ಆ್ಯಪ್ನಗರ

ನೋಂದಣಿ ಅಧಿಕಾರಿಗಳ ತಪ್ಪಿನಿಂದ ಫಲಾನುಭವಿಗಳಿಗೆ ಅನ್ಯಾಯ

ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಬೇಕು, ಜತೆಗೆ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಚೇಗೌಡ ಆಗ್ರಹಿಸಿದರು.

Vijaya Karnataka 27 Feb 2019, 5:00 am
ಹೊಸಕೋಟೆ ಗ್ರಾಮಾಂತರ : ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಬೇಕು, ಜತೆಗೆ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಚೇಗೌಡ ಆಗ್ರಹಿಸಿದರು.
Vijaya Karnataka Web the mistake of the registrar officers is the injustice to the beneficiaries
ನೋಂದಣಿ ಅಧಿಕಾರಿಗಳ ತಪ್ಪಿನಿಂದ ಫಲಾನುಭವಿಗಳಿಗೆ ಅನ್ಯಾಯ


ಹೊಸಕೋಟೆ ತಾಲೂಕು ಮಟ್ಟದ ರೈತರ ಸಮಸ್ಯೆಗಳನ್ನು ಚರ್ಚಿಸಲು ಹೊಸಕೋಟೆ ತಾಪಂ ಕಾರ್ಯ ನಿರ್ವಹಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ ಸಂಬಂದಪಟ್ಟ ರೈತರ ಸಮಸ್ಯೆಗಳನ್ನು ಕಾಲ ಮಿತಿಯಲ್ಲಿ ಬಗೆಹರಿಸಬೇಕು. ಕಂದಾಯ ಇಲಾಖೆಯ ಫಾರಂ ನಂ 53ರಲ್ಲಿ ಮಂಜೂರಾದ ಭೂಮಿಯನ್ನು ರೈತರಿಗೆ ಸಾಗುವಳಿ ಚೀಟಿ ನೀಡಬೇಕು. ಉಳಿಕೆ ಫಾರಂ ನಂ 57ರ ಅರ್ಜಿ ಹಾಕಿದ ರೈತರಿಗೆ ಯಾವುದೇ ಕಟ್ಟು ಪಾಡುಗಳಿಲ್ಲದೆ ಜಮೀನು ಮಂಜೂರು ಮಾಡಬೇಕು ಎಂದರು.

ನೋಂದಣಿ ಇಲಾಖೆಯಲ್ಲಿ ತಪ್ಪು ಮಾಹಿತಿಗಳ ಮುಖಾಂತರ ಹಲವಾರು ಸೂಕ್ತ ಫಲಾನುಭವಿಗಳಿಗೆ ಮೋಸ ಅಗುತ್ತಿರುವುದನ್ನು ತಡೆಗಟ್ಟುವ ಬಗ್ಗೆ ಸಭೆಯತಲ್ಲಿ ಸುರ್ದೀಘವಾದ ಚರ್ಚೆ ನಡೆಯಿತು. ಜಿಲ್ಲಾಧಿಕಾರಿ ಅಧ್ಯಕ್ಷ ತೆಯಲ್ಲಿ ಕರೆಯಲಾಗಿದ್ದ ಸಭೆಗೆ ಜಿಲ್ಲಾಧಿಕಾರಿಗಳು ಗೈರು ಹಾಜರಾದ್ದರಿಂದ ಹೊಸಕೋಟೆ ತಹಸೀಲ್ದಾರ್‌ ಕೆ.ರಮೇಶ್‌ ಸಮ್ಮುಖದಲ್ಲಿ ಇಲಾಖಾವಾರು ಸಭೆ ನಡೆಯಿತು. ಈ ವೇಳೆ ರೈತರ ಸಮಸ್ಯೆಗಳನ್ನು ಎಲ್ಲಾ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದು ಅದನ್ನು ಅಂತ ಅಂತವಾಗಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರು.

ಸಭೆಯಲ್ಲಿ ತಾಪಂ ಇಓ ಪ್ರಕಾಶ್‌, ಎಡಿಎಲ್‌ಆರ್‌.ಬಾಗ್ಯಮ್ಮ, ಉಪ ತಹಸೀಲ್ದಾರ್‌ ಚಂದ್ರಶೇಖರ್‌, ತಾಲೂಕು ರೈತ ಸಂಘದ ಅಧ್ಯಕ್ಷ ಮಲ್ಲಿಮಾಕನಪುರ ಬಚ್ಚೇಗೌಡ, ಕಾರ್ಯದರ್ಶಿ ವೆಂಕಟಾಪುರ ರಾಜಣ್ಣ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ