕುಸಿಯುವ ಹಂತದ ಸೇತುವೆ ದುರಸ್ತಿ!

ಕುಸಿಯುವ ಹಂತದಲ್ಲಿದ್ದ ರಸ್ತೆ ಸೇತುವೆಯನ್ನು ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರಿಂದ ತಾಲೂಕಿನ ಸಂಚಾರ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿಗಳೇ ದುರಸ್ತಿಗೊಳಿಸಿ ಮಾದರಿ ಕಾರ‍್ಯ ಮಾಡಿದ್ದಾರೆ.

Vijaya Karnataka 13 Jun 2019, 5:00 am
ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ | ಪೊಲೀಸರ ಕಾರ‍್ಯಕ್ಕೆ ಜನಮೆಚ್ಚುಗೆ
Vijaya Karnataka Web road bridge repaired by traffic police
ಸಂಚಾರಿ ಪೊಲೀಸರಿಂದ ಕುಸಿಯುವ ಹಂತದ ಸೇತುವೆ ದುರಸ್ತಿ!


ನೆಲಮಂಗಲ:
ಕುಸಿಯುವ ಹಂತದಲ್ಲಿದ್ದ ರಸ್ತೆ ಸೇತುವೆಯನ್ನು ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ವಹಿಸಿದ್ದರಿಂದ ತಾಲೂಕಿನ ಸಂಚಾರ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿಗಳೇ ದುರಸ್ತಿಗೊಳಿಸಿ ಮಾದರಿ ಕಾರ‍್ಯ ಮಾಡಿದ್ದಾರೆ.

ಪಟ್ಟಣದ ಸೊಂಡೆಕೊಪ್ಪ ಬೈಪಾಸ್‌ ವೃತ್ತದ ತಾವರೆಕೆರೆ ರಸ್ತೆಯಲ್ಲಿರುವ ರಸ್ತೆ ಸೇತುವೆಯು ಭಾರಿ ವಾಹನಗಳ ಸಂಚಾರದಿಂದ ಕುಸಿದು ಬೀಳುವ ಹಂತ ತಲುಪಿತ್ತು. ಇದರ ಬಗ್ಗೆ ವಾರಗಳಾದರೂ ಲೋಕೋಪಯೋಗಿ ಇಲಾಖೆಯ ಯಾವುದೇ ಅಧಿಕಾರಿಗಳು ದುರಸ್ತಿ ಮಾಡಿಸಲು ಮುಂದಾಗಿರಲಿಲ್ಲ, ಈ ಮಾರ್ಗದಲ್ಲಿ ಹೆಚ್ಚು ವಾಹನಗಳು ಸಂಚರಿಸುವುದರಿಂದ ದಿನೇ ದಿನೇ ಸೇತುವೆ ಕುಸಿಯುತ್ತಾ ಹಳ್ಳ ಬೀಳುವ ಪರಿಸ್ಥಿತಿ ನಿರ್ಮಾಣವಾಗಿ ವಾಹನ ಸವಾರರು ಭಯದಲ್ಲಿ ಸಂಚರಿಸುವಂತಾಗಿತ್ತು.

ವಾಹನ ಸವಾರರ ಆತಂಕ ಹಾಗೂ ಸೇತುವೆ ಕುಸಿಯುತ್ತಿರುವುದನ್ನು ಮನಗಂಡ ತಾಲೂಕಿನ ಸಂಚಾರಿಪೊಲೀಸ್‌ಠಾಣೆ ಸಬ್‌ಇನ್‌ಸ್ಪೇಕ್ಟರ್‌ ಕೃಷ್ಣ ಕುಮಾರ್‌ ಹಾಗೂ ಸಿಬ್ಬಂದಿಗಳು ಕುಸಿಯುತ್ತಿದ್ದ ಸೇತುವೆಯನ್ನು ದುರಸ್ಥಿಗೊಳಿಸಿ ಕುಸಿದಿದ್ದ ಸೇತುವೆಯ ಜಾಗಕ್ಕೆ ಡಾಂಬರೀಕರಣ ಮಾಡಿಸಿದ್ದಾರೆ. ಇದರಿಂದ ವಾಹನ ಸವಾರರು ಯಾವುದೇ ಆತಂಕವಿಲ್ಲದೇ ಸಂಚರಿಸುವಂತಾಗಿದೆ. ಈ ಕಾರ‍್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.
---
ಹೆಚ್ಚು ವಾಹನ ಸಂಚರಿಸುವ ರಸ್ತೆಯ ಸೇತುವೆ ಕುಸಿಯುತ್ತಿರುವುದನ್ನು ಕಂಡು ಎದುರಾಗಬಹುದಾದ ಅಪಾಯ ತಪ್ಪಿಸಲು ನಮ್ಮ ಸಿಬ್ಬಂದಿಗಳ ಸಹಕಾರದಿಂದ ದುರಸ್ತಿಗೊಳಿಸಿದ್ದೇವೆ, ನಮ್ಮ ಇಲಾಖೆಯ ಕೆಲಸವಲ್ಲದಿದ್ದರೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಕೈಲಾದ ಸಹಾಯ ಮಾಡಿದ್ದೇವೆ.

-ಕೃಷ್ಣಕುಮಾರ್‌, ಸಂಚಾರಿ ಪೊಲೀಸ್‌ ಇನ್ಸ್‌ಪೆಕ್ಟರ್‌


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ