ಆ್ಯಪ್ನಗರ

ಮತ ಚಲಾವಣೆ ಬಹಿರಂಗ: ಬಿಜೆಪಿ ದೂರು

ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಆರಂಭವಾಗಿದೆ ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಮತದಾನದ ನಡೆಯುತ್ತಿದೆ ಇತ್ತ ಚಿಕ್ಕಬಳ್ಳಾಪುರ ಕೆ ್ಷೕತ್ರದಲ್ಲಿ ವ್ಯಕ್ತಿಯೋರ್ವ ಮತದಾನ ಮಾಡಿದ ಪೋಟೋ ಒಂದು ವೈರಲ್‌ ಆಗಿದೆ.

Vijaya Karnataka 20 Apr 2019, 5:00 am
  1. ನಂದಗುಡಿ : ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಆರಂಭವಾಗಿದೆ ರಾಜ್ಯದಲ್ಲಿ 14 ಕ್ಷೇತ್ರಗಳಲ್ಲಿ ಮತದಾನದ ನಡೆಯುತ್ತಿದೆ ಇತ್ತ ಚಿಕ್ಕಬಳ್ಳಾಪುರ ಕೆ ್ಷೕತ್ರದಲ್ಲಿ ವ್ಯಕ್ತಿಯೋರ್ವ ಮತದಾನ ಮಾಡಿದ ಪೋಟೋ ಒಂದು ವೈರಲ್‌ ಆಗಿದೆ.
Vijaya Karnataka Web secrete votiong uploaded in social media bjp compliant
ಮತ ಚಲಾವಣೆ ಬಹಿರಂಗ: ಬಿಜೆಪಿ ದೂರು

ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಪಂ ವ್ಯಾಪ್ತಿಯ ಆರೇಹಳ್ಳಿ ಮತಗಟ್ಟೆ ಸಂಖ್ಯೆ 12 ರಲ್ಲಿ ಪ್ರಸಾದ್‌ ಬಿನ್‌ ಚಿಕ್ಕಪಿಳ್ಳಪ್ಪ ಎಂಬಾತ 'ಸಂವಿಧಾನ ವಿರೋಧಿಗಳನ್ನು ಧಿಕ್ಕರಿಸಿದ ಕ್ಷ ಣ' ಎಂಬ ಅಡಿ ಬರಹದೊಂದಿಗೆ ಈ ಪೋಟೊವನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಇದು ಸಾಕಷ್ಟು ಟ್ರೋಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ಗೆ ಮತದಾನ ಮಾಡಿದ ಈ ಪೋಟೋ ವೈರಲ್‌ ಆಗಿದ್ದು ಈ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತದಾನ ಮಾಡುವ ವೇಳೆ ಮತಯಂತ್ರದ ಬಟನ್‌ ಒತ್ತುವ ದೃಶ್ಯವನ್ನು ಸೆರೆ ಹಿಡಿದು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿದ್ದ ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ದೂರು ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಚುನಾವಣಾಧಿಕಾರಿ ರಮೇಶ್‌ ಮತಗಟ್ಟೆಯ ಒಳಗೆ ಮೊಬೈಲ್‌ ಪೋನ್‌ ಒಯ್ಯುವುದನ್ನು ನಿಷೇಧಿಸಲಾಗಿತ್ತು. ಮಾಡಿದ ಮತದಾನವನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದು ಅಪರಾಧ. ಬಿಜೆಪಿ ದೂರಿನ ಬಗ್ಗೆ ಪರಿಶೀಲಿಸಿಸಂಬಂಧಪಟ್ಟ ಪೋಲಿಸ್‌ ಅಧಿಕಾರಿಗಳಿಗೆ ತಪಿತಸ್ಥನ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ