ಉತ್ತರ ಭಾರತದಿಂದ ಬೀಸುತ್ತಿರುವ ಶೀತಮಾರುತಕ್ಕೆ ಜನ ಥಂಡಾ
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಮತ್ತೆ ಚಳಿ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬೀಸುತ್ತಿರುವ ಶೀತಗಾಳಿ ಇನ್ನೂ ಒಂದು ವಾರ ಮುಂದುವರೆಯುವ ಸಾಧ್ಯತೆ ಇದೆ ಎನ್ನುತ್ತಿರುವುದರಿಂದ ಜಿಲ್ಲೆಯ ಜನತೆಗೆ ನಡುಕ ತಪ್ಪಂದಾಗಿದೆ.
ತಿಂಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತದಿಂದಾಗಿ ಪೆಥಾಯ್ ಚಂಡಮಾರುತ ಸೃಷ್ಟಿಯಾಗಿ ಇದರ ಪರಿಣಾಮ ಜಿಲ್ಲೆಯ ಜನ ಕೊರೆವ ಚಳಿಗೆ ನಡುಗುವಂತಾಗಿತ್ತು. ಇದೀಗ ಮತ್ತೆ ಶೀತಮಾರುತ ರಾಜ್ಯದಲ್ಲಿ ಆರ್ಭಟಿಸುತ್ತಿದ್ದು ಜನರಿಗೆ ನಡುಕ ಉಂಟಾಗುವಂತೆ ಮಾಡಿದೆ.
ಉತ್ತರಭಾರತದಿಂದ ದಕ್ಷಿಣದ ಕಡೆಗೆ ಶೀತಮಾರುತ ಬೀಸುತ್ತಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ನಾನಾ ಜಿಲ್ಲೆಗಳ ಜನರು ಥಂಡಾ ಹೊಡೆದಿದ್ದು ಬೆಳಗ್ಗೆ ಮತ್ತು ಸಂಜೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆಯಿಂದ ಎಂಟು ಗಂಟೆವರೆಗಿನ ತಾಪಮಾನ ಕನಿಷ್ಠ ಕಳೆದ ಎರಡು ದಿನಗಳಿಂದ 11 ಡಿಗ್ರಿ ಸೆಲ್ಸಿಯಸ್ವರೆಗೆ ತಲುಪಿದೆ. ಶೀತ ಗಾಳಿ ಜತೆಗೆ ಮೈ ನಡುಗಿಸುವ ಚಳಿಗೆ ಮುಂಜಾನೆ ಮತ್ತು ಮುಸ್ಸಂಜೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹಗಲು ವೇಳೆಯಲ್ಲೂ ತಣ್ಣನೆ ವಾತಾವರಣ ನಿರ್ಮಾಣವಾಗಿದ್ದು ಜನ ಸ್ವೆಟರ್, ಜಾಕೆಟ್ ಸೇರಿದಂತೆ ಬೆಚ್ಚನೆ ವಸ್ತ್ರಗಳ ಮೊರೆ ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುತ್ತದೆಯಾದರೂ ಈ ವರ್ಷ ಇದು ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದೇ ಹೇಳಲಾಗುತ್ತಿದೆ. ನಾಲ್ಕೈದು ದಿನದ ಹಿಂದೆ 15-16 ಡಿಗ್ರಿ ಸೆಲ್ಸಿಯಸ್ನಷ್ಟಿದ್ದ ತಾಪಮಾನ ಎರಡು ದಿನಗಳಿಂದಿಚೆಗೆ 10-11 ಡಿಗ್ರಿಗೆ ತಲುಪಿದೆ. ಬೆಳಗಿನ ಜಾವ ಕೆಲಸಕ್ಕೆ ಹೋಗುವವರು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಂದಿ ಚಳಿಗೆ ಥರಗುಟ್ಟುತ್ತಿದ್ದರೆ, ಮುಂಜಾನೆ ಬೀಳುವ ಮಂಜಿಗೆ ವಾಹನ ಸವಾರರು ಪರದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಜಿನ ಮುಸುಕಿನಾಟದಿಂದ ರಸ್ತೆ ಸರಿಯಾಗಿ ಗೋಚರಿಸದ ಪರಿಣಾಮ ವಾಹನ ಚಲಾಯಿಸಲು ಸವಾರರು ಹರಸಾಹಸ ಪಡುತ್ತಿದ್ದಾರೆ. ಟೀ ಅಂಗಡಿ ಮುಂದೆ ಜನ ನೆರೆಯುತ್ತಿರುವುದರ ಜತೆಗೆ ಡಾಬಾ ಸೇರಿದಂತೆ ಪಟ್ಟಣ ಪ್ರದೇಶ ಸೇರಿದಂತೆ ಹೆದ್ದಾರಿಯ ಹಲವೆಡೆ ಅಲ್ಲಲ್ಲಿ ಬೆಂಕಿಹಾಕಿಕೊಂಡು ಮೈ ಕಾಯಿಸಿಕೊಳ್ಳುತ್ತಾ ಕುಳಿತಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣುವಂತಾಗಿದೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಮತ್ತೆ ಚಳಿ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಬೀಸುತ್ತಿರುವ ಶೀತಗಾಳಿ ಇನ್ನೂ ಒಂದು ವಾರ ಮುಂದುವರೆಯುವ ಸಾಧ್ಯತೆ ಇದೆ ಎನ್ನುತ್ತಿರುವುದರಿಂದ ಜಿಲ್ಲೆಯ ಜನತೆಗೆ ನಡುಕ ತಪ್ಪಂದಾಗಿದೆ.
ತಿಂಗಳ ಹಿಂದೆ ಬಂಗಾಳಕೊಲ್ಲಿಯಲ್ಲಿ ವಾಯುಬಾರ ಕುಸಿತದಿಂದಾಗಿ ಪೆಥಾಯ್ ಚಂಡಮಾರುತ ಸೃಷ್ಟಿಯಾಗಿ ಇದರ ಪರಿಣಾಮ ಜಿಲ್ಲೆಯ ಜನ ಕೊರೆವ ಚಳಿಗೆ ನಡುಗುವಂತಾಗಿತ್ತು. ಇದೀಗ ಮತ್ತೆ ಶೀತಮಾರುತ ರಾಜ್ಯದಲ್ಲಿ ಆರ್ಭಟಿಸುತ್ತಿದ್ದು ಜನರಿಗೆ ನಡುಕ ಉಂಟಾಗುವಂತೆ ಮಾಡಿದೆ.
ಉತ್ತರಭಾರತದಿಂದ ದಕ್ಷಿಣದ ಕಡೆಗೆ ಶೀತಮಾರುತ ಬೀಸುತ್ತಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ನಾನಾ ಜಿಲ್ಲೆಗಳ ಜನರು ಥಂಡಾ ಹೊಡೆದಿದ್ದು ಬೆಳಗ್ಗೆ ಮತ್ತು ಸಂಜೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆಯಿಂದ ಎಂಟು ಗಂಟೆವರೆಗಿನ ತಾಪಮಾನ ಕನಿಷ್ಠ ಕಳೆದ ಎರಡು ದಿನಗಳಿಂದ 11 ಡಿಗ್ರಿ ಸೆಲ್ಸಿಯಸ್ವರೆಗೆ ತಲುಪಿದೆ. ಶೀತ ಗಾಳಿ ಜತೆಗೆ ಮೈ ನಡುಗಿಸುವ ಚಳಿಗೆ ಮುಂಜಾನೆ ಮತ್ತು ಮುಸ್ಸಂಜೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹಗಲು ವೇಳೆಯಲ್ಲೂ ತಣ್ಣನೆ ವಾತಾವರಣ ನಿರ್ಮಾಣವಾಗಿದ್ದು ಜನ ಸ್ವೆಟರ್, ಜಾಕೆಟ್ ಸೇರಿದಂತೆ ಬೆಚ್ಚನೆ ವಸ್ತ್ರಗಳ ಮೊರೆ ಹೋಗುತ್ತಿದ್ದಾರೆ.
ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುತ್ತದೆಯಾದರೂ ಈ ವರ್ಷ ಇದು ಕನಿಷ್ಠ ಮಟ್ಟಕ್ಕೆ ತಲುಪಿದೆ ಎಂದೇ ಹೇಳಲಾಗುತ್ತಿದೆ. ನಾಲ್ಕೈದು ದಿನದ ಹಿಂದೆ 15-16 ಡಿಗ್ರಿ ಸೆಲ್ಸಿಯಸ್ನಷ್ಟಿದ್ದ ತಾಪಮಾನ ಎರಡು ದಿನಗಳಿಂದಿಚೆಗೆ 10-11 ಡಿಗ್ರಿಗೆ ತಲುಪಿದೆ. ಬೆಳಗಿನ ಜಾವ ಕೆಲಸಕ್ಕೆ ಹೋಗುವವರು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಂದಿ ಚಳಿಗೆ ಥರಗುಟ್ಟುತ್ತಿದ್ದರೆ, ಮುಂಜಾನೆ ಬೀಳುವ ಮಂಜಿಗೆ ವಾಹನ ಸವಾರರು ಪರದಾಡುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಜಿನ ಮುಸುಕಿನಾಟದಿಂದ ರಸ್ತೆ ಸರಿಯಾಗಿ ಗೋಚರಿಸದ ಪರಿಣಾಮ ವಾಹನ ಚಲಾಯಿಸಲು ಸವಾರರು ಹರಸಾಹಸ ಪಡುತ್ತಿದ್ದಾರೆ. ಟೀ ಅಂಗಡಿ ಮುಂದೆ ಜನ ನೆರೆಯುತ್ತಿರುವುದರ ಜತೆಗೆ ಡಾಬಾ ಸೇರಿದಂತೆ ಪಟ್ಟಣ ಪ್ರದೇಶ ಸೇರಿದಂತೆ ಹೆದ್ದಾರಿಯ ಹಲವೆಡೆ ಅಲ್ಲಲ್ಲಿ ಬೆಂಕಿಹಾಕಿಕೊಂಡು ಮೈ ಕಾಯಿಸಿಕೊಳ್ಳುತ್ತಾ ಕುಳಿತಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣುವಂತಾಗಿದೆ.