ಆ್ಯಪ್ನಗರ

ಒಂದು ದೇಶ ಒಂದು ವೇತನ ಜಾರಿ ಅಗತ್ಯ

ರಾಜ್ಯದಲ್ಲಿನೆರೆ ಪ್ರವಾಹಉಂಟಾಗಿ ತಿಂಗಳುಗಳೆ ಕಳೆದಿದ್ದರೂ ಬಿಜೆಪಿ ನೇತೃತ್ವದಕೇಂದ್ರ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿವಿಫಲವಾಗಿದ್ದು ನರೇಂದ್ರ ಮೋದಿಯವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬೆಂಗಳೂರು ಉತ್ತರ ವಲಯ ಸಿಐಟಿಯು ಉಪಾಧ್ಯಕ್ಷ ಹೆಚ್‌.ಎನ್‌.ಗೋಪಾಲಗೌಡಕೇಂದ್ರ ಸರಕಾರದ ವಿರುದ್ದಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 9 Sep 2019, 4:35 pm
ದಾಬಸ್‌ಪೇಟೆ : ರಾಜ್ಯದಲ್ಲಿನೆರೆ ಪ್ರವಾಹಉಂಟಾಗಿ ತಿಂಗಳುಗಳೆ ಕಳೆದಿದ್ದರೂ ಬಿಜೆಪಿ ನೇತೃತ್ವದಕೇಂದ್ರ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿವಿಫಲವಾಗಿದ್ದು ನರೇಂದ್ರ ಮೋದಿಯವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬೆಂಗಳೂರು ಉತ್ತರ ವಲಯ ಸಿಐಟಿಯು ಉಪಾಧ್ಯಕ್ಷ ಹೆಚ್‌.ಎನ್‌.ಗೋಪಾಲಗೌಡಕೇಂದ್ರ ಸರಕಾರದ ವಿರುದ್ದಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web we needs one country one wage enforcement
ಒಂದು ದೇಶ ಒಂದು ವೇತನ ಜಾರಿ ಅಗತ್ಯ


ದಾಬಸ್‌ಪೇಟೆ ಪಟ್ಟಣದಉದ್ದಾನೇಶ್ವರ ವೃತ್ತದಲ್ಲಿಸಿಐಟಿಯು ಸಂಘಟನೆುಂದ ಹಮ್ಮಿಕೊಂಡಿದ್ದ ಬೆಂಗಳೂರು ಉತ್ತರ 12ನೇ ಜಿಲ್ಲಾಕಾರ್ಮಿಕ ಸಮ್ಮೇಳನದ ಬಹಿರಂಗ ಸಭೆಯಲ್ಲಿಮಾತನಾಡಿದರು.

ಬಂಡವಾಳಶಾಹಿಗಳ ಪರವಿದ್ದು ಕಾರ್ಮಿಕರ ಪರವಾದ ನ್ಯಾಯಗಳನ್ನು ರೂಪಿಸುವಲ್ಲಿವಿಫಲವಾಗಿದೆ. ಕಾರ್ಮಿಕರಿಗೆ ರಕ್ಷಣೆಇಲ್ಲದಂತಾಗಿದೆ. ರಕ್ಷಣೆ ಮಾಡಬೇಕಾದ ಸರಕಾರವೇ ಕಾರ್ಮಿಕರಿಗೆ ವಿರೋಧವಾಗಿದ್ದು ಈ ದೇಶದಲ್ಲಿಎಡಪಕ್ಷಗಳು ಮಾತ್ರ ಕಾರ್ಮಿಕರ, ರೈತರ ಪರವಾಗಿದ್ದು ರಾಷ್ಟ್ರೀಯಪಕ್ಷಗಳು ವಿರೋಧಿಗಳಾಗಿ ವರ್ತಿಸುತ್ತಿರುವುದನ್ನು ಕಾಣಬಹುದಾಗಿದೆ ಎಂದರು.

ಸಿಐಟಿಯು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ ಕೇಂದ್ರ ಒಂದು ದೇಶ ಒಂದು ವೇತನ ಎಂಬ ಯೋಜನೆಯನ್ನು ಜಾರಿಗೊಳಿಸಬೇಕಿದೆ. ದೇಶದಆರ್ಥಿಕತೆ ಆಧೋಗತಿಗೆ ಇಳಿದಿದ್ದು ಎಲೆಕ್ಟ್ರಾನಿಕ್ಸ್‌ ಕಂಪನಿಗಳು ಮುಚ್ಚಿಕೊಳ್ಳುತ್ತಿವೆ. ಕಾರ್ಮಿಕರು ವೇತನ ಹೆಚ್ಚಿಸಿ ಅಂದರೆ ದೇಶದ್ರೋಹದ ಪಟ್ಟ ಕಟ್ಟುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಸಿಐಟಿಯು ರಾಜ್ಯ ಸಮಿತಿಯಉಪಾಧ್ಯಕ್ಷಉಮೇಶ್‌,ತಾಲೂಕುಅಧ್ಯಕ್ಷ ತಿರುಮಲಚಾರ್‌ ಬೆಂಗಳೂರು ಉತ್ತರ ವಲಯಅಧ್ಯಕ್ಷ ಪ್ರತಾಪ್‌ಸಿಂಹ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನದಾಬಸ್‌ಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿಸುಮಾರು 1500ಕ್ಕೂ ಹೆಚ್ಚು ಕಾರ್ಮಿಕರು ರಾರ‍ಯಲಿ ನಡೆಸಿದರು, ತದನಂತರ ಉದ್ದಾನೇಶ್ವರ ವೃತ್ತದಲ್ಲಿನನ್ನೊಳಗೊಬ್ಬ ಭಗತ್‌ ಸಿಂಗ್‌ ಎಂಬ ಕಿರು ನಾಟಕವನ್ನು ಪ್ರದರ್ಶಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ