ಆ್ಯಪ್ನಗರ

ಭಾವಪುರ ಬಳಿ ಕೊಲೆ ಪ್ರಕರಣ ಬೇಧಿಸಿದ ನಂದಗುಡಿ ಪೊಲೀಸರು

ಕಳೆದ ತಿಂಗಳು ಖಾಸಗಿ ಕಂಪನಿ ಹಣ ಸಂಗ್ರಹಣೆದಾರ ಸಿಬ್ಬಂದಿ ಬೈಕ್‌ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿ 15 ಲಕ್ಷ ಹಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ನಂದಗುಡಿ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka 31 Jul 2019, 5:00 am
ಶೋಕಿಗೋಸ್ಕರ ಖಾಸಗಿ ಕಂಪನಿ ಹಣ ಸಂಗ್ರಹಣೆದಾರ ಸಿಬ್ಬಂದಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಬಂಧನ
Vijaya Karnataka Web suspected murderer were arrest
ಭಾವಪುರ ಬಳಿ ಕೊಲೆ ಪ್ರಕರಣ ಬೇಧಿಸಿದ ನಂದಗುಡಿ ಪೊಲೀಸರು



ನಂದಗುಡಿ: ಕಳೆದ ತಿಂಗಳು ಖಾಸಗಿ ಕಂಪನಿ ಹಣ ಸಂಗ್ರಹಣೆದಾರ ಸಿಬ್ಬಂದಿ ಬೈಕ್‌ ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಿ 15 ಲಕ್ಷ ಹಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ನಂದಗುಡಿ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆ.ಜಿ. ಹಳ್ಳಿ ಯ ಮುಜಾಮೈಲ್‌ (29)ಹಾಗೂ ಕಾಡುಗೋಡಿಯ ಅಸ್ಮತ್‌ ಖಾನ್‌ (24) ಅವರು ಪ್ರಮುಖ ಆರೋಪಿಗಳಾಗಿದ್ದಾರೆ. ಮಂಗಮ್ಮನಪಾಳ್ಯದ ತೌಸಿಫ್‌ (25) , ಕಾಡುಗೋಡಿ ಆಕಿಬ್‌ (24) ಸಹ ಆರೋಪಿಗಳಾಗಿದ್ದಾರೆ. . ಆರೋಪಿಗಳಿಂದ 5 ಲಕ್ಷ ಹಣ ಹಾಗೂ ಒಂದು ಚಾಕು, 2 ಮೋಟಾರ್‌ ಸೈಕಲ್‌ ವಶ ಪಡಿಸಿಕೊಳ್ಳಲಾಗಿದೆ.

ಮೃತ ಬೈರೇಗೌಡನಿಗೆ ಪರಿಚಯಸ್ತನೇ ಆದ ಅಸ್ಮತ್‌ ಖಾನ್‌ ಮೃತನ ಕೊಲೆಗೆ ಸುಫಾರಿ ನೀಡಿರುವುದಾಗಿ ತಿಳಿದು ಬಂದಿದೆ. ಭೈರೇಗೌಡ ಕೋಳಿ ಫಾರಂಗಳಿಂದ Üಹಣ ಸಂಗ್ರಹಣೆ ಮಾಡಿ ಒಟ್ಟು 15-18 ಲಕ್ಷ ತನಕ ಕಂಪನಿಗೆ ನಿತ್ಯ ಜಮಾ ಮಾಡುತ್ತಿದ್ದ. ಇದನ್ನು ಮನಗಂಡ ಅಸ್ಮತ್‌ ಖಾನ್‌ ವೈಯಕ್ತಿಕವಾಗಿ ತನಗಿದ್ದ ಸಾಲ-ಸೋಲಗಳನ್ನು ತೀರಿಸಿಕೊಳ್ಳಲು ಈತನ ಬಳಿ ಇದ್ದ ಹಣವನ್ನು ದೋಚಿ ಜೀವನದಲ್ಲಿ ಸುಖವಾಗಿರುಲು ಮುಜಾಮೈಲ್‌ ಎಂಬ ರೌಡಿ ಶೀಟರ್‌ಗೆ 5 ಲಕ್ಷ ರೂಗಳಿಗೆ ಸುಫಾರಿ ನೀಡುತ್ತಾನೆ ಹಾಗೂ ದರೋಡೆ ಮಾಡಿದ 15 ಲಕ್ಷ ದಲ್ಲಿ ಅರ್ಧಭಾಗದ ಹಣವನ್ನು ನೀಡುವುದಾಗಿ ತಿಳಿಸಿರುತ್ತಾನೆ.

ಅಸ್ಮತ್‌ ಖಾನ್‌ ನೀಡಿದ ಮಾಹಿತಿಯನ್ನು ಆಧರಿಸಿ ಮುಜಾಮೈಲ್‌ ಭೈರೇಗೌಡನನ್ನು ಹಿಂಬಾಲಿಸಿ ಆತ ಭಾವಾಪುರ ಬಳಿ ಇರುವ ಕೋಳಿ ಫಾರಂಗೆ ಕೋಳಿಗಳನ್ನು ಇಳಿಸಿ ಹಣ ಸಂಗ್ರಹಣೆ ಮಾಡಿ ರಾತ್ರಿಯಲ್ಲ ಅಲ್ಲೇ ತಂಗಿದ್ದು ಬೆಳಗಿನ ಸಮಯ 7-30ರ ಸಮಯದಲ್ಲಿ ಹಣವನ್ನು ಕಂಪನಿಗೆ ಕಟ್ಟಲು ತೆರಳುವ ವೇಳೆ ಆರೋಪಿ ಮುಜಾಮೈಲ್‌ ಸಹ ಭಾವಾಪುರ ಬಳಿ ಈತನ ಚಲನವಲಯಗಳನ್ನು ಗಮನಿಸಿ ಮೃತ ಭೈರೇಗೌಡ ಹಣವನ್ನು ಸಂಗ್ರಹಣ ಮಾಡಿ ಬೈಕ್‌ನಲ್ಲಿ ಸಂಚರಿಸುತ್ತಿರುವ ವೇಳೆ ಭಾವಾಪುರದ ಬಳಿಯೇ ಹಿಂಬದಿಯಿಂದ ಬಂದ ಆರೋಪಿ ಮುಜಾಮೈಲ್‌ ಬೈಕ್‌ ಅಡ್ಡಗಟ್ಟಿ ಚಾಕುವಿನಿಂದ ತಿವಿದು ಆತನ ಬಳಿಯಿದ್ದ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಇದನ್ನು ಬೆನ್ನತ್ತಿದ್ದ ನಂದಗುಡಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಮುಜಾಮೈಲ್‌ ಪುಲಿಕೇಶಿನಗರ, ಶಿವಾಜಿನಗರ, ಡಿ.ಜೆ. ಹಳ್ಳಿ, ಆರ್‌.ಎಂ.ಸಿ. ಯಾರ್ತ್‌, ವಿಲ್ಸನ್‌ ಗಾರ್ಡನ್‌, ಕಮರ್ಷಿಯಲ್‌ಸ್ಟ್ರೀಟ್‌, ಕಾಟನ್‌ ಪೇಟೆ, ಭಾರತಿನಗರ ಹಾಗೂ ನಂದಗುಡಿ ಪೊಲೀಸ್‌ ಠಾಣೆಯಲ್ಲಿ ಒಟ್ಟು 9 ಕಡೆ ಈತನ ಮೇಲೆ ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ಇಷ್ಟು ಕಡೆ ಪ್ರಕರಣಗಳು ದಾಖಲಾಗಿ ರೌಡಿ ಶೀಟರ್‌ ದಾಖಲಾಗಿದೆ. ಈತ ಶೋಕಿಗೋಸ್ಕರ ಈ ಸುಫಾರಿಯನ್ನು ಒಪ್ಪಿಕೊಂಡಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ. ಈತ ದರೋಡೆ ಮಾಡಿರುವ ಹಣದಲ್ಲಿ ಕೇವಲ ಮಜಾಮಾಡುವುದಕ್ಕಾಗಿ ಇದ್ದ ಎಲ್ಲಾ ಹಣವನ್ನು ಖರ್ಚು ಮಾಡಿದ್ದಾನೆ. ನಂದಗುಡಿ ಪೊಲೀಸ್‌ ಠಾಣೆಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜುನಾಥ್‌, ಸಬ್‌ಇನ್ಸ್‌ಪೆಕ್ಟರ್‌ ಲಕ್ಷ್ಮೀನಾರಾಯಣ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪಾಯಕಾರಿ ರಸ್ತೆ :
ಶಿವನಾಪುರ ಕ್ರಾಸ್‌ನಿಂದ ಸೂಲಿಬೆಲೆ ಮಾರ್ಗವಾಗಿ ಸಂಚರಿಸುವ ಭಾವಾಪುರ ರಸ್ತೆಯ ಎರಡೂ ಭಾಗದಲ್ಲೂ ದಟ್ಟ ಅರಣ್ಯವಿರುವ ಕಾರಣ ರಾತ್ರಿಯ ಸಮಯದಲ್ಲಂತೂ ಈ ಮಾರ್ಗವಾಗಿ ಸಂಚರಿಸಲು ಭಯಭೀತರಾಗುತ್ತಾರೆ. ಈಗಿರುವಲ್ಲೆ ಹಗಲಿನ ಸಮಯದಲ್ಲೇ ಈ ರೀತಿಯಾಗಿ ಕೊಲೆ ಮಾಡಿ ಹಣ ದೋಚಿರುವುದರಿಂದ ಗ್ರಾಮಸ್ಥರೆಲ್ಲಾ ಭಯ ಭೀತರಾಗಿದ್ದು, ಒಬ್ಬ ಅಮಾಯಕನ ಜೀವ ತೆಗೆದ ಈ ಆರೋಪಿಯನ್ನು ಎನ್‌ಕೌಂಟರ್‌ ಮಾಡಿದರೆ ಮತ್ತೆ ಯಾರೂ ಈ ಭಾಗದಲ್ಲಿ ಈ ರೀತಿಯ ಕೃತ್ಯ ಮಾಡಲು ಮುಂದಾಗುವುದಿಲ್ಲ ಎಂದು ಒತ್ತಾಯಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ