ಆ್ಯಪ್ನಗರ

ಗೋರಕ್ಷಣೆಗಾಗಿ ಪಾದಯಾತ್ರೆ:ಮೊಹಮದ್‌ ಫೈಜಾಖಾನ್‌

ಜಗತ್ತಿನಲ್ಲಿ ಗೋವುಗಳನ್ನು ಮಾತೆಯಂತೆ ಕಾಣುವ ದೇಶ ಭಾರತ ಮಾತ್ರ, ಇಲ್ಲಿ ಬದುಕುವ ಪ್ರತಿಯೊಬ್ಬರು ಗೋವಿನ ರಕ್ಷ ಣೆಗಾಗಿ ನಿಲ್ಲಬೇಕು. ಗೋಹತ್ಯೆ ನಿಷೇಧಕ್ಕೆ ಮುಂದಾಗಬೇಕು ಎಂದು ಪಾದಯಾತ್ರಿ ಮೊಹಮದ್‌ ಫೈಜಾಖಾನ್‌ ಹೇಳಿದರು.

Vijaya Karnataka Web 5 Jan 2019, 5:00 am
ದಾಬಸ್‌ಪೇಟೆ: ಜಗತ್ತಿನಲ್ಲಿ ಗೋವುಗಳನ್ನು ಮಾತೆಯಂತೆ ಕಾಣುವ ದೇಶ ಭಾರತ ಮಾತ್ರ, ಇಲ್ಲಿ ಬದುಕುವ ಪ್ರತಿಯೊಬ್ಬರು ಗೋವಿನ ರಕ್ಷ ಣೆಗಾಗಿ ನಿಲ್ಲಬೇಕು. ಗೋಹತ್ಯೆ ನಿಷೇಧಕ್ಕೆ ಮುಂದಾಗಬೇಕು ಎಂದು ಪಾದಯಾತ್ರಿ ಮೊಹಮದ್‌ ಫೈಜಾಖಾನ್‌ ಹೇಳಿದರು.
Vijaya Karnataka Web way faring for cow protection mohamed faizakhan
ಗೋರಕ್ಷಣೆಗಾಗಿ ಪಾದಯಾತ್ರೆ:ಮೊಹಮದ್‌ ಫೈಜಾಖಾನ್‌


ದಾಬಸ್‌ಪೇಟೆ ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಗೋವಿನ ಮಹತ್ವ ಹಾಗೂ ಗೋಹತ್ಯೆ ನಿಷೇಧ ಮಾಡಲು ನಾವೇನು ಮಾಡಬೇಕು ಎಂಬ ವಿಷಯವನ್ನು ಕುರಿತು ಮಾತನಾಡಿದರು.

ಗೋಹತ್ಯೆ ನಿಷೇಧ ಮಾಡಲು ದೇಶ ಸುತ್ತಿಜಾಗೃತಿ ಮೂಡಿಸಲು ಮುಂದಾಗಿದ್ದೇನೆ, ಇಡೀ ಜಗತ್ತಿನಲ್ಲಿಯೇ ಮುಸ್ಲಿಮರಿಗೆ ವಿಶೇಷ ಸ್ಥಾನಮಾನ ನೀಡಿ ಸಮಾನತೆ ನೀಡಿರುವುದು ಭಾರತ ಮಾತ್ರ, ಆದರೆ ಮುಸ್ಲಿಂ ಸಮುದಾಯದವರು ಭಾರತದ ಸಂಸ್ಕೃತಿಗೆ, ನಂಬಿಕೆಗೆ ಮೃತ್ಯುವಾಗಬಾರದು, ಭಾರತದ ಮಾತೃಸ್ವರೂಪವಾದ ಗೋವುಗಳನ್ನು ರಕ್ಷ ಣೆಗೆ ಎಲ್ಲರೂ ನಿಲ್ಲಬೇಕು, ಒಂದು ವೇಳೆ ಸರಕಾರ ಗೋ ಹತ್ಯೆ ನಿಷೇಧ ಮಾಡಲು ಹಿಂದೇಟು ಹಾಕಿದರೆ, ನಾವೆಲ್ಲರೂ ಒಂದಾಗಿ ಜಾಗೃತಿ ಮೂಡಿಸಿ ನಿಷೇಧ ಮಾಡುವಂತೆ ಆಗ್ರಹಿಸಬೇಕು ಎಂದರು.

ದೇಸೀ ಗೋವುಗಳ ತಳಿಯ ಸೇವೆ ಮತ್ತು ಸಂರಕ್ಷ ಣೆ ಮತ್ತು ಅವುಗಳ ಅಭಿವೃದ್ದಿಗೆ ಜನರಲ್ಲಿ ಜಾಗೃತಿ ಮೂಡಿಸುತ್ತ, ದೇಸಿ ಹಸುಗಳ ಗೊಬ್ಬರ ಬಳಸಿ ಕೃ ಪ್ರೋತ್ಸಾಹಿಸುವುದು, ಭಾರತಕ್ಕೆ ವಿಶ್ವ ದರ್ಜೆ ಸ್ಥಾನಮಾನ ಸಿಗಬೇಕು ಎಂಬ ಆಶಯದಿಂದ ಪಾದಯಾತ್ರೆ ಕೈಗೊಂಡಿದ್ದೇನೆ, ಭಾರತ ದೇಶದಲ್ಲಿನ ಸ್ವದೇಶಿ ಗೋ ತಳಿಗಳ ರಕ್ಷ ಣೆ, ಆರೋಗ್ಯ, ಪ್ರಕೃತಿ ಕುರಿತು ಜನತೆಗೆ ಮಾಹಿತಿ ನೀಡಲು ಗೋ ಸೇವಾ ಸದ್ಬಾವನಾ ಯಾತ್ರೆಯನ್ನು ಆರಂಭಿಸಲಾಯಿತು ಎಂದರು.

ಪಾದಯಾತ್ರೆ ಹಿನ್ನೆಲೆ; 14 ಸಾವಿರ ಕಿಮೀ ಪಾದಯಾತ್ರೆ: ಗೋಹತ್ಯೆ ನಿಷೇಧಿಸುವಂತೆ ಆಗ್ರಹಿಸಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಪಾದಯಾತ್ರೆ ಕೈಗೊಳ್ಳಲು ಗುವಾಹಟಿಯಿಂದ ಆರಂಭಿಸಿ ದಾಬಸ್‌ಪೇಟೆ ಪಟ್ಟಣಕ್ಕೆ ಆಗಮಿಸಿದ ಪಾದಯಾತ್ರಿಗಳನ್ನು ಸಾರ್ವಜನಿಕರು ಸ್ವಾಗತಿಸಿದ್ದರು.

ಗೋ ಹತ್ಯೆ ನಿಷೇಧ ಮಾಡುವಂತೆ ಪಾದಯಾತ್ರೆ ಮಾಡುತ್ತಿರುವ ಮೊಹಮದ್‌ ಫೈಜಾಖಾನ್‌ ಗೋಸೇವಾ ಸದ್ಬಾವನಾ ಪಾದಯಾತ್ರೆಯ ಮೂಲಕ ಈಗಾಗಲೇ 8 ಸಾವಿರ ಕಿಲೋಮೀಟರ್‌ ಮುಗಿಸಿದ್ದು ನಂತರ ಕನ್ಯಾಕುಮಾರಿ ತಲುಪಿ ಅಲ್ಲಿಂದ ಮತ್ತೆ ಕಾಶ್ಮೀರದವರೆಗೂ ಒಟ್ಟು 14 ಸಾವಿರ ಕಿಲೋಮೀಟರ್‌ ಪಾದಯಾತ್ರೆ ಮಾಡುವ ಗುರಿಯನ್ನು ಹೊಂದಿದ್ದಾರೆ, ಯಾತ್ರೆಯ ನಡುವೆ ಪ್ರಮುಖ ಪಟ್ಟಣಗಳಲ್ಲಿ ಕಾರ್ಯಕ್ರಮ, ವಿಚಾರ ಸಂಕಿರಣ, ಜಾಗೃತಿ ಕಾರ್ಯಕ್ರಮ ಇನ್ನೂ ಮುಂತಾದ ಸಮಾರಂಭಗಳಲ್ಲಿ ಪಾಲ್ಗೊಂಡು ಸಾಗುತ್ತಿದ್ದಾರೆ.

ಈ ಸಂದರ್ಭದಲ್ಲಿ ದಾಬಸ್‌ಪೇಟೆ ಪಟ್ಟಣದ ಅನೇಕ ಮುಖಂಡರು, ಸಾರ್ವಜನಿಕರು ಇವರ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ