ಆ್ಯಪ್ನಗರ

ಸ್ವಚ್ಛತೆ ಕಾಯ್ದುಕೊಂಡರೆ ರೋಗದ ಭಯವಿಲ್ಲ

ಸ್ವಚ್ಛತೆ ಇದ್ದ ಕಡೆ ರೋಗವಿರುವುದಿಲ್ಲ. ಹೀಗಾಗಿ ದೈಹಿಕ ಮತ್ತು ಪರಿಸರ ಸ್ವಚ್ಛತೆಯಿಂದ ಮಾತ್ರ ಉತ್ತಮ ಆರೋಗ್ಯ ಗಳಿಸಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿ ಸದಸ್ಯ ಡಾ.ಎಚ್‌.ಜಿ.ವಿಜಯ ಕುಮಾರ್‌ ತಿಳಿಸಿದರು.

Vijaya Karnataka 6 Jul 2019, 5:00 am
ದೊಡ್ಡಬಳ್ಳಾಪುರ : ಸ್ವಚ್ಛತೆ ಇದ್ದ ಕಡೆ ರೋಗವಿರುವುದಿಲ್ಲ. ಹೀಗಾಗಿ ದೈಹಿಕ ಮತ್ತು ಪರಿಸರ ಸ್ವಚ್ಛತೆಯಿಂದ ಮಾತ್ರ ಉತ್ತಮ ಆರೋಗ್ಯ ಗಳಿಸಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಸಮಿತಿ ಸದಸ್ಯ ಡಾ.ಎಚ್‌.ಜಿ.ವಿಜಯ ಕುಮಾರ್‌ ತಿಳಿಸಿದರು.
Vijaya Karnataka Web there is no fear of disease if it is maintained clean
ಸ್ವಚ್ಛತೆ ಕಾಯ್ದುಕೊಂಡರೆ ರೋಗದ ಭಯವಿಲ್ಲ


ತಾಲೂಕಿನ ಬಾಶೆಟ್ಟಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷ ಣ ಪೌಂಡೇಷನ್‌ ವತಿಯಿಂದ ನಡೆದ ಆರೋಗ್ಯ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ಪ್ರಥಮ್‌ ಸಂಸ್ಥೆಯಿಂದ ನೀಡಲಾದ ಮಕ್ಕಳಿಗೆ ಉಚಿತ ಪುಸ್ತಕಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸ್ವಚ್ಛತೆ ಕಾಯ್ದುಕೊಂಡರೆ ದೇಹ ಪ್ರವೇಶಿಸುವ ಬ್ಯಾಕ್ಟೀರಿಯಾ ಹಾಗೂ ಕ್ರಿಮಿಗಳನ್ನು ತಡೆಗಟ್ಟಬಹುದಾಗಿದೆ. ಮಕ್ಕಳು ಪ್ರತಿನಿತ್ಯ 2 ಲೀಟರ್‌ ಶುದ್ದ ಅಥವಾ ಕುದಿಸಿ ಆರಿಸಿದ ನೀರು ಸೇವನೆ ಮಾಡಬೇಕು. ಮಕ್ಕಳು ಟಿವಿ, ಕಂಪ್ಯೂಟರ್‌ ಚಟಗಳನ್ನು ಅಂಟಿಸಿಕೊಳ್ಳದೇ ದೈಹಿಕ ಚಟುವಟಿಕೆಗಳಿಗಾಗಿ ಆಟಗಳನ್ನು ಆಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಶಿಕ್ಷ ಣ ಪೌಂಡೇಷನ್‌ ತಾಲೂಕು ಸಂಯೋಜಕ ವಸಂತ್‌ ಕುಮಾರ್‌ ಮಾತನಾಡಿ, ಶಿಕ್ಷ ಣ ಪೌಂಡೇಷನ್‌ ವತಿಯಿಂದ ತಾಲೂಕಿನ 62 ಶಾಲೆಗಳಲ್ಲಿ ಪ್ರೇರಣಾ 2.0 ಮೊದಲಾಗಿ ವಿಭಿನ್ನ ಕಾರ‍್ಯಕ್ರಮಗಳನ್ನು ರೂಪಿಸಲಾಗಿದ್ದು, ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಲು ಪ್ರಥಮ್‌ ಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದರು.

ಅನಿಕೇತನ ಟ್ರಸ್ಟ್‌ ಕಾರ್ಯದರ್ಶಿ ಡಿ.ಶ್ರೀಕಾಂತ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷ ಕ ಟಿ.ವೆಂಕಟರವಣಪ್ಪ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ ವೆಂಕಟೇಶ್‌, ಶಿಕ್ಷ ಣ ಪೌಂಡೇಷನ್‌ ಸಂಯೋಜಕರಾದ ನಾರಾಯಣಸ್ವಾಮಿ, ಕುಮಾರ ನಾಯಕ್‌ ಮೊದಲಾದವರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ