ದೊಡ್ಡಬಳ್ಳಾಪುರ: ರಾಜ್ಯ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಜ.17ರಿಂದ 20 ರವರೆಗೆ ತಾಲ್ಲೂಕಿನ ಕನಸವಾಡಿಯಲ್ಲಿ ನಡೆಯಲಿವೆ ಎಂದು ಎಪಿಎಂಸಿ ನಿರ್ದೇಶಕ ಮಂಜುನಾಥ್ ಹೇಳಿದರು.
ತಾಲೂಕಿನ ಕನಸವಾಡಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನಸವಾಡಿಯಲ್ಲಿನ ಶನಿಮಹಾತ್ಮ ದೇವಾಲಯದ ಅರ್ಚಕರಾಗಿದ್ದ ದಿವಂಗತ ಜಿ.ಗೋಪಿನಾಥ್ ಅವರು ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ಆಗಿದ್ದರು. ಅಲ್ಲದೆ ತಾಲೂಕಿನಲ್ಲಿ ಹಲವಾರು ಜನ ವಾಲಿಬಾಲ್ ಸೇರಿದಂತೆ ಇತರೆ ಕ್ರೀಡಾಪಟುಗಳಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡಿ ಬೆಳೆಸಿದ್ದರು. ರಸ್ತೆ ಅಪಘಾತದಲ್ಲಿ ನಿಧನಹೊಂದಿ ಒಂದು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥ ಗೋಪಿನಾಥ್ ಕಪ್ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ವಾಲಿಬಾಲ್ ಅಕಾಡಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಎ ತಂಡಕ್ಕೆ ರಾಜ್ಯದ ನಾನಾ ಭಾಗಗಳಿಂದ ನುರಿತ ತಂಡಗಳು ಆಗಮಿಸಲಿವೆ. ಎ ತಂಡದ ಪಂದ್ಯಾವಳಿಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ. ಬಿ ವಿಭಾಗದಲ್ಲಿ ಸ್ಥಳೀಯ ಆಟಗಾರರು ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಈ ಆಟಗಳು ಬೆಳಗಿನ ವೇಳೆಯಲ್ಲಿ ನಡೆಯಲಿವೆ ಎಂದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಬಿ ವಿಭಾಗದಲ್ಲಿ ಭಾಗವಹಿಸುವ ಆಟಗಾರರು ಜ.10ರ ಒಳಗಾಗಿ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಯಾವುದೇ ಪ್ರವೇಶ ಶುಲ್ಕ ಇಲ್ಲ ಎಂದರು.
ಗೋಪಿನಾಥ ಕಪ್ ವ್ಯವಸ್ಥಾಪಕ ಕೆ.ಎಸ್.ಗಿರೀಶ್ ಮಾತನಾಡಿ, ಎ ತಂಡದಲ್ಲಿ ವಿಜೇತರಿಗೆ ರೂ 50,000, ರನ್ನರ್ ತಂಡಕ್ಕೆ ರೂ 40,000, ದ್ವಿತೀಯ ಬಹುಮಾನ ರೂ 30,000, ರೂ 20,000 ನೀಡಲಾಗುವುದು. ಬಿ ತಂಡದಲ್ಲಿ ವಿಜೇತರಿಗೆ ರೂ 25,000, ರನ್ನರ್ ತಂಡಕ್ಕೆ ರೂ 20,000, ದ್ವಿತೀಯ ಬಹುಮಾನ ರೂ 15,000, ರೂ 10,000 ನೀಡಲಾಗುವುದು. ಇದಲ್ಲದೆ ವಿವಿಧ ವಿಭಾಗಗಳಲ್ಲಿ ವಯಕ್ತಿಕ ನಗದು ಬಹುಮಾನಗಳನ್ನು ಸಹ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ್, ರಾಜ್ಯ ವಾಲಿಬಾಲ್ ಆಟಗಾರ ಇಸ್ತೂರು ಅಶ್ವತ್ಥಗೌಡ, ಹೊನ್ನವಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಗೋಪಾಲ್, ವಿಎಸ್ಎಸ್ಎನ್ ನಿರ್ದೇಶಕ ವಿಶ್ವನಾಥ್, ವಿರೂಪಾಕ್ಷ ಯ್ಯ, ಆನಂದ್ ಇದ್ದರು. ಹೆಚ್ಚಿನ ಮಾಹಿತಿಗೆ 98862 23537, 7337680507.
ತಾಲೂಕಿನ ಕನಸವಾಡಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನಸವಾಡಿಯಲ್ಲಿನ ಶನಿಮಹಾತ್ಮ ದೇವಾಲಯದ ಅರ್ಚಕರಾಗಿದ್ದ ದಿವಂಗತ ಜಿ.ಗೋಪಿನಾಥ್ ಅವರು ರಾಷ್ಟ್ರ ಮಟ್ಟದ ವಾಲಿಬಾಲ್ ಕ್ರೀಡಾಪಟು ಆಗಿದ್ದರು. ಅಲ್ಲದೆ ತಾಲೂಕಿನಲ್ಲಿ ಹಲವಾರು ಜನ ವಾಲಿಬಾಲ್ ಸೇರಿದಂತೆ ಇತರೆ ಕ್ರೀಡಾಪಟುಗಳಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡಿ ಬೆಳೆಸಿದ್ದರು. ರಸ್ತೆ ಅಪಘಾತದಲ್ಲಿ ನಿಧನಹೊಂದಿ ಒಂದು ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥ ಗೋಪಿನಾಥ್ ಕಪ್ ಆಯೋಜಿಸಲಾಗಿದೆ. ಕರ್ನಾಟಕ ರಾಜ್ಯ ವಾಲಿಬಾಲ್ ಅಕಾಡಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಎ ತಂಡಕ್ಕೆ ರಾಜ್ಯದ ನಾನಾ ಭಾಗಗಳಿಂದ ನುರಿತ ತಂಡಗಳು ಆಗಮಿಸಲಿವೆ. ಎ ತಂಡದ ಪಂದ್ಯಾವಳಿಗಳು ಹೊನಲು ಬೆಳಕಿನಲ್ಲಿ ನಡೆಯಲಿವೆ. ಬಿ ವಿಭಾಗದಲ್ಲಿ ಸ್ಥಳೀಯ ಆಟಗಾರರು ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ಈ ಆಟಗಳು ಬೆಳಗಿನ ವೇಳೆಯಲ್ಲಿ ನಡೆಯಲಿವೆ ಎಂದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಬಿ ವಿಭಾಗದಲ್ಲಿ ಭಾಗವಹಿಸುವ ಆಟಗಾರರು ಜ.10ರ ಒಳಗಾಗಿ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಯಾವುದೇ ಪ್ರವೇಶ ಶುಲ್ಕ ಇಲ್ಲ ಎಂದರು.
ಗೋಪಿನಾಥ ಕಪ್ ವ್ಯವಸ್ಥಾಪಕ ಕೆ.ಎಸ್.ಗಿರೀಶ್ ಮಾತನಾಡಿ, ಎ ತಂಡದಲ್ಲಿ ವಿಜೇತರಿಗೆ ರೂ 50,000, ರನ್ನರ್ ತಂಡಕ್ಕೆ ರೂ 40,000, ದ್ವಿತೀಯ ಬಹುಮಾನ ರೂ 30,000, ರೂ 20,000 ನೀಡಲಾಗುವುದು. ಬಿ ತಂಡದಲ್ಲಿ ವಿಜೇತರಿಗೆ ರೂ 25,000, ರನ್ನರ್ ತಂಡಕ್ಕೆ ರೂ 20,000, ದ್ವಿತೀಯ ಬಹುಮಾನ ರೂ 15,000, ರೂ 10,000 ನೀಡಲಾಗುವುದು. ಇದಲ್ಲದೆ ವಿವಿಧ ವಿಭಾಗಗಳಲ್ಲಿ ವಯಕ್ತಿಕ ನಗದು ಬಹುಮಾನಗಳನ್ನು ಸಹ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ್, ರಾಜ್ಯ ವಾಲಿಬಾಲ್ ಆಟಗಾರ ಇಸ್ತೂರು ಅಶ್ವತ್ಥಗೌಡ, ಹೊನ್ನವಾರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಗೋಪಾಲ್, ವಿಎಸ್ಎಸ್ಎನ್ ನಿರ್ದೇಶಕ ವಿಶ್ವನಾಥ್, ವಿರೂಪಾಕ್ಷ ಯ್ಯ, ಆನಂದ್ ಇದ್ದರು. ಹೆಚ್ಚಿನ ಮಾಹಿತಿಗೆ 98862 23537, 7337680507.