ಆ್ಯಪ್ನಗರ

ಟೊಮೇಟೊ ಟ್ಯಾಂಕರ್‌ ಮಗುಚಿ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್‌ವೊಂದು ರಸ್ತೆಯಲ್ಲೇ ಮುಗುಚಿಕೊಂಡಿರುವ ಘಟನೆ ಸೋಂಪುರ ಹೋಬಳಿಯ ಎಡೇಹಳ್ಳಿಯ ರಾಷ್ಟ್ರೀಯ ಹೆದ್ದಾರಿ4ರ ತುಮಕೂರು-ಬೆಂಗಳೂರು ರಸ್ತೆಯಲ್ಲಿನಡೆದಿದೆ.

Vijaya Karnataka 23 Sep 2019, 3:31 pm
ದಾಬಸ್‌ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್‌ವೊಂದು ರಸ್ತೆಯಲ್ಲೇ ಮುಗುಚಿಕೊಂಡಿರುವ ಘಟನೆ ಸೋಂಪುರ ಹೋಬಳಿಯ ಎಡೇಹಳ್ಳಿಯ ರಾಷ್ಟ್ರೀಯ ಹೆದ್ದಾರಿ4ರ ತುಮಕೂರು-ಬೆಂಗಳೂರು ರಸ್ತೆಯಲ್ಲಿನಡೆದಿದೆ.
Vijaya Karnataka Web tomato canter accident driver injured
ಟೊಮೇಟೊ ಟ್ಯಾಂಕರ್‌ ಮಗುಚಿ ಗಾಯ


ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ರಾಮಮೂರ್ತಿ (27) ಗಾಯಗೊಂಡಿರುವ ಕ್ಯಾಂಟರ್‌ ಚಾಲಕ. ಸಹಾಯಕ ರಾಜಗೋಪಾಲ್‌ (25) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನಾ ವಿವರ :
ಭಾನುವಾÃ ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕಡೆಯಿಂದ ಬೆಂಗಳೂರು ಮಾರ್ಗವಾಗಿ ಕೋಲಾರ ಕಡೆಗೆ ಕೆಎ-16-ಡಿ-0665 ಸಂಖ್ಯೆಯ ಕ್ಯಾಂಟರ್‌ ಟೊಮೇಟೊ ಹಣ್ಣುಗಳನ್ನು ತುಂಬಿಕೊಂಡು ಕೋಲಾರ ಮಾರುಕಟ್ಟೆಗೆ ಹೋಗುತ್ತಿದ್ದಾಗ ಎಡೇಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್‌ ಪಲ್ಟಿಯಾಗಿದ್ದು ಚಾಲಕನಿಗೆ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು ದಾಬಸ್‌ಪೇಟೆ ಸರಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಕಂಟೈನರ್‌ ಬಿದ್ದ ರಭಸಕ್ಕೆ ಕಂಟೈನರ್‌ನ ಮುಂಭಾಗ ಪೂರ್ಣ ಜಖಂಗೊಂಡಿದೆ.

ಕಂಟೈನರ್‌ ರಸ್ತೆಯಲ್ಲಿಮುಗುಚಿ ಬಿದ್ದ ಹಿನ್ನಲೆಯಲ್ಲಿ ರಸ್ತೆಯಲ್ಲಿಚೆಲ್ಲಿಚೆಲ್ಲಾಪಿಲ್ಲಿಯಾಗಿ ಟೊಮೇಟೋ ಬಿದ್ದಿರುವುದು ಕಂಡುಬಂತು. ಸುಮಾರು 5 ಲಕ್ಷ ಮೌಲ್ಯದ ಟಮೋಟ ಹಣ್ಣುಗಳು ನಷ್ಟವಾಗಿವೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ