ಸೂಲಿಬೆಲೆ: ಗ್ರಾಮೀಣ ಭಾಗದ ಜೀವ ಸಂಕುಲಕ್ಕೆ ಆಸರೆಯಾಗಿರುವ ಕೆರೆಗಳಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯದ ಘಾಟು ಹೆಚ್ಚಾಗುತ್ತಿದೆ.
ರಾತ್ರೋರಾತ್ರಿ ದುಷ್ಕರ್ಮಿಗಳು ಕೆರೆ, ರಸ್ತೆ ಬದಿ ಹಾಗೂ ಅರಣ್ಯದ ಅಂಚಿನಲ್ಲಿ ತ್ಯಾಜ್ಯವನ್ನು ತಂದು ಹಾಕಿ ಬೆಂಕಿ ಹಚ್ಚಿ ಪರಾರಿಯಾಗುತ್ತಿರುವುದರಿಂದ ತ್ಯಾಜ್ಯದಿಂದ ಹೊರ ಬರುವ ಘಾಟು ವಾಸನೆ ಅತ್ತ ಪರಿಸರಕ್ಕೂ, ಇತ್ತ ಪ್ರಾಣಿ ಪಕ್ಷಿಗಳಿಗೂ ಸಂಚಕಾರವನ್ನು ತಂದೊಡ್ಡುತ್ತಿದೆ.
ಮಳೆಗಾಲದಲ್ಲಿ ಕೆರೆ ಕುಂಟೆಗಳು ತುಂಬಿ ವರ್ಷಪೂರ್ತಿ ನೀರು ಕಾಣುವ ಸೌಭಾಗ್ಯ ಇತ್ತೀಚಿನ ವರ್ಷಗಳಲ್ಲಿ ಕಾಣಲಾಗುತ್ತಿಲ್ಲ. ಬೀಳುವ ಅಲ್ಪಸ್ವಲ್ಪ ಮಳೆಯ ನೀರು ಕೆರೆ ಕುಂಟೆಗಳನ್ನು ತಲುಪುವದೇ ಇಲ್ಲ. ನೀರು ಸರಾಗವಾಗಿ ಕೆರೆ ಕುಂಟೆಗಳಿಗೆ ಹರಿದು ಬರಲು ಇರುವ ರಾಜ ಕಾಲುವೆಗಳು ಒತ್ತವರಿಗೆ ಒಳಗಾಗಿವೆ.
ಅಕ್ಕಪಕ್ಕದ ಜಮೀನುಗಳ ಮಾಲೀಕರು ನೀರು ಬರುವ ಕಾಲುವೆಗಳಿಗೆ ಕೊಕ್ಕೆಯಿಟ್ಟಿರುವುದರಿಂದ ವರ್ಷದಲ್ಲಿ ಆಗೊಮ್ಮೆ ಈಗೊಮ್ಮೆ ಸುರಿಯವ ಮಳೆಯ ನೀರು ಅಲ್ಲೇ ಇಂಗಿ ಹೋಗುತ್ತದೆ. ಸ್ವಲ್ಪ ನೀರು ಬಂದರೂ ಕೆರೆಯ ಹಳ್ಳ-ಕೊಳ್ಳಗಳಲ್ಲಿ ಉಳಿದು ಕೆಲ ದಿನಗಳಲ್ಲಿಯೇ ಅದು ಇಂಗಿ ಹೋಗುತ್ತದೆ. ನೀರಿಲ್ಲದೆ ಕೆರೆಗಳು ಖಾಲಿಯಾಗಿರುವುದನ್ನೇ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಕೆರೆ ಮತ್ತು ಅರಣ್ಯ ಪ್ರದೇಶಗಳಲ್ಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ.
ಕೆರೆಗಳಲ್ಲಿ, ಅರಣ್ಯ ಅಂಚಿನಲ್ಲಿ: ಹೊಸಕೋಟೆ ತಾಲೂಕಿನಲ್ಲಿ ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ ಹಲವು ಕೆರೆಗಳಿಗೆ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಕುಂಟೆಗಳಿದ್ದು ಸಾಕಷ್ಟು ಕೆರೆ ಕುಂಟೆಗಳು ರಸ್ತೆ ಬದಿಯಲ್ಲಿರುವುದರಿಂದ ರಾತ್ರಿ ವೇಳೆ ದುಷ್ಕರ್ಮಿಗಳು ವಾಹನಗಳಲ್ಲಿ ತ್ಯಾಜ್ಯಗಳನ್ನು ತಂದು ಅಲ್ಲಿ ಸುರಿಯುತ್ತಿದ್ದಾರೆ. ಸುರಿದ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಹೋಗುವುದರಿಂದ ರಸ್ತೆಯಲ್ಲಿ ಬರೋ ವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ. ಅಲ್ಲದೆ ಕೆರೆ ಪರಿಸರ ಹಾಳಾಗುತ್ತಿದೆ. ಇನ್ನೂ ಕೆಲವರು ರಸ್ತೆ ಬದಿಯಲ್ಲಿರುವ ಅರಣ್ಯದ ಅಂಚಿಗೂ ತ್ಯಾಜ್ಯವನ್ನು ತಂದು ಸುಡುತ್ತಿದ್ದಾರೆ. ಈ ಘಾಟು ವಾಸನೆಗೆ ಅರಣ್ಯದಲ್ಲಿನ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳಿಗೂ ಸಂಚಕಾರ ಉಂಟಾಗಿದೆ.
ಬೇಲಿ ಇಲ್ಲ: ಗ್ರಾಮೀಣ ಭಾಗದಲ್ಲಿರುವ ಸಾಕಷ್ಟು ಕೆರೆ,ಕುಂಟೆಗಳಿಗೆ ಬೇಲಿಯ ಭದ್ರತೆಯಿಲ್ಲ. ವಿಶಾಲವಾಗಿ ಹರಡಿಕೊಂಡಿರುವುದರಿಂದ ವಾಹನಗಳನ್ನು ಯಾವುದೇ ಮೂಲೆಯಿಂದ ಕೆರೆಗಳಿಗೆ ನುಗ್ಗಿಸಿ ಕಸ ಸುರಿಯುತ್ತಾರೆ. ಹೊಸಕೋಟೆಗೆ ಬೆಂಗಳೂರು ತೀರ ಹತ್ತಿರದಲ್ಲಿರುವ ಕಾರಣ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಗಳು, ಬಿಬಿಎಂಪಿ ಇತ್ಯಾದಿ ಕಡೆಯಿಂದ ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿಗಳು ಹೊಸಕೋಟೆ ನಿರ್ಜನ ಪ್ರದೇಶ ಹಾಗೂ ಕೆರೆ ಕುಂಟೆಗಳು, ಅರಣ್ಯದ ಅಂಚಿನಲ್ಲಿ ಸುರಿದು ಬೆಂಕಿ ಹಾಕುತ್ತಾರೆ. ರಾತ್ರಿ ಬೆಂಕಿ ಹಚ್ಚಿ ಹೋಗುವುದರಿಂದ ಬೆಳಗಾಗುವಷ್ಟರಲ್ಲಿ ಅದು ಸುಟ್ಟು ಬೂದಿಯಾಗಿರುತ್ತದೆ. ಇಂಥ ಕೃತ್ಯಗಳಿಗೆ ಕೈ ಹಾಕುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜನರಿಗೂ ಭಯ: ರಾತ್ರಿ ವೇಳೆ ಇಂಥ ದುಷ್ಕೃತ್ಯಗಳನ್ನು ಎಸೆಗಿ ಯಾರ ಕೈಗೂ ಸಿಗದೆ ಪರಾರಿಯಾಗುವ ವ್ಯಕ್ತಿಗಳು, ತ್ಯಾಜ್ಯದ ವಾಹನಗಳನ್ನು ಹಿಡಿದುಕೊಳ್ಳುವುದು ಅಪಾಯಕಾರಿ ಕೆಲಸವಾಗಿದೆ. ಹಾಗೊಮ್ಮೆ ತ್ಯಾಜ್ಯದ ವಾಹನಗಳನ್ನು ಕಂಡರೂ ಜನ ಹೋಗಿ ಹಿಡಿದುಕೊಳ್ಳಲು ಭಯ ಪಡುತ್ತಾರೆ. ರಾತ್ರಿ ವೇಳೆ ಕಾರಣ ಕೇಳಲು ಬರುವ ಜನರ ಮೇಲೆ ಆ ವ್ಯಕ್ತಿಗಳು ತಿರುಗಿ ಬಿದ್ದು ತೊಂದರೆಯನ್ನುಂಟು ಮಾಡುವುದೋ, ವಾಹನಗಳನ್ನು ಅವರ ಮೇಲೆಯೇ ಹತ್ತಿಸಿಕೊಂಡು ಪರಾರಿಯಾಗುವ ಧಾವಂತದಲ್ಲಿ ಇರುತ್ತಾರೆ. ಹೀಗಾಗಿ ಜನ ಕೂಡ ಹೋಗಿ ಕೇಳಲು ಭಯ ಪಡುತ್ತಾರೆ.
ಹೇಳೋರಿಲ್ಲ, ಕೇಳೋರಿಲ್ಲ: ಕೆರೆ ಕುಂಟೆ, ಅರಣ್ಯದ ಅಂಚಿನಲ್ಲಿ ನಡೆಯುವ ಇಂಥ ದುಷ್ಕೃತ್ಯಗಳನ್ನು ತಡೆಯಲು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳಾಗಲಿ, ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳೋರಿಲ್ಲ, ಕೇಳೋರಿಲ್ಲದ ಕಾರಣ ದಿನೇ ದಿನೆ ಇಂಥ ದುಷ್ಕೃತ್ಯಗಳು ಹೆಚ್ಚುತ್ತಿವೆ. ಸಂಬಂಧಪಟ್ಟವರು ಇದರ ಬಗ್ಗೆ ಗಮನಹರಿಸಿ ಕೆರೆ ಕುಂಟೆ, ಅರಣ್ಯಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೊಸಕೋಟೆಯಿಂದ ಸೂಲಿಬೆಲೆಗೆ ಬರುವ ರಾಷ್ಟ್ರೀಯ ಹೆದ್ದಾರಿ 207 ಬದಿಯಲ್ಲಿ ಬರುವ ಆನೇಕ ಕೆರೆಗಳಲ್ಲಿ ತ್ಯಾಜ್ಯದ ಘಾಟು ಕಂಡು ಬರುತ್ತಿದೆ.ಸುಟ್ಟ ತ್ಯಾಜ್ಯದ ಅಪಾಯಕಾರಿ ವಸ್ತುಗಳು ಅಲ್ಪಸ್ವಲ್ಪ ಅಲ್ಲೇ ಉಳಿಯುವುದರಿಂದ ಮಳಗಾಲದ ವೇಳೆ ನೀರಿನೊಂದಿಗೆ ಬೆರತು ಮೂಕ ಪ್ರಾಣಿಗಳಿಗೆ ಅಪಾಯವನ್ನು ತಂದೊಡ್ಡಲಿವೆ.ಇದರ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು.
-ಪ್ರಕಾಶ್, ನಾಗರಿಕ, ಸೂಲಿಬೆಲೆ
ರಾತ್ರೋರಾತ್ರಿ ದುಷ್ಕರ್ಮಿಗಳು ಕೆರೆ, ರಸ್ತೆ ಬದಿ ಹಾಗೂ ಅರಣ್ಯದ ಅಂಚಿನಲ್ಲಿ ತ್ಯಾಜ್ಯವನ್ನು ತಂದು ಹಾಕಿ ಬೆಂಕಿ ಹಚ್ಚಿ ಪರಾರಿಯಾಗುತ್ತಿರುವುದರಿಂದ ತ್ಯಾಜ್ಯದಿಂದ ಹೊರ ಬರುವ ಘಾಟು ವಾಸನೆ ಅತ್ತ ಪರಿಸರಕ್ಕೂ, ಇತ್ತ ಪ್ರಾಣಿ ಪಕ್ಷಿಗಳಿಗೂ ಸಂಚಕಾರವನ್ನು ತಂದೊಡ್ಡುತ್ತಿದೆ.
ಮಳೆಗಾಲದಲ್ಲಿ ಕೆರೆ ಕುಂಟೆಗಳು ತುಂಬಿ ವರ್ಷಪೂರ್ತಿ ನೀರು ಕಾಣುವ ಸೌಭಾಗ್ಯ ಇತ್ತೀಚಿನ ವರ್ಷಗಳಲ್ಲಿ ಕಾಣಲಾಗುತ್ತಿಲ್ಲ. ಬೀಳುವ ಅಲ್ಪಸ್ವಲ್ಪ ಮಳೆಯ ನೀರು ಕೆರೆ ಕುಂಟೆಗಳನ್ನು ತಲುಪುವದೇ ಇಲ್ಲ. ನೀರು ಸರಾಗವಾಗಿ ಕೆರೆ ಕುಂಟೆಗಳಿಗೆ ಹರಿದು ಬರಲು ಇರುವ ರಾಜ ಕಾಲುವೆಗಳು ಒತ್ತವರಿಗೆ ಒಳಗಾಗಿವೆ.
ಅಕ್ಕಪಕ್ಕದ ಜಮೀನುಗಳ ಮಾಲೀಕರು ನೀರು ಬರುವ ಕಾಲುವೆಗಳಿಗೆ ಕೊಕ್ಕೆಯಿಟ್ಟಿರುವುದರಿಂದ ವರ್ಷದಲ್ಲಿ ಆಗೊಮ್ಮೆ ಈಗೊಮ್ಮೆ ಸುರಿಯವ ಮಳೆಯ ನೀರು ಅಲ್ಲೇ ಇಂಗಿ ಹೋಗುತ್ತದೆ. ಸ್ವಲ್ಪ ನೀರು ಬಂದರೂ ಕೆರೆಯ ಹಳ್ಳ-ಕೊಳ್ಳಗಳಲ್ಲಿ ಉಳಿದು ಕೆಲ ದಿನಗಳಲ್ಲಿಯೇ ಅದು ಇಂಗಿ ಹೋಗುತ್ತದೆ. ನೀರಿಲ್ಲದೆ ಕೆರೆಗಳು ಖಾಲಿಯಾಗಿರುವುದನ್ನೇ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಕೆರೆ ಮತ್ತು ಅರಣ್ಯ ಪ್ರದೇಶಗಳಲ್ಲಿನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ.
ಕೆರೆಗಳಲ್ಲಿ, ಅರಣ್ಯ ಅಂಚಿನಲ್ಲಿ: ಹೊಸಕೋಟೆ ತಾಲೂಕಿನಲ್ಲಿ ಜಿಪಂ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧೀನದಲ್ಲಿ ಹಲವು ಕೆರೆಗಳಿಗೆ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಕುಂಟೆಗಳಿದ್ದು ಸಾಕಷ್ಟು ಕೆರೆ ಕುಂಟೆಗಳು ರಸ್ತೆ ಬದಿಯಲ್ಲಿರುವುದರಿಂದ ರಾತ್ರಿ ವೇಳೆ ದುಷ್ಕರ್ಮಿಗಳು ವಾಹನಗಳಲ್ಲಿ ತ್ಯಾಜ್ಯಗಳನ್ನು ತಂದು ಅಲ್ಲಿ ಸುರಿಯುತ್ತಿದ್ದಾರೆ. ಸುರಿದ ತ್ಯಾಜ್ಯಕ್ಕೆ ಬೆಂಕಿ ಹಚ್ಚಿ ಹೋಗುವುದರಿಂದ ರಸ್ತೆಯಲ್ಲಿ ಬರೋ ವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ. ಅಲ್ಲದೆ ಕೆರೆ ಪರಿಸರ ಹಾಳಾಗುತ್ತಿದೆ. ಇನ್ನೂ ಕೆಲವರು ರಸ್ತೆ ಬದಿಯಲ್ಲಿರುವ ಅರಣ್ಯದ ಅಂಚಿಗೂ ತ್ಯಾಜ್ಯವನ್ನು ತಂದು ಸುಡುತ್ತಿದ್ದಾರೆ. ಈ ಘಾಟು ವಾಸನೆಗೆ ಅರಣ್ಯದಲ್ಲಿನ ಸಣ್ಣಪುಟ್ಟ ಪ್ರಾಣಿ ಪಕ್ಷಿಗಳಿಗೂ ಸಂಚಕಾರ ಉಂಟಾಗಿದೆ.
ಬೇಲಿ ಇಲ್ಲ: ಗ್ರಾಮೀಣ ಭಾಗದಲ್ಲಿರುವ ಸಾಕಷ್ಟು ಕೆರೆ,ಕುಂಟೆಗಳಿಗೆ ಬೇಲಿಯ ಭದ್ರತೆಯಿಲ್ಲ. ವಿಶಾಲವಾಗಿ ಹರಡಿಕೊಂಡಿರುವುದರಿಂದ ವಾಹನಗಳನ್ನು ಯಾವುದೇ ಮೂಲೆಯಿಂದ ಕೆರೆಗಳಿಗೆ ನುಗ್ಗಿಸಿ ಕಸ ಸುರಿಯುತ್ತಾರೆ. ಹೊಸಕೋಟೆಗೆ ಬೆಂಗಳೂರು ತೀರ ಹತ್ತಿರದಲ್ಲಿರುವ ಕಾರಣ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಗಳು, ಬಿಬಿಎಂಪಿ ಇತ್ಯಾದಿ ಕಡೆಯಿಂದ ತ್ಯಾಜ್ಯ ವಿಲೇವಾರಿ ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿಗಳು ಹೊಸಕೋಟೆ ನಿರ್ಜನ ಪ್ರದೇಶ ಹಾಗೂ ಕೆರೆ ಕುಂಟೆಗಳು, ಅರಣ್ಯದ ಅಂಚಿನಲ್ಲಿ ಸುರಿದು ಬೆಂಕಿ ಹಾಕುತ್ತಾರೆ. ರಾತ್ರಿ ಬೆಂಕಿ ಹಚ್ಚಿ ಹೋಗುವುದರಿಂದ ಬೆಳಗಾಗುವಷ್ಟರಲ್ಲಿ ಅದು ಸುಟ್ಟು ಬೂದಿಯಾಗಿರುತ್ತದೆ. ಇಂಥ ಕೃತ್ಯಗಳಿಗೆ ಕೈ ಹಾಕುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಜನರಿಗೂ ಭಯ: ರಾತ್ರಿ ವೇಳೆ ಇಂಥ ದುಷ್ಕೃತ್ಯಗಳನ್ನು ಎಸೆಗಿ ಯಾರ ಕೈಗೂ ಸಿಗದೆ ಪರಾರಿಯಾಗುವ ವ್ಯಕ್ತಿಗಳು, ತ್ಯಾಜ್ಯದ ವಾಹನಗಳನ್ನು ಹಿಡಿದುಕೊಳ್ಳುವುದು ಅಪಾಯಕಾರಿ ಕೆಲಸವಾಗಿದೆ. ಹಾಗೊಮ್ಮೆ ತ್ಯಾಜ್ಯದ ವಾಹನಗಳನ್ನು ಕಂಡರೂ ಜನ ಹೋಗಿ ಹಿಡಿದುಕೊಳ್ಳಲು ಭಯ ಪಡುತ್ತಾರೆ. ರಾತ್ರಿ ವೇಳೆ ಕಾರಣ ಕೇಳಲು ಬರುವ ಜನರ ಮೇಲೆ ಆ ವ್ಯಕ್ತಿಗಳು ತಿರುಗಿ ಬಿದ್ದು ತೊಂದರೆಯನ್ನುಂಟು ಮಾಡುವುದೋ, ವಾಹನಗಳನ್ನು ಅವರ ಮೇಲೆಯೇ ಹತ್ತಿಸಿಕೊಂಡು ಪರಾರಿಯಾಗುವ ಧಾವಂತದಲ್ಲಿ ಇರುತ್ತಾರೆ. ಹೀಗಾಗಿ ಜನ ಕೂಡ ಹೋಗಿ ಕೇಳಲು ಭಯ ಪಡುತ್ತಾರೆ.
ಹೇಳೋರಿಲ್ಲ, ಕೇಳೋರಿಲ್ಲ: ಕೆರೆ ಕುಂಟೆ, ಅರಣ್ಯದ ಅಂಚಿನಲ್ಲಿ ನಡೆಯುವ ಇಂಥ ದುಷ್ಕೃತ್ಯಗಳನ್ನು ತಡೆಯಲು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳಾಗಲಿ, ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳೋರಿಲ್ಲ, ಕೇಳೋರಿಲ್ಲದ ಕಾರಣ ದಿನೇ ದಿನೆ ಇಂಥ ದುಷ್ಕೃತ್ಯಗಳು ಹೆಚ್ಚುತ್ತಿವೆ. ಸಂಬಂಧಪಟ್ಟವರು ಇದರ ಬಗ್ಗೆ ಗಮನಹರಿಸಿ ಕೆರೆ ಕುಂಟೆ, ಅರಣ್ಯಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೊಸಕೋಟೆಯಿಂದ ಸೂಲಿಬೆಲೆಗೆ ಬರುವ ರಾಷ್ಟ್ರೀಯ ಹೆದ್ದಾರಿ 207 ಬದಿಯಲ್ಲಿ ಬರುವ ಆನೇಕ ಕೆರೆಗಳಲ್ಲಿ ತ್ಯಾಜ್ಯದ ಘಾಟು ಕಂಡು ಬರುತ್ತಿದೆ.ಸುಟ್ಟ ತ್ಯಾಜ್ಯದ ಅಪಾಯಕಾರಿ ವಸ್ತುಗಳು ಅಲ್ಪಸ್ವಲ್ಪ ಅಲ್ಲೇ ಉಳಿಯುವುದರಿಂದ ಮಳಗಾಲದ ವೇಳೆ ನೀರಿನೊಂದಿಗೆ ಬೆರತು ಮೂಕ ಪ್ರಾಣಿಗಳಿಗೆ ಅಪಾಯವನ್ನು ತಂದೊಡ್ಡಲಿವೆ.ಇದರ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು.
-ಪ್ರಕಾಶ್, ನಾಗರಿಕ, ಸೂಲಿಬೆಲೆ