ಆ್ಯಪ್ನಗರ

ಇಬ್ಬನಿಗೆ ಕಮರುತ್ತಿದೆ ರೇಷ್ಮೆ : ಆತಂಕದಲ್ಲಿ ರೈತರು

ಜಿಲ್ಲೆಯಲ್ಲಿ ಕೆಲದಿನಗಳಿಂದ ನಿರಂತರ ಸುರಿಯುತ್ತಿರುವ ಇಬ್ಬನಿಗೆ ರೈತರ ಬೆಳೆಗಳು ಕಮರಿ ಹೋಗುತ್ತಿದ್ದು , ಪ್ರಮುಖವಾಗಿ ರೇಷ್ಮೆ ಬೆಳೆಗಾರರಲ್ಲ್ಲಿ ಆತಂಕ ಮನೆಮಾಡಿದೆ.

Vijaya Karnataka 25 Jan 2019, 5:00 am
ಉಷ್ಣಾಂಶದ ಕೊರತೆಯಿಂದ ಹಿಪ್ಪುನೇರಳೆ ಸೊಪ್ಪಿಗೆÜ ರೋಗ ಬಾಧೆ | ಆತಂಕದಲ್ಲಿ ರೈತರು
Vijaya Karnataka Web the silk looks for two farmers in anxiety
ಇಬ್ಬನಿಗೆ ಕಮರುತ್ತಿದೆ ರೇಷ್ಮೆ : ಆತಂಕದಲ್ಲಿ ರೈತರು


ನಾಗರಾಜ ಎನ್‌.ಎಂ. ನಂದಗುಡಿ

ಜಿಲ್ಲೆಯಲ್ಲಿ ಕೆಲದಿನಗಳಿಂದ ನಿರಂತರ ಸುರಿಯುತ್ತಿರುವ ಇಬ್ಬನಿಗೆ ರೈತರ ಬೆಳೆಗಳು ಕಮರಿ ಹೋಗುತ್ತಿದ್ದು , ಪ್ರಮುಖವಾಗಿ ರೇಷ್ಮೆ ಬೆಳೆಗಾರರಲ್ಲ್ಲಿ ಆತಂಕ ಮನೆಮಾಡಿದೆ.

ಉಷ್ಣಾಂಶ ಇಳಿಮುಖವಾಗಿ ರೈತರು ಬೆಳೆದ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಹಿಪ್ಪುನೇರಳೆ ಗಿಡದ ಎಲೆ ಮಾತ್ರವಲ್ಲದೆ ಗಿಡದ ಕಡ್ಡಿಗಳು ಚಳಿಗೆ ಮುದುರಿ ಹೋಗುತ್ತಿವೆ. ಇದರಿಂದ ರೇಷ್ಮೆ ಗೂಡು ಕಟ್ಟಲಾಗದ ಪರಿಸ್ಥಿತಿ ಎದುರಾಗಿದೆ.

ಮೊದಲೇ ಬರಪೀಡಿತ ಪ್ರದೇಶವಾಗಿದ್ದು, ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಸಾವಿರಾರು ಅಡಿಗಳ ಆಳದಿಂದ ತುಸು ನೀರಲ್ಲೇ ಬೆಳೆದ ಬೆಳೆ ಈಗ ಹಿಮಪಾತಕ್ಕೆ ಮತ್ತಷ್ಟು ತುತ್ತಾಗುತ್ತಿರುವುದು ರೈತರನ್ನು ಇನ್ನಷ್ಟು ಕಂಗಲಾಗಿಸಿದೆ.

ಇಳುವರಿ ಇಳಿಮುಖ: ಟೋಮೇಟೋ, ಆಲೂಗಡ್ಡೆ, ಬದನೆಕಾಯಿ, ಹುರುಳಿಕಾಯಿ ಕ್ಯಾರೇಟ್‌ ಮುಂತಾದ ತರಕಾರಿ, ಕಾಯಿಪಲ್ಲೆಗಳು, ಸೊಪ್ಪುಗಳು ಬೆಳೆ ಬೆಳೆದ ರೈತರು ತಬ್ಬಿಬ್ಬಾಗಿದ್ದಾರೆ. ಮಾರುಕಟ್ಟೆಯಲ್ಲಿ ಸರಿಯಾಗಿ ತರಕಾರಿಗಳು ರವಾನೆಯಾಗದೇ ಬೆಲೆ ಏರಿಕೆಯಾಗಿದ್ದರೂ, ಇಲ್ಲಿ ರೈತನಿಗೆ ಬೆಳೆಯಲ್ಲಿ ಇಳುವರಿ ಇಲ್ಲದಂತಾಗಿದೆ. ಇದೇ ವಾತಾವರಣ ಮುಂದುವರೆದರೆ ರೇಷ್ಮೆ ಹುಳ ಸರಿಯಾಗಿ ಗೂಡು ಕಟ್ಟುವುದಿಲ್ಲ ಎಂಬ ಅಭಿಪ್ರಾಯ ರೈತರಿಂದ ಎಲ್ಲೆಡೆ ವ್ಯಕ್ತವಾಗುತ್ತಿದೆ.

---

ತರಕಾರಿ, ಕಾಯಿಪಲ್ಲೆ, ಸೊಪ್ಪುಗಳ ಬೆಲೆ ದಿನಂಪ್ರತಿ ಏರಿಕೆಯಾಗುತ್ತಿದೆ, ಎಷ್ಟೇ ಬೆಲೆ ಏರಿದರೂ ಸಹ ಖರೀದಿಸಲೇಬೇಕು ಎಂಬಂತಾಗಿದೆ. ಚಳಿ ಪ್ರಮಾಣ ಹೆಚ್ಚಿರುವುದರಿಂದ ಇಳುವರಿ ಪ್ರಮಾಣ ಕುಸಿದಿದ್ದು, ರೈತರು ಶ್ರಮ ವಹಿಸಿ ದುಡಿದರೂ ತಕ್ಕ ಪ್ರತಿಫಲ ಸಿಗದೆ ಸಂಕಷ್ಟ ಎದುರಿಸುವಂತಾಗಿದೆ.

- ಸುಧಾ ಆರ್‌, ಗೃಹಿಣಿ, ನಂದಗುಡಿ

ಚಳಿಯ ಪ್ರಮಾಣ ನಿರಂತರವಾಗಿ ಹೆಚ್ಚಿದ್ದು, 10 ಗಂಟೆಯಾದರೂ ಹೊರಗಡೆ ಬರಲಾಗದ ಸ್ಥಿತಿ ಉಂಟಾಗಿದೆ. ಮೈನಡಗಿಸುವ ಚಳಿಯಲ್ಲೂ ದಿನ ನಿತ್ಯ ಮನೆ ಮನೆಗೆ ತೆರಳಿ ಪತ್ರಿಕೆ ತಲುಪಿಸಬೇಕು. ಎಷ್ಟೇ ಚಳಿಯಿದ್ದರೂ ಮಾಡಲೇಬೇಕಾದ ಅನಿವಾರ್ಯತೆ, ಚಳಿ ಎಂದು ಕೂತರೇ ಜೀವನ ನಿರ್ವಹಿಸುವದು ಕಷ್ಟಕರವಾಗುತ್ತದೆ.

- ಶಿವಣ್ಣ ಎನ್‌.ಎಂ. ಪತ್ರಿಕಾ ವಿತರಕ, ನಂದಗುಡಿ.

ರೈತರು ಯಾವುದೇ ತರಕಾರಿ ಬೆಳೆಗಳನ್ನು ಬೆಳೆದರೂ ಸಹ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುವುದಿಲ್ಲ, ಮಾರುಕಟ್ಟೆಯಲ್ಲಿ ತರಕಾರಿ ಬೆಲೆಯಿದ್ದಾಗ ಉತ್ತಮ ಫಸಲು ಬರುವುದಿಲ್ಲ, ಹವಾಮಾನ ವೈಪರೀತ್ಯಕ್ಕೆ ಸರಕಾರ ಬೆಲೆ ನಷ್ಟ ಪರಿಹಾರ ಸಕಾಲಕ್ಕೆ ರೈತನ ಕೈ ಸೇರುವ ನೇರ ವ್ಯವಸ್ಥೆ ಕಲ್ಪಿಸಬೇಕು.

- ಮುನಿರಾಜ್‌ ಎನ್‌.ಸಿ, ತಾಲೂಕು ಕಾರ್ಯಾಧ್ಯಕ್ಷ ರು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೊಸಕೋಟೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ