ಆ್ಯಪ್ನಗರ

ಚಿಕ್ಕಪ್ಪನಿಂದ ಅಣ್ಣನ ಮಗಳ ಮೇಲೆಯೇ ಅತ್ಯಾಚಾರ, ಕೊಲೆ: ಆರೋಪಿ ಬಂಧನ

ಚಿಕ್ಕಪ್ಪನೇ ಮಗಳಿಗೆ ಮದ್ಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅಮಾನವೀಯ ಕೃತ್ಯವನ್ನು ಪೊಲೀಸರು ಬೇಧಿಸಿದ್ದಾರೆ. ಪೊಲೀಸರು ಮೃತಳ ಮೊಬೈಲ್‌ ಕರೆಗಳ ಮಾಹಿತಿ, ಸಂಬಂಧಿಕರ ಮಾಹಿತಿ ಮೇರೆಗೆ ಮೃತಳ ಊರಲ್ಲೇ ಎದುರು ಮನೆಯಲ್ಲಿದ್ದ ಬಾಬಾ ಫಕ್ರುದ್ದೀನ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಡೆದ ತನ್ನ ಕೃತ್ಯದ ಬಗ್ಗೆ ಚಿಕ್ಕಪ್ಪ ಬಾಯ್ಬಿಟ್ಟಿದ್ದಾನೆ

Vijaya Karnataka Web 21 Oct 2020, 11:53 am
ಚಿಕ್ಕಬಳ್ಳಾಪುರ: ಕಳೆದ 15 ದಿನಗಳ ಹಿಂದೆ ಜಿಲ್ಲೆಯ ಬಾಗೇಪಲ್ಲಿ ನಗರದ ಹೊರವಲಯದಲ್ಲಿ ಸಿಕ್ಕಿದ ಅಪರಿಚಿತ ಮಹಿಳೆಯ ಮೃತದೇಹಕ್ಕೆ ಇದೀಗ ಹೊಸ ಟ್ವಿಸ್ಟ್‌ ಸಿಕ್ಕಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ತನ್ನ ಚಿಕ್ಕಪ್ಪನೇ ಮಗಳಿಗೆ ಮದ್ಯ ಕುಡಿಸಿ ಆಕೆಯ ಮೇಲೆ ಮೂರು ಬಾರಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅಮಾನವೀಯ ಘಟನೆಯನ್ನು ಬಾಗೇಪಲ್ಲಿ ಪೊಲೀಸರು ಕೊನೆಗೂ ಬೇಧಿಸಿದ್ದಾರೆ.

ಪಕ್ಕದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ, ನಗರಿ ತಾಲೂಕು ತಿರುಪತಿ ಬಳಿಯ ವಿಜಿಪುರ ಗ್ರಾಮದ ಬಿ.ಖಾಸಿಂ (35) ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯಾಗಿದ್ದು, ಈಕೆಯ ಚಿಕ್ಕಪ್ಪ ಬಾಬಾ ಫಕ್ರುದ್ದೀನ್‌(50) ಕೊಲೆ ಮಾಡಿದ ಆರೋಪಿ ಎಂದು ತನಿಖೆಯಿಂದ ದೃಢವಾಗಿದೆ.
ಮಧ್ಯಪ್ರದೇಶದಲ್ಲಿ ರಕ್ಷಕರೇ ಭಕ್ಷಕರು?: ಲಾಕಪ್‌ನಲ್ಲಿದ್ದ ಯುವತಿಯ ಮೇಲೆ 10 ದಿನ ಖಾಕಿಗಳಿಂದ ಅತ್ಯಾಚಾರ!

ಅ.7ರಂದು ಬಾಗೇಪಲ್ಲಿ ಪೊಲೀಸರು ಹಾಗೂ ಚಿಕ್ಕಬಳ್ಳಾಪುರ ಎಸ್‌ಪಿ ಮಿಥುನ್‌ ಕುಮಾರ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ವೇಳೆ ಮಹಿಳೆಯ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಿದ್ದು, ಮೃತ ಮಹಿಳೆಯ ಗುರುತು ಪತ್ತೆ ಹಚ್ಚಿದ್ದ ಮಹಿಳೆಯ ಸಂಬಂಧಿಯೊಬ್ಬರು ಮೃತಳ ಹೆಸರು ವಿಳಾಸ ತಿಳಿಸಿದ್ದರು.
ಹತ್ರಾಸ್‌ ಕೇಸ್ ತನಿಖೆಗೆ ಯಾರು ಉಸ್ತುವಾರಿ? ವಿಚಾರಣೆ ಎಲ್ಲಿ? ಶೀಘ್ರದಲ್ಲೇ ಸುಪ್ರೀಂ ತೀರ್ಮಾನ

ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆಕೆಯ ಮೊಬೈಲ್‌ ಕರೆಗಳ ಮಾಹಿತಿ, ಸಂಬಂಧಿಕರ ಮಾಹಿತಿ ಮೇರೆಗೆ ಮೃತಳ ಊರಲ್ಲೇ ಎದುರು ಮನೆಯಲ್ಲಿದ್ದ ಬಾಬಾ ಫಕ್ರುದ್ದೀನ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಡೆದ ತನ್ನ ಕೃತ್ಯದ ಬಗ್ಗೆ ಚಿಕ್ಕಪ್ಪ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಬಾಬಾ ಫಕ್ರುದ್ದೀನ್‌ನನ್ನು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ