ಆ್ಯಪ್ನಗರ

ಶಂಕರಾಚಾರ್ಯರ ತತ್ವಾದರ್ಶ ಇಂದಿಗೂ ಪ್ರಸ್ತುತ

ಶಂಕರಾಚಾರ್ಯರ ತತ್ವಗಳಲ್ಲಿ ವಿಭಿನ್ನತೆಯಲ್ಲಿ ಏಕತೆಯನ್ನು ಸಾರುವ ಅಂಶಗಳಿದ್ದು, ಭಾವೈಕ್ಯತೆ, ರಾಷ್ಟ್ರೀಯ ಸಮಗ್ರತೆಯ ಚಿಂತನೆಯನ್ನು ಹುಟ್ಟು ಹಾಕುತ್ತವೆ. ಶಂಕರರ ಬ್ರಹ್ಮಸೂತ್ರ, ಉಪನಿಷತ್‌, ಭಾಷ್ಯಗಳನ್ನು ಅಧ್ಯಯನ ಮಾಡುವ ಮೂಲಕ ಅಧ್ಯಾತ್ಮ ಚಿಂತನೆ, ಭಾರತೀಯ ಸನಾತನ ಧರ್ಮದ ಬಗ್ಗೆ ಅಧ್ಯಯನ ಅಗತ್ಯವಿದೆ ಎಂದು ಮುತ್ತೂರಿನ ಶ್ರೀಕಾಂತ್‌ಶರ್ಮ ತಿಳಿಸಿದರು.

Vijaya Karnataka 24 Feb 2019, 5:00 am
ವಿಜಯಪುರ: ಶಂಕರಾಚಾರ್ಯರ ತತ್ವಗಳಲ್ಲಿ ವಿಭಿನ್ನತೆಯಲ್ಲಿ ಏಕತೆಯನ್ನು ಸಾರುವ ಅಂಶಗಳಿದ್ದು, ಭಾವೈಕ್ಯತೆ, ರಾಷ್ಟ್ರೀಯ ಸಮಗ್ರತೆಯ ಚಿಂತನೆಯನ್ನು ಹುಟ್ಟು ಹಾಕುತ್ತವೆ. ಶಂಕರರ ಬ್ರಹ್ಮಸೂತ್ರ, ಉಪನಿಷತ್‌, ಭಾಷ್ಯಗಳನ್ನು ಅಧ್ಯಯನ ಮಾಡುವ ಮೂಲಕ ಅಧ್ಯಾತ್ಮ ಚಿಂತನೆ, ಭಾರತೀಯ ಸನಾತನ ಧರ್ಮದ ಬಗ್ಗೆ ಅಧ್ಯಯನ ಅಗತ್ಯವಿದೆ ಎಂದು ಮುತ್ತೂರಿನ ಶ್ರೀಕಾಂತ್‌ಶರ್ಮ ತಿಳಿಸಿದರು.
Vijaya Karnataka Web shankaracharyas commentary is still present today
ಶಂಕರಾಚಾರ್ಯರ ತತ್ವಾದರ್ಶ ಇಂದಿಗೂ ಪ್ರಸ್ತುತ


ಪಟ್ಟಣದ ರೋಟರಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆದಿ ಶಂಕರಾಚಾರ್ಯರ ಕುರಿತು ಅವರು ಮಾತನಾಡಿದರು.

ಮಹಾದಾರ್ಶನಿಕರಾದ ಆದಿ ಶಂಕರಾಚಾರ್ಯರ ತತ್ವಾ ದರ್ಶಗಳು ಇಂದಿಗೂ ಪ್ರಸ್ತುತವಾದುವು. ಅವರ ಧಾರ್ಮಿಕ ತತ್ವ ವಿಚಾರಗಳು ಏಕತೆ ಸಾರುವ ಅದ್ವೈತ ತತ್ವಜ್ಞಾನವುಳ್ಳವು, ಭಕ್ತಿ ಸಮಾನತೆಯ ಹರಿಕಾರರು ಎಂದರು.

ರೋಟರಿ ಅಧ್ಯಕ್ಷ ಎಸ್‌.ಕುಮಾರಸ್ವಾಮಿ ಮಾತನಾಡಿ, ಪ್ರತಿಯೊಂದು ವಸ್ತುವಿನಲ್ಲಿಯೂ ಭಗವಂತನನ್ನು ಕಾಣುವ ಅದ್ವೈತದ ವಿಶೇಷತೆಯು ಜ್ಞಾನ ಮತ್ತು ಭಕ್ತಿಯ ಮೂಲಕ ಲೌಕಿಕದಿಂದ ಅಲೌಕಿಕದೆಡೆಗೆ ಭಕ್ತರನ್ನು ಕೊಂಡೊಯ್ಯುವ ಮಾರ್ಗವಾಗಿದೆ ಎಂದರು.

ರೋಟರಿ ಲಿಟೆರಸಿ ಕಮಿಟಿ ನಿರ್ದೇಶಕ ಎಚ್‌.ಎಸ್‌.ರುದ್ರೇಶಮೂರ್ತಿ, ಕಾರ್ಯದರ್ಶಿ ವಿ.ಎಸ್‌.ರವಿ, ಮಾಜಿ ಅಧ್ಯಕ್ಷ ಜಿ.ವೀರಭದ್ರಪ್ಪ, ಕೆ.ಸದ್ಯೋಜಾತಪ್ಪ, ಎ.ಎನ್‌.ರಾಮಬಸಪ್ಪ, ಎನ್‌.ಪುಟ್ಟರಾಜು, ವಿ.ವಿ.ಸಿದ್ಧರಾಜು, ಚನ್ನಪ್ಪ, ಎನ್‌.ವಿಜಯರಾಜು, ಪಿ.ಚಂದ್ರಪ್ಪ, ಸಿ.ಬಸಪ್ಪ, ಪ್ರೌಢಶಾಲಾ ಮುಖ್ಯಶಿಕ್ಷ ಕಿ ಎ.ಎಂ.ಮಂಜುಳಾ, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ