ಆ್ಯಪ್ನಗರ

ನೆಲಮಂಗಲ: ಕೊರೊನಾ ವಿರುದ್ಧ ಹೋರಾಟಕ್ಕೆ ಸ್ವಯಂ ಲಾಕ್‌ಡೌನ್‌ ಅಸ್ತ್ರ, ಜನರ ನಿರ್ಧಾರ

ವ್ಯಾಪಾರಕ್ಕೆ ಸಮಯ ನಿಗದಿ | ನೆಲಮಂಗಲದಲ್ಲಿ13 ಜನ ಗುಣಮುಖ | ನಮ್ಮ ರಕ್ಷಣೆಗೆ ನಾವೇ ಜವಾಬ್ದಾರರು ಎಂದು ನಿರ್ಧಾರ ಕೈಗೊಂಡ ಜನರು | ಮಧ್ಯಾಹ್ನ ವೇಳೆ ಸಂಪೂರ್ಣ ಬಂದ್‌

Vijaya Karnataka Web 9 Jul 2020, 12:36 pm
ನೆಲಮಂಗಲ ಗ್ರಾಮಾಂತರ: ತಾಲೂಕಿನಲ್ಲಿ ಕೊರೊನಾ ಪಾಸಿಟಿವ್‌ ಕೇಸ್‌ಗಳು ಜು.7ರ ಹೆಲ್ತ್‌ ಬುಲೆಟಿನ್‌ ಪ್ರಕಾರ 61ಕ್ಕೆ ಏರಿಕೆಯಾದರೇ 4 ಜನರು ಮರಣ ಹೊಂದಿದ್ದು, ಇದರಿಂದ ನಮ್ಮ ರಕ್ಷಣೆಗೆ ನಾವೇ ಜವಾಬ್ದಾರರು ಎಂಬುದಾಗಿ ಜನರು ಸ್ವಯಂ ಲಾಕ್‌ಡೌನ್‌ಗೆ ಮುಂದಾಗಿದ್ದಾರೆ.
Vijaya Karnataka Web ಲಾಕ್‌ಡೌನ್‌
ಲಾಕ್‌ಡೌನ್‌


ತಾಲೂಕಿನ ಆಹಾರ ಧಾನ್ಯ ದಿನಸಿ ವರ್ತಕರು, ಛಾಯಾಚಿತ್ರ ಹಾಗೂ ವಿಡಿಯೋಗ್ರಾಫರ್‌ ಸಂಘ, ಮೆಡಿಕಲ್‌ ವ್ಯಾಪಾರಿಗಳ ಸಂಘ, ಜವಳಿ ವರ್ತಕರು, ಚಿನ್ನಬೆಳ್ಳಿ ವರ್ತಕರು ಸೇರಿದಂತೆ ವಿವಿಧ ವ್ಯಾಪಾರಿಗಳು ಸ್ವಯಂ ಲಾಕ್‌ಡೌನ್‌ ಮಾಡಿಕೊಂಡಿದ್ದು ಜನರ ಅನುಕೂಲಕ್ಕಾಗಿ ನಿಗದಿತ ಸಮಯದಲ್ಲಿ ವ್ಯಾಪಾರ ಮಾಡಲು ನಿರ್ಧಾರ ಮಾಡಿಕೊಂಡಿದ್ದಾರೆ.

ಮಧ್ಯಾಹ್ನದ ನಂತರ ಬಂದ್‌: ನಗರದಲ್ಲಿ ಎಲ್ಲಾ ವರ್ತಕರು ಜು. 9ರಿಂದ ಜು.23ವರೆಗೂ ಬೆಳಗ್ಗೆ 7ರಿಂದ ಮಧ್ಯಾಹ್ನ 1.30ರವರೆಗೂ ಮಾತ್ರ ವ್ಯಾಪಾರ, ಛಾಯಾಚಿತ್ರ ಹಾಗೂ ವಿಡಿಯೋಗ್ರಾಫರ್‌ಗಳು ಹಾಗೂ ಚಿನ್ನಬೆಳ್ಳಿ ಅಂಗಡಿಗಳು 15 ದಿನಗಳ ಕಾಲ ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆವರೆಗೂ ವ್ಯಾಪಾರ, ಜವಳಿಯವರು ಸೋಮವಾರದವರಗೂ ಎಲ್ಲಾ ಅಂಗಡಿ ಲಾಕ್‌ ಮಾಡಲಿದ್ದು ಜು.9 ಗುರುವಾರದ ಮಧ್ಯಾಹ್ನದಿಂದ ಅಕ್ಷರಶಃ ತಾಲೂಕು ಸ್ವಯಂ ಬಂದ್‌ ಪಾಲನೆಯಾಗಲಿದೆ.

ಆಟೋ ಪ್ರಚಾರ: ವರ್ತಕರ ಸಂಘದಿಂದ ಕೊರೊನಾ ಜಾಗೃತಿ ಹಾಗೂ ವ್ಯಾಪಾರಕ್ಕೆ ಸಮಯ ನಿಗದಿ ಮಾಡಿರುವ ಬಗ್ಗೆ ನಗರದಾಧ್ಯಂತ ಆಟೋ ಪ್ರಚಾರ ಮಾಡಲಾಗುತಿದ್ದು ಕರಪತ್ರಗಳನ್ನು ಹಂಚಲಾಗಿದೆ.

13 ಜನರು ಗುಣಮುಖ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ 61 ಜನರಲ್ಲಿ 12 ಜನ ಚಿಕಿತ್ಸೆ ಪಡೆಯುತ್ತಿದ್ದರೆ ಕೊರೊನಾ ಪಾಸಿಟಿವ್‌ ಬಂದ 13 ಜನರು ಗುಣಮುಖವಾಗಿದ್ದು ಉಳಿದವರು ಮನೆಗಳಲ್ಲಿ ಹೋಮ್‌ ಕ್ವಾರಂಟೈನ್‌ನಲ್ಲಿಇದ್ದಾರೆ.

ಒಮ್ಮತದ ತೀರ್ಮಾನ: ತಾಲೂಕಿನ ವರ್ತಕರ ಸಂಘದ ತಾಲೂಕು ಅಧ್ಯಕ್ಷ ನಾಗರಾಜು, ಛಾಯಾಚಿತ್ರ ಹಾಗೂ ವಿಡಿಯೋಗ್ರಾಫರ್‌ಗಳ ಸಂಘದ ತಾಲೂಕು ಅಧ್ಯಕ್ಷ ಬೈರನಹಳ್ಳಿಪ್ರಕಾಶ್‌,ಜವಳಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಶಿವಪ್ರಕಾಶ್‌, ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಸೇರಿದಂತೆ ವಿವಿಧ ವ್ಯಾಪಾರಿಗಳ ಒಮ್ಮತದ ನಿರ್ಧಾರ ಸ್ವಯಂ ಲಾಕ್‌ಡೌನ್‌ಗೆ ಕಾರಣವಾಗಿದ್ದು ಜನರ ಸ್ಪಂದನೆ ಅನಿವಾರ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ