ಆ್ಯಪ್ನಗರ

ಸರಕಾರಿ ಹಾಗೂ ಸೌಲಭ್ಯ ವಂಚಿತ ಮಕ್ಕಳಿಗಾಗಿ ವಾರಾಂತ್ಯ ಕಾರ್ಯಾಗಾರ

ಸರಕಾರಿ ಹಾಗೂ ಸೌಲಭ್ಯ ವಂಚಿತ ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಸರಕಾರ ಚಿತ್ರಕಲೆ, ಕರಕುಶಲ, ಯೋಗ ಮೊದಲಾದ ತರಬೇತಿ ನೀಡುವ ವಾರಾಂತ್ಯ ಕಾರಾರ‍ಯಗಾರಗಳನ್ನು ಏರ್ಪಡಿಸಿದ್ದು, ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಕಾರ‍್ಯದರ್ಶಿ ಅಮಲಿ ನಾಯಕ್‌ ತಿಳಿಸಿದರು.

Vijaya Karnataka 10 Dec 2018, 5:00 am
ದೊಡ್ಡಬಳ್ಳಾಪುರ: ಸರಕಾರಿ ಹಾಗೂ ಸೌಲಭ್ಯ ವಂಚಿತ ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಲ್ಲಿ ಸರಕಾರ ಚಿತ್ರಕಲೆ, ಕರಕುಶಲ, ಯೋಗ ಮೊದಲಾದ ತರಬೇತಿ ನೀಡುವ ವಾರಾಂತ್ಯ ಕಾರಾರ‍ಯಗಾರಗಳನ್ನು ಏರ್ಪಡಿಸಿದ್ದು, ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಕಾರ‍್ಯದರ್ಶಿ ಅಮಲಿ ನಾಯಕ್‌ ತಿಳಿಸಿದರು.
Vijaya Karnataka Web week end workshop for government and disabled children
ಸರಕಾರಿ ಹಾಗೂ ಸೌಲಭ್ಯ ವಂಚಿತ ಮಕ್ಕಳಿಗಾಗಿ ವಾರಾಂತ್ಯ ಕಾರ್ಯಾಗಾರ


ನಗರ ಪ್ರವಾಸಿ ಮಂದಿರ ವೃತ್ತದ ಬಳಿಯಿರುವ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಲ ಭವನ ಸೊಸೈಟಿ, ಬೆಂಗಳೂರು ಹಾಗೂ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಸಹಯೋಗದೊಂದಿಗೆ ನಡೆದ ವಾರಾಂತ್ಯ ಕಾರಾರ‍ಯಗಾರದಲ್ಲಿ ಅವರು ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿಯೂ ಪ್ರತಿಭಾನ್ವಿತ ಮಕ್ಕಳಿದ್ದಾರೆ. ಆದರೆ ಅವರ ಪ್ರತಿಭೆಗೆ ಉತ್ತೇಜನ ನೀಡುವ ಕಾರ‍್ಯಕ್ರಮಗಳು ವಿರಳ. ಈ ನಿಟ್ಟಿನಲ್ಲಿ ಅಂತಹ ಮಕ್ಕಳಿಗಾಗಿ ಹಾಗೂ ಸೌಲಭ್ಯವಂಚಿತ ಮಕ್ಕಳ ಕೌಶಲವನ್ನು ಅಭಿವೃದ್ಧಿಪಡಿಸುವಲ್ಲಿ ಚಿತ್ರಕಲೆ, ಕರಕುಶಲ, ಯೋಗ, ಕರಾಟೆ, ಸಮೂಹಿಕ ನೃತ್ಯ ಮತ್ತು ಸಂಗೀತ ಹಾಗೂ ರಂಗಚಟುವಟಿಕೆಗಳಂತಹ ಕಲೆಗಳ ಕಾರಾರ‍ಯಗಾರ ಏರ್ಪಡಿಸಲಾಗುತ್ತಿದ್ದು, ಇದು ಮಕ್ಕಳ ಮುಂದಿನ ಭವಿಷ್ಯಕ್ಕೆ ಉಪಯೋಗವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ‍್ಯಕ್ರಮದ ಸಂಘಟಕ ಎಸ್‌.ಲೋಕೇಶ್‌, ಪ್ರತಿ ತಿಂಗಳು ಒಂದರಂತೆ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 3ರಿಂದ 5 ಗಂಟೆಯವರೆಗೆ ನಡೆಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಸೊಸೈಟಿ ಸೂಚನೆ ನೀಡಿದೆ. ಸರಕಾರಿ ಶಾಲೆಯ ಮಕ್ಕಳು ಹಾಗೂ ಸೌಲಭ್ಯವಂಚಿತ ಮಕ್ಕಳಿಗೆ ವಿಶೇಷವಾಗಿ ಈ ಕಾರ‍್ಯಗಾರವನ್ನು 6 ತಿಂಗಳ ಕಾಲ ತಿಂಗಳಿಗೆ 50 ಮಂದಿ ಮಕ್ಕಳಂತೆ 250 ಮಕ್ಕಳಿಗೆ ಚಿತ್ರಕಲೆ, ಕರಕುಶಲ, ಯೋಗ, ಕರಾಟೆ, ಸಾಮೂಹಿಕ ನೃತ್ಯ ಮತ್ತು ಸಂಗೀತ ಹಾಗೂ ರಂಗಚಟುವಟಿಕೆಗಳಂತಹ ಕಲೆಗಳನ್ನು ತಿಂಗಳಿಗೆ ಒಂದು ಪ್ರಕಾರದಂತೆ ಹೇಳಿಕೊಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗೆ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆಯ ಮೇಲ್ವಿಚಾರಕ ಬಸವರಾಜ್‌ ಅವರನ್ನು ಸಂಪರ್ಕಿಸಬಹುದಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಶೋಭಾ, ಪದ್ಮಾವತಿ, ಲಕ್ಷ್ಮಿ, ವಿಜಯ ಲಕ್ಷ್ಮಿ, ಸ್ನೇಹ ಭಾರತಿ ತೆರೆದ ತಂಗುದಾಣದ ಸಂಯೋಜಕರಾದ ಧರಣೇಶ್‌ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ