ಮಠಗಳು ಸೇವೆ ಸಮಾಜಮುಖಿಯಾಗಿರಲಿ
ಕಂಬಾಳು ಮಠದಲ್ಲಿ ಲಿಂಗೈಕ್ಯ ಶ್ರೀಗಳ ಪುಣ್ಯಸ್ಮರಣೆಯಲ್ಲಿ ಸಿದ್ಧಗಂಗಾ ಶ್ರೀ ಸಲಹೆ ವಿಕ ಸುದ್ದಿಲೋಕ ದಾಬಸಪೇಟೆ ರಾಜ್ಯದಲ್ಲಿ ವೀರಶೈವ ಮಠಗಳು ನಮ್ಮ ನಾಡಿನ ಧಾರ್ಮಿಕ, ...
Vijaya Karnataka 18 Mar 2019, 5:00 am
ಕಂಬಾಳು ಮಠದಲ್ಲಿ ಲಿಂಗೈಕ್ಯ ಶ್ರೀಗಳ ಪುಣ್ಯಸ್ಮರಣೆಯಲ್ಲಿ ಸಿದ್ಧಗಂಗಾ ಶ್ರೀ ಸಲಹೆ
ವಿಕ ಸುದ್ದಿಲೋಕ ದಾಬಸಪೇಟೆ
ರಾಜ್ಯದಲ್ಲಿ ವೀರಶೈವ ಮಠಗಳು ನಮ್ಮ ನಾಡಿನ ಧಾರ್ಮಿಕ, ಸಾಮಾಜಿಕ, ಮತ್ತು ಶೈಕ್ಷ ಣಿಕ ಕ್ಷೇತ್ರಕ್ಕೆ ತಮ್ಮದೇ ಆದ ರೀತಿ ಕೊಡುಗೆ ನೀಡುತ್ತಾ ಬಂದಿದ್ದು, ವರ್ತಮಾನದ ಚಿಂತನೆಗಳನ್ನು ಮುಂದಿಟ್ಟುಕೊಂಡು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ. ಸಿದ್ದಲಿಂಗಸ್ವಾಮೀಜಿ ಅಭಿಪ್ರಾಯಪಟ್ಟÜರು.
ಸೋಂಪುರ ಹೋಬಳಿ ಕಂಬಾಳು ಮಠದಲ್ಲಿ ನಡೆದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಕಂಬಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕಂಬಾಳು ಮಠವು ಶಿವಗಂಗೆಯ ತಪ್ಪಲಿನಲ್ಲಿರುವ ಪುಣ್ಯ ಕ್ಷೇತ್ರವಾಗಿದ್ದು ಮಠದ ಪರಂಪರೆಯಲ್ಲಿ ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ, ಈ ಮಠವು ಶ್ರೀ ಶೈಲದ ಶಾಖಾ ಮಠವಾಗಿದ್ದು 15 ನೇ ಶತಮಾನದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿಯವರ ಕಾಲದಲ್ಲಿ ಪ್ರಸಿದ್ದಿಯನ್ನು ಪಡೆದುಕೊಂಡಿತ್ತು. ಮಠದ ಹಿಂದಿನ ಗುರುಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಠದಲ್ಲಿ ಮಕ್ಕಳಿಗೆ ಆಶ್ರಯ ನೀಡಿ ಶಿಕ್ಷ ಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿ ಮಠಕ್ಕೆ ಬರುವ ಭಕ್ತರಿಗೆ ಸಹಕಾರ ಹಾಗು ಉತ್ತಮ ಮಾರ್ಗದರ್ಶನ ನೀಡುತ್ತಾ ಬಂದಿದ್ದರು. ಪೂಜ್ಯರು ಕಾಯಕ ಯೋಗಿಯಾಗಿ ಕೃಷಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಸೇವೆಯಲ್ಲಿ ದೇವರನ್ನು ಕಾಣಿ : ಹೊನ್ನಮ್ಮ ಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸೇವೆಯ ಮೂಲಕ ದೇವರನ್ನು ಕಾಣಬಹುದು ಎಂದು ಜಗತ್ತಿಗೆ ತೋರಿದವರು ಸಿದ್ದಗಂಗೆಯ ಪೂಜ್ಯ ಶಿವಕುಮಾರ ಸಾಮೀಜಿಯವರು 80 ವರ್ಷಗಳ ಕಾಲ ಮಠವನ್ನು ಮುನ್ನೆಡೆಸಿ ಇಂದು 10 ಸಾವಿರ ಮಕ್ಕಳಿಗೆ ಆಶ್ರಯ ನೀಡಿ ತ್ರಿವಿಧ ದಾಸೋಹವನ್ನು ಕಲ್ಪಿಸುತ್ತಲೆ ತಮ್ಮ ಕಾಯಕ ಯಾತ್ರೆ ಮುಗಿಸಿದರು ಪೂಜ್ಯರ ಮಾರ್ಗದರ್ಶನ ಮತ್ತು ಆಶಯದಂತೆ ಭಕ್ತ ಸಮೂಹ ನಡೆದುಕೊಳ್ಳಬೇಕು ಈ ಮೂಲಕ ಪೂಜ್ಯರ ಆಶಯಗಳನ್ನು ಆಚರಣೆಗೆ ತರುವ ಮೂಲಕ ಭಕ್ತಿಯ ಸಮರ್ಪಣೆ ಸಲ್ಲಿಸಿ ಎಂದರು
ಕಂಬಾಳು ಮಠದ ಪೀಠಾಧ್ಯಕ್ಷ ಶ್ರೀ ಚನ್ನವೀರಸ್ವಾಮೀಜಿ ಪ್ರಾಸ್ಯಾವಿಕವಾಗಿ ಮಾತನಾಡಿ ದೇಶದ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಮಠಗಳು ಸಾರುತ್ತಾ ಮಾರ್ಗದರ್ಶನ ನೀಡುತ್ತಾ ಬಂದಿರುವುದರಿಂದ ಇಂದಿಗೂ ನಮ್ಮ ಆಚಾರ ವಿಚಾರಗಳು ಶ್ರೀಮಂತವಾಗಿವೆ ಎಂದರು
ಕಾರ್ಯಕ್ರಮದಲ್ಲಿ ಬಂಡೆ ಮಠದ ಬಸವಲಿಂಗಸ್ವಾಮೀಜಿ,ಬಸವಣ್ಣ ದೇವರ ಮಠದ ಸಿದ್ದಲಿಂಗಸ್ವಾಮೀಜಿ, ದೊಡ್ಡ ಮಠದ ಶಿವಬಸವ ಸ್ವಾಮೀಜಿ, ಬೇವೂರು ಮಠದ ಶಿವರುದ್ರ ಸ್ವಾಮೀಜಿ, ಚಿಕ್ಕಮಸ್ಕಲ್ ಮಠದ ಬಸವಲಿಂಗಸ್ವಾಮೀಜಿ, ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಗಣ್ಯರಾದ ಶಾಂತಯ್ಯ, ಶಿವಣ್ಣ,ಪಾಲನೇತ್ರಯ್ಯ, ಶಾಂತಕುಮಾರ್, ಗಟ್ಟಿಬೈರಪ್ಪ, ಶಿವರುದ್ರಯ್ಯ, ಮೋಹನ್ ಕುಮಾರ್, ಪಂಚಾಕ್ಷ ರಿ, ಉಮೇಶ್, ಬೃಂಗೇಶ್, ಕೆಂಪರಾಜು, ನಿರಂಜನ್, ಪ್ರಭುದೇವರು, ನವೀನ್,ರುದ್ರೇಶ್, ವೀರೇಶ್, ಮುಪ್ಪಿನಸ್ವಾಮಿ, ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.
ವಿಕ ಸುದ್ದಿಲೋಕ ದಾಬಸಪೇಟೆ
ರಾಜ್ಯದಲ್ಲಿ ವೀರಶೈವ ಮಠಗಳು ನಮ್ಮ ನಾಡಿನ ಧಾರ್ಮಿಕ, ಸಾಮಾಜಿಕ, ಮತ್ತು ಶೈಕ್ಷ ಣಿಕ ಕ್ಷೇತ್ರಕ್ಕೆ ತಮ್ಮದೇ ಆದ ರೀತಿ ಕೊಡುಗೆ ನೀಡುತ್ತಾ ಬಂದಿದ್ದು, ವರ್ತಮಾನದ ಚಿಂತನೆಗಳನ್ನು ಮುಂದಿಟ್ಟುಕೊಂಡು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ. ಸಿದ್ದಲಿಂಗಸ್ವಾಮೀಜಿ ಅಭಿಪ್ರಾಯಪಟ್ಟÜರು.
ಸೋಂಪುರ ಹೋಬಳಿ ಕಂಬಾಳು ಮಠದಲ್ಲಿ ನಡೆದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಕಂಬಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಕಂಬಾಳು ಮಠವು ಶಿವಗಂಗೆಯ ತಪ್ಪಲಿನಲ್ಲಿರುವ ಪುಣ್ಯ ಕ್ಷೇತ್ರವಾಗಿದ್ದು ಮಠದ ಪರಂಪರೆಯಲ್ಲಿ ತನ್ನದೇ ಆದ ವಿಶೇಷ ಸ್ಥಾನ ಹೊಂದಿದೆ, ಈ ಮಠವು ಶ್ರೀ ಶೈಲದ ಶಾಖಾ ಮಠವಾಗಿದ್ದು 15 ನೇ ಶತಮಾನದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮೀಜಿಯವರ ಕಾಲದಲ್ಲಿ ಪ್ರಸಿದ್ದಿಯನ್ನು ಪಡೆದುಕೊಂಡಿತ್ತು. ಮಠದ ಹಿಂದಿನ ಗುರುಗಳಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಠದಲ್ಲಿ ಮಕ್ಕಳಿಗೆ ಆಶ್ರಯ ನೀಡಿ ಶಿಕ್ಷ ಣಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿ ಮಠಕ್ಕೆ ಬರುವ ಭಕ್ತರಿಗೆ ಸಹಕಾರ ಹಾಗು ಉತ್ತಮ ಮಾರ್ಗದರ್ಶನ ನೀಡುತ್ತಾ ಬಂದಿದ್ದರು. ಪೂಜ್ಯರು ಕಾಯಕ ಯೋಗಿಯಾಗಿ ಕೃಷಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಸೇವೆಯಲ್ಲಿ ದೇವರನ್ನು ಕಾಣಿ : ಹೊನ್ನಮ್ಮ ಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸೇವೆಯ ಮೂಲಕ ದೇವರನ್ನು ಕಾಣಬಹುದು ಎಂದು ಜಗತ್ತಿಗೆ ತೋರಿದವರು ಸಿದ್ದಗಂಗೆಯ ಪೂಜ್ಯ ಶಿವಕುಮಾರ ಸಾಮೀಜಿಯವರು 80 ವರ್ಷಗಳ ಕಾಲ ಮಠವನ್ನು ಮುನ್ನೆಡೆಸಿ ಇಂದು 10 ಸಾವಿರ ಮಕ್ಕಳಿಗೆ ಆಶ್ರಯ ನೀಡಿ ತ್ರಿವಿಧ ದಾಸೋಹವನ್ನು ಕಲ್ಪಿಸುತ್ತಲೆ ತಮ್ಮ ಕಾಯಕ ಯಾತ್ರೆ ಮುಗಿಸಿದರು ಪೂಜ್ಯರ ಮಾರ್ಗದರ್ಶನ ಮತ್ತು ಆಶಯದಂತೆ ಭಕ್ತ ಸಮೂಹ ನಡೆದುಕೊಳ್ಳಬೇಕು ಈ ಮೂಲಕ ಪೂಜ್ಯರ ಆಶಯಗಳನ್ನು ಆಚರಣೆಗೆ ತರುವ ಮೂಲಕ ಭಕ್ತಿಯ ಸಮರ್ಪಣೆ ಸಲ್ಲಿಸಿ ಎಂದರು
ಕಂಬಾಳು ಮಠದ ಪೀಠಾಧ್ಯಕ್ಷ ಶ್ರೀ ಚನ್ನವೀರಸ್ವಾಮೀಜಿ ಪ್ರಾಸ್ಯಾವಿಕವಾಗಿ ಮಾತನಾಡಿ ದೇಶದ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಮಠಗಳು ಸಾರುತ್ತಾ ಮಾರ್ಗದರ್ಶನ ನೀಡುತ್ತಾ ಬಂದಿರುವುದರಿಂದ ಇಂದಿಗೂ ನಮ್ಮ ಆಚಾರ ವಿಚಾರಗಳು ಶ್ರೀಮಂತವಾಗಿವೆ ಎಂದರು
ಕಾರ್ಯಕ್ರಮದಲ್ಲಿ ಬಂಡೆ ಮಠದ ಬಸವಲಿಂಗಸ್ವಾಮೀಜಿ,ಬಸವಣ್ಣ ದೇವರ ಮಠದ ಸಿದ್ದಲಿಂಗಸ್ವಾಮೀಜಿ, ದೊಡ್ಡ ಮಠದ ಶಿವಬಸವ ಸ್ವಾಮೀಜಿ, ಬೇವೂರು ಮಠದ ಶಿವರುದ್ರ ಸ್ವಾಮೀಜಿ, ಚಿಕ್ಕಮಸ್ಕಲ್ ಮಠದ ಬಸವಲಿಂಗಸ್ವಾಮೀಜಿ, ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಗಣ್ಯರಾದ ಶಾಂತಯ್ಯ, ಶಿವಣ್ಣ,ಪಾಲನೇತ್ರಯ್ಯ, ಶಾಂತಕುಮಾರ್, ಗಟ್ಟಿಬೈರಪ್ಪ, ಶಿವರುದ್ರಯ್ಯ, ಮೋಹನ್ ಕುಮಾರ್, ಪಂಚಾಕ್ಷ ರಿ, ಉಮೇಶ್, ಬೃಂಗೇಶ್, ಕೆಂಪರಾಜು, ನಿರಂಜನ್, ಪ್ರಭುದೇವರು, ನವೀನ್,ರುದ್ರೇಶ್, ವೀರೇಶ್, ಮುಪ್ಪಿನಸ್ವಾಮಿ, ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.