ಆ್ಯಪ್ನಗರ

ತಂತ್ರಜ್ಞಾನ ರೈತರಿಗೆ ತಲುಪಲಿ: ಡಾ.ತ್ರಿಲೋಚನ್‌

ರೈತರಿಗೆ ಎಲ್ಲ ಲಭ್ಯ ತಂತ್ರಜ್ಞಾನ ತಲುಪುವಂತಾಗಿ, ಅದರ ಸರಿಯಾದ ಬಳಕೆಯಾದರೆ ದೇಶದ ಆರ್ಥಿಕತೆ ಹೆಚ್ಚುತ್ತದೆ. ಈ ಮೂಲಕ ಆಹಾರ ವಲಯದಲ್ಲಿಭಾರತ ಅಗ್ರ ಸ್ಥಾನ ಪಡೆಯಬಹುದಾಗಿದೆ ಎಂದು ಕೇಂದ್ರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ.ತ್ರಿಲೋಚನ್‌ ಮೊಹಾಪಾತ್ರ ಪ್ರತಿಪಾದಿಸಿದರು.

Vijaya Karnataka 7 Sep 2019, 5:00 am
ಯಲಹಂಕ: ರೈತರಿಗೆ ಎಲ್ಲ ಲಭ್ಯ ತಂತ್ರಜ್ಞಾನ ತಲುಪುವಂತಾಗಿ, ಅದರ ಸರಿಯಾದ ಬಳಕೆಯಾದರೆ ದೇಶದ ಆರ್ಥಿಕತೆ ಹೆಚ್ಚುತ್ತದೆ. ಈ ಮೂಲಕ ಆಹಾರ ವಲಯದಲ್ಲಿಭಾರತ ಅಗ್ರ ಸ್ಥಾನ ಪಡೆಯಬಹುದಾಗಿದೆ ಎಂದು ಕೇಂದ್ರದ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ.ತ್ರಿಲೋಚನ್‌ ಮೊಹಾಪಾತ್ರ ಪ್ರತಿಪಾದಿಸಿದರು.
Vijaya Karnataka Web technology reach farmers dr thrilochan
ತಂತ್ರಜ್ಞಾನ ರೈತರಿಗೆ ತಲುಪಲಿ: ಡಾ.ತ್ರಿಲೋಚನ್‌


ಹೆಸರಘಟ್ಟದಲ್ಲಿಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್‌), ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ(ಐಐಎಚ್‌ಆರ್‌)ಯ ಎಂಟನೇ ಸಮಿತಿಯ 26ನೇ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇರಳದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ಕೆ.ಸಿಂಗ್‌ ಮಾತನಾಡಿ, ''ಭತ್ತ ಮತ್ತು ಬಾಳೆ ಗಿಡಗಳಿಗೆ ಪ್ರವಾಹದಿಂದ ಹೆಚ್ಚು ಹಾನಿಯಾಗಿದ್ದು, ಗಾಳಿಯ ರಭಸಕ್ಕೆ ಉರುಳದೇ ಇರುವಂತಹ ತಳಿಗಳನ್ನು ಅಭಿವೃದ್ಧಿಪಡಿಸುವತ್ತ ಚಿಂತನೆ ನಡೆಯಬೇಕಿದೆ,'' ಎಂದರು.

ಕೃಷಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮತ್ತು ಆರ್ಥಿಕ ಸಲಹೆಗಾರ ಬಿಂಬಾದರ್‌ ಪ್ರಧಾನ್‌, ಐಐಎಚ್‌ಆರ್‌ ನಿರ್ದೇಶಕ ಎಂ.ಆರ್‌.ದಿನೇಶ್‌, ಮೀನುಗಾರಿಕಾ ಇಲಾಖೆ ಡಿಡಿಜಿ ಜಾಯ್‌ ಕೃಷ್ಣ ಜನಾಹ್‌, ತೋಟಗಾರಿಕಾ ಇಲಾಖೆ ಡಿಡಿಜಿ ಆನಂದ್‌ ಸಿಂಗ್‌, ಕೃಷಿ ಇಲಾಖೆ ಡಿಡಿಜಿ ಎ.ಕೆ.ಸಿಂಗ್‌ ಅವರು ಉಪಸ್ಥಿತರಿದ್ದರು.

ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ತೋಟಗಾರಿಕಾ ಇಲಾಖೆಗಳ ನಿರ್ದೇಶಕರು, ಹಿರಿಯ ಅಧಿಕಾರಿಗಳು, ರೈತರು ಸಭೆಯಲ್ಲಿಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ