ಆ್ಯಪ್ನಗರ

ದೇವಾಲಯ ಪ್ರತಿಷ್ಠಾಪನೆಯಿಂದ ಗ್ರಾಮಕ್ಕೆ ಒಳಿತು

ಗ್ರಾಮಗಳಲ್ಲಿ ಈ ರೀತಿಯಾಗಿ ದೇವಾಲಯಗಳನ್ನು ಕಟ್ಟಿಸಿ ದೇವರ ಪ್ರತಿಷ್ಠಾಪನೆ ಮಾಡುವುದರಿಂದ ಗ್ರಾಮಕ್ಕೆ ಒಳಿತಾಗುತ್ತದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ‍್ಯದರ್ಶಿ ಶರತ್‌ ಬಚ್ಚೇಗೌಡ ಹೇಳಿದರು.

Vijaya Karnataka 16 Jan 2019, 5:00 am
ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ‍್ಯದರ್ಶಿ ಶರತ್‌ ಬಚ್ಚೇಗೌಡ
Vijaya Karnataka Web temple built is good for the village
ದೇವಾಲಯ ಪ್ರತಿಷ್ಠಾಪನೆಯಿಂದ ಗ್ರಾಮಕ್ಕೆ ಒಳಿತು


ವಿಕ ಸುದ್ದಿಲೋಕ ತಾವರೆಕೆರೆ

ಗ್ರಾಮಗಳಲ್ಲಿ ಈ ರೀತಿಯಾಗಿ ದೇವಾಲಯಗಳನ್ನು ಕಟ್ಟಿಸಿ ದೇವರ ಪ್ರತಿಷ್ಠಾಪನೆ ಮಾಡುವುದರಿಂದ ಗ್ರಾಮಕ್ಕೆ ಒಳಿತಾಗುತ್ತದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ‍್ಯದರ್ಶಿ ಶರತ್‌ ಬಚ್ಚೇಗೌಡ ಹೇಳಿದರು.

ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದೇವಶೆಟ್ಟಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವಶಾಂತಿಗಾಗಿ 38ನೇ ವರ್ಷದ ಧನುರ್ಮಾಸ ಗರುಡಸ್ತಂಭ ಜ್ಯೋತಿ ಪೂಜೆ ಹಾಗೂ ನವದೇವಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಮನುಷ್ಯರು ತನ್ನ ದಿನನಿತ್ಯ ಜಂಜಾಟದಲ್ಲಿ ಅದೆಷ್ಟೋ ಕೆಲಸ ಕಾರ್ಯಕ್ರಮಗಳಲ್ಲಿ ತೊಡಗಿರುತ್ತಾನೆ. ಆದರೆ ಅದರ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯದಲ್ಲಿ ದೇವರ ಸೇವೆಯಲ್ಲಿ ಅರ್ಪಿಸುವುದರಿಂದ ಒಳಿತಾಗುತ್ತದೆ ಎಂದರು.

ಗ್ರಾಮದವರ ಶ್ರೀರಕ್ಷೆಗಾಗಿ ಹಾಗೂ ಗ್ರಾಮಕ್ಕೆ ಒಳಿತಾಗಲು ಗ್ರಾಮದಲ್ಲಿ ಒಂದು ದೇವಾಲಯವಿರಬೇಕು. ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ದೇವರಲ್ಲಿ ನಂಬಿಕೆ ಇಟ್ಟು ನಮ್ಮ ಹಿಂದಿನ ಸಂಪ್ರದಾಯಗಳು ಮುನ್ನಡೆಸಿಕೊಂಡು ಬರಬೇಕು. ಸೂರ್ಯ ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ಈ ಮಾಸದ ಮತ್ತೊಂದು ಆಚರಣೆಯೆಂದರೆ ಅಮಾವಾಸ್ಯೆಯ 6 ದಿನಗಳ ನಂತರ ಸ್ಕಂದ ಷಷ್ಠಿಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷ ದ ಹಿರಿಯ ಮುಖಂಡರಾದ ಕೋಡಿಹಳ್ಳಿ ಸೊಣ್ಣಪ್ಪ, ತಾಲೂಕು ಬಿಜೆಪಿ ಉಪಾಧ್ಯಕ್ಷ ರಾದ ಕೋಡಿಹಳ್ಳಿ ಸುರೇಶ್‌, ಹೆಚ್‌.ಎಂ. ಸುಬ್ಬರಾಜು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ