ಆ್ಯಪ್ನಗರ

ಬೆಂಗಳೂರು ಗ್ರಾಮಾಂತರ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು

ಕೃಷಿ ಹೊಂಡದಲ್ಲಿ ಇಬ್ಬರು ಬಾಲಕರು ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮುಗಬಾಳ ಗ್ರಾಮದ ಸಮೀಪವಿರುವ ತೋಟವೊಂದರಲ್ಲಿ ಹಸು ಮೇಯಿಸಿಕೊಂಡು ಹಸುವಿಗೆ ಹುಲ್ಲು ತರಲು ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

Vijaya Karnataka Web 4 Aug 2020, 11:24 am
ಜಡಿಗೇನಹಳ್ಳಿ: ಕೃಷಿ ಹೊಂಡದಲ್ಲಿ ಮುಳಗಿ ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮುಗಬಾಳ ಗ್ರಾಮದಲ್ಲಿ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


6ನೇ ತರಗತಿಯ ವಿದ್ಯಾರ್ಥಿ ವಿಶ್ವಾಸ್‌ (12) ಹಾಗೂ 7ನೇ ತರಗತಿಯ ವಿದ್ಯಾರ್ಥಿ ಅಭಿ (13) ಮೃತ ಬಾಲಕರು. ಇಬ್ಬರು ಮದ್ಯಾಹ್ನ 12 ಗಂಟೆಯ ಸಮಯದಲ್ಲಿ ಮುಗಬಾಳ ಗ್ರಾಮದ ಸಮೀಪವಿರುವ ತೋಟವೊಂದರಲ್ಲಿ ಹಸು ಮೇಯಿಸಿಕೊಂಡು ಹಸುವಿಗೆ ಹುಲ್ಲುಎತ್ತಿಕೊಂಡು ಬರಲು ತೆರಳಿದ್ದರು.

ಈ ವೇಳೆ ಒಬ್ಬ ಬಾಲಕ ಸಮೀಪವೇ ಇದ್ದ ಕೃಷಿ ಹೊಂಡದಲ್ಲಿ ಕೈತೊಳೆಯಲು ಮುಂದಾದ ವೇಳೆ ನೀರಿನಲ್ಲಿ ಮುಳುಗಿದ್ದಾನೆ. ಈ ಬಾಲಕ ಮುಳುಗುತ್ತಿದ್ದುದ್ದನ್ನು ಕಂಡ ಮತ್ತೊಬ್ಬ ಬಾಲಕ ಆತನನ್ನು ಮೇಲೆತ್ತಲು ಹೋಗಿ ಇಬ್ಬರೂ ಕೃಷಿ ಹೊಂಡದ ನೀರು ಪಾಲಾಗಿದ್ದಾರೆ. ಸಂಜೆ 5ರ ಸಮಯದಲ್ಲಿ ಗ್ರಾಮಸ್ಥರು ತೋಟದ ಬಳಿ ತೆರಳಿದಾಗ ಕೃಷಿ ಹೊಂಡದಲ್ಲಿ ಒಬ್ಬ ಬಾಲಕನ ಶವ ತೇಲುತ್ತಿರುವುದು ಬೆಳಕಿಗೆ ಬಂದಿದೆ. ಆತನ್ನು ಮೇಲೆತ್ತಿದ್ದಾಗ ಈ ಬಾಲಕ ಜತೆಗೆ ಮತ್ತೊಬ್ಬ ಬಾಲಕ ಸಹ ಬಂದಿದ್ದು. ಇಬ್ಬರೂ ಕೃಷಿ ಹೊಂಡದಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರು ಇಬ್ಬರು ಬಾಲಕರನ್ನು ಮೇಲೆತ್ತಿದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ್ಯಕೂಪವಾದ ಕೃಷಿಹೊಂಡ
ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಈ ಕೃಷಿ ಹೊಂಡಗಳು ಸುಮಾರು ಅಡಿಗಳಷ್ಟು ಆಳವಿರುವ ಕಾರಣ ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನೀರು ಶೇಖರಣೆಯಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ಈ ಕೃಷಿ ಹೊಂಡಗಳು ನೀರು ಶೇಖರಣೆಯಾಗುವುದಕ್ಕಿಂತ ಮಕ್ಕಳ ಪಾಲಿನ ಮೃತ್ಯುಕೂಪಗಳಾಗಿ ಮಾರ್ಪಡುತ್ತಿವೆ.

ಈಜಾಡಲು ತೆರಳುವ ವಿದ್ಯಾರ್ಥಿಗಳು, ಕೃಷಿ ಹೊಂಡದ ಸಮೀಪ ಕೆಲಸ ಮಾಡುವ ರೈತರು ಕೃಷಿ ಹೊಂಡಗಳಲ್ಲಿ ಬಿದ್ದು ಸಾವನ್ನಪ್ಪುತ್ತಿದ್ದಾರೆ. ಕೃಷಿ ಹೊಂಡಗಳನ್ನು ನಿರ್ಮಾಣದ ಜತೆಗೆ, ಅವುಗಳ ಸುತ್ತ ತಂತಿ ಬೇಲಿ ಮತ್ತಿತರವನ್ನು ಅಳವಡಿಸಿದರೆ, ಸಂಭವಿಸುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ