ಆ್ಯಪ್ನಗರ

ಅನುಮಾನಸ್ಪದವಾಗಿ ಹಸುಗಳ ಸಾಗಾಟ , ಪೊಲೀಸರಿಗೆ ಹಿಡಿದುಕೊಟ್ಟ ಸಾರ್ವಜನಿಕರು

ಚಲಿಸುತ್ತಿದ್ದ ವಾಹನದಲ್ಲಿ ಹಸುವೊಂದು ಹೊರಕ್ಕೆ ಜಿಗಿದರೂ ಚಾಲಕ ವಾಹನ ನಿಲ್ಲಿಸದೆ ಹೋಗುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಅನುಮಾನದಿಂದ ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಶನಿವಾರ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

Vijaya Karnataka 21 Jul 2019, 5:00 am
ಸೂಲಿಬೆಲೆ: ಚಲಿಸುತ್ತಿದ್ದ ವಾಹನದಲ್ಲಿ ಹಸುವೊಂದು ಹೊರಕ್ಕೆ ಜಿಗಿದರೂ ಚಾಲಕ ವಾಹನ ನಿಲ್ಲಿಸದೆ ಹೋಗುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಅನುಮಾನದಿಂದ ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಶನಿವಾರ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
Vijaya Karnataka Web suspicious on transport of cows public safe them and give to police
ಅನುಮಾನಸ್ಪದವಾಗಿ ಹಸುಗಳ ಸಾಗಾಟ , ಪೊಲೀಸರಿಗೆ ಹಿಡಿದುಕೊಟ್ಟ ಸಾರ್ವಜನಿಕರು


ಘಟನೆ ಹಿನ್ನಲೆ:
ಚಿಂತಾಮಣೆಯಿಂದ ಖಾಸಗಿ ವಾಹನವೊಂದರಲ್ಲಿ ನಾಲ್ಕು ಹಸುಗಳನ್ನು ತುಂಬಿಕೊಂಡು ಬೆಂಗಳೂರು ಕಡೆ ಹೋಗಲಾಗುತ್ತಿತ್ತು. ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಕೋಡಸ್‌ ಕಾರ್ಖಾನೆ ಬಳಿ ಇದಕ್ಕಿದಂತೆ ಹಸುವೊಂದು ವಾಹನದಿಂದ ಹೊರಗೆ ಜಿಗಿದು ಬಿದ್ದು ಗಾಯಗೊಂಡಿದೆ.ಹಸು ಹೊರಗೆ ಬಿದ್ದರೂ ಅದರ ವಾಹನ ಚಾಲಕ ನಿಲ್ಲಿಸದೆ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರ ವಾಹನವನ್ನು ಹಿಂಬಾಲಿಸಿ ಹಿಡಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಾಹನದಲ್ಲಿ ನಾಲ್ಕು ಹಸುಗಳಿದ್ದು, ಇದು ಅಕ್ರಮ ಸಾಗಾಟ ಇರಬಹುದು ಎಂದು ಸಾರ್ವಜನಿಕರು ವಾಹನದ ಸುತ್ತ ಸುತ್ತುವರೆದು ಪ್ರಶ್ನೆಸಿದ್ದಾರೆ.ನಂತರ ಸೂಲಿಬೆಲೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಹಸುಗಳೊಂದಿಗೆ ವಾಹನದಲ್ಲಿ ಸಿಕ್ಕಿ ಬಿದ್ದವರು ನೀಡುತ್ತಿದ್ದ ಅನುಮಾನ್ಪದ ಹೇಳಿಕೆಗಳಿಂದ ಸಂಶಯಗೊಂಡ ಜನರು ವಾಹನ ಮತ್ತು ಹಸುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಸೂಲಿಬೆಲೆ ಪಿಸ್ಸೈ ಗೋವಿಂದ್‌ ವಾಹನದಲ್ಲಿದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

---
ಚಿಂತಾಮಣೆಯಿಂದ ಹಸುಗಳನ್ನು ಖರೀಧಿಸಿ ತರಲಾಗುತ್ತಿತ್ತು. ವಾಹನದಲ್ಲಿದ್ದ ಎಲ್ಲ ಹಸುಗಳು ನಾಟಿ ಹಸುಗಳಾಗಿದ್ದು ಸಾಕುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಅಂಶ ವಿಚಾರಣೆ ವೇಳೆ ತಿಳಿದು ಬಂದಿದೆ.

- ಗೋವಿಂದ್‌,
ಪಿಸ್ಸೈ ಸೂಲಿಬೆಲೆ ಪೊಲೀಸ್‌ ಠಾಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ