ಆ್ಯಪ್ನಗರ

ಅನರ್ಹ ಎಂಟಿಬಿ ನಾಗರಾಜ್ ಗೆದ್ದರೆ 24 ಗಂಟೆಯಲ್ಲೇ ಸಚಿವ ಸ್ಥಾನ! ಹೊಸಕೋಟೆಯಲ್ಲಿ ಯಡಿಯೂರಪ್ಪ ಆಫರ್..!

ಹೊಸಕೋಟೆ ಅಭಿವೃದ್ಧಿಗಾಗಿ ಕುಮಾರಸ್ವಾಮಿ ಬಳಿ ಎಂಟಿಬಿ ನಾಗರಾಜ್ ಪತ್ರ ಕಳುಹಿಸಿದರೆ ಅದನ್ನು ವಾಪಸ್ ಕಳುಹಿಸುತ್ತಿದ್ದರು. ಇದರಿಂದ ಬೇಸತ್ತು ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿದರು - ಆರ್. ಅಶೋಕ್

Vijaya Karnataka 18 Nov 2019, 2:53 pm
ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಅನರ್ಹ ಶಾಸಕ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆದ್ದರೆ 24 ಗಂಟೆಗಳ ಒಳಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ಧಾರೆ. ಬಿಜೆಪಿ ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಅವರ ಬಂಡಾಯದಿಂದ ಕಾವೇರಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪ್ರಮಾಣ ವಚನದ ವೇಳೆ ಖುದ್ದು ಸಿಎಂ ಯಡಿಯೂರಪ್ಪ ಅವರೇ ಹಾಜರಿದ್ದರು. ಈ ಮೂಲಕ ಬಂಡಾಯ ಅಭ್ಯರ್ಥಿ, ಬಿಜೆಪಿಯಿಂದ ಉಚ್ಛಾಟಿತರಾದ ಶರತ್ ಬಚ್ಚೇಗೌಡಗೆ ನೇರ ಸಂದೇಶ ರವಾನೆ ಮಾಡಿದರು.
Vijaya Karnataka Web will give minister post to mtb nagaraj within 24 hours of winning karnataka cm bs yeddyurappa
ಅನರ್ಹ ಎಂಟಿಬಿ ನಾಗರಾಜ್ ಗೆದ್ದರೆ 24 ಗಂಟೆಯಲ್ಲೇ ಸಚಿವ ಸ್ಥಾನ! ಹೊಸಕೋಟೆಯಲ್ಲಿ ಯಡಿಯೂರಪ್ಪ ಆಫರ್..!


ಬಿಸಿ ಪಾಟೀಲ್‌ಗೆ ಬಿಸಿ ಮುಟ್ಟಿಸಿದ ಸ್ವಾಮೀಜಿ! ಜೆಡಿಎಸ್ ತಂತ್ರಕ್ಕೆ ಬೆದರಿ ಶ್ರೀಗಳ ಸಂಧಾನಕ್ಕೆ ಸಿಎಂ ಪುತ್ರ ದೌಡು!

ಹೊಸಕೋಟೆಯನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡ್ತಿನಿ ಎಂದು ಘೋಷಿಸಿದ ಸಿಎಂ ಯಡಿಯೂರಪ್ಪ, ಎಂಟಿಬಿ ನಾಗರಾಜ್ ಅವರ ಪರಿಶ್ರಮದಿಂದ ಹೊಸಕೋಟೆ ಕ್ಷೇತ್ರ ಅಭಿವೃದ್ದಿ ಆಗಲಿದೆ ಎಂದು ಹೇಳಿದರು. ಮುಸ್ಲಿಂ ಮತ್ತು ಅಲ್ಪಸಂಖ್ಯಾತರಲ್ಲೂ ಕೈ ಮುಗಿದು ಮನವಿ ಮಾಡ್ತೀನಿ ಎಂದ ಯಡಿಯೂರಪ್ಪ, ಈ ಬಾರಿ ವೋಟ್ ಹಾಕಿ ಸಪೋಟ್ ಮಾಡಿ ಎಂದು ಕೇಳಿಕೊಂಡರು. ಪಕ್ಷಕ್ಕೆ ದ್ರೋಹ ಮಾಡಿದವರನ್ನು ಈಗಾಗಲೇ ಉಚ್ಛಾಟನೆ ಮಾಡಾಯ್ತು ಎಂದು ಹೇಳಿದ ಯಡಿಯೂರಪ್ಪ, ಶರತ್ ಬಚ್ಚೇಗೌಡ ಅವರನ್ನ ಯಾವುದೇ ಕಾರಣಕ್ಕೂ ಮತ್ತೆ ಪಕ್ಷಕ್ಕೆ ವಾಪಸ್ ಕರೆದುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಎಂಟಿಬಿ ನಾಗರಾಜ್ ಎಂದು ಹೊಗಳಿದ ಯಡಿಯೂರಪ್ಪ, ನಾಗರಾಜ್ ಅವರನ್ನು ಗೆಲ್ಲಿಸಿ ಎಂದು ಹಾರ ಹಾಕಿದರು.

ಹೊಸಕೋಟೆ ಉಪಚುನಾವಣೆ ವರಿಷ್ಠರಿಂದ ಬಂಡಾಯ ಶಮನ: ಸಂಸದ ಮುನಿಸ್ವಾಮಿ

ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಹೊಸಕೋಟೆ ತಾಲೂಕಿನಲ್ಲಿ 20 ವರ್ಷಗಳಿಂದ ಸತತವಾಗಿ ಕುಡಿಯುವ ನೀರಿನ ಅಭಾವವಿದೆ. ಕೈ ಮುಗಿದು ಪರಿಪರಿಯಾಗಿ ಹೆಚ್ಡಿಕೆಗೆ ಅನುದಾನ ಕೊಡುವಂತೆ ಕೇಳಿಕೊಂಡೆ. ಆದ್ರೆ ಕೊಡಲಿಲ್ಲ. ಕೇವಲ ಜೆಡಿಎಸ್ ಎಂಎಲ್ಎಗಳಿಗೆ ಮಾತ್ರ ಕೊಟ್ರು. ನಾನು ಯಾವಾಗಲೂ ಪಾರದರ್ಶಕವಾಗಿ ಪ್ರಾಮಾಣಿಕವಾಗಿದ್ದೀನಿ ಎಂದು ಹೇಳಿದ ಎಂಟಿಬಿ, ತಾರತಮ್ಯ ಮಾಡದೆ ಅನುದಾನ ನೀಡುವ ರಾಜ್ಯದ ಧೀಮಂತ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಹೊಗಳಿದರು. ಎಂಟಿಗೆ ನಾನು ಟಿಕೆಟ್ ಕೊಟ್ಟೆ ಅಂತ ಸಿದ್ದರಾಮಯ್ಯ ಹೇಳ್ತಾರೆ, ಆದ್ರೆ, ನಾನು ಪಕ್ಷಕ್ಕೆ ಸೇರಿದಾಗ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದರು ಎಂದು ಎಂಟಿಬಿ ಹೇಳಿದ್ರು.

ಇದೇ ವೇಳೆ ಮಾತನಾಡಿದ ಸಚಿವ ಆರ್. ಅಶೋಕ್, ಎಂಟಿಬಿ ನಾಗರಾಜ್ ಹೊಸಕೋಟೆ ಕ್ಷೇತ್ರದ ಅಭಿವೃದ್ದಿಗಾಗಿ ರಾಜೀನಾಮೆ ಕೊಟ್ಟರು ಎಂದು ಹೇಳಿದರು. ಹೊಸಕೋಟೆ ಅಭಿವೃದ್ಧಿಗಾಗಿ ಕುಮಾರಸ್ವಾಮಿ ಬಳಿ ಎಂಟಿಬಿ ನಾಗರಾಜ್ ಪತ್ರ ಕಳುಹಿಸಿದರೆ ಅದನ್ನು ವಾಪಸ್ ಕಳುಹಿಸುತ್ತಿದ್ದರು. ಇದರಿಂದ ಬೇಸತ್ತು ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿದರು ಎಂದು ಅಶೋಕ್ ಹೇಳಿದರು. ಕೇಂದ್ರದಲ್ಲಿ ನಾಲ್ಕೂ ಮುಕ್ಕಾಲು ವರ್ಷ, ರಾಜ್ಯದಲ್ಲಿ ಮೂರೂವರೆ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತೆ. ಈ ಸರಕಾರ ರಚನೆಗೆ ಯಾರಾದ್ರೂ ಕಾರಣರಾಗಿದ್ದರೆ ಅದು ಎಂಟಿಬಿ ನಾಗರಾಜ್ ಎಂದು ಹೇಳಿದ ಅಶೋಕ್, ಇಂಥವರಿಗೆ ಮೋಸ ಮಾಡಿದರೆ ದೇವರು ಮೆಚ್ಚುತ್ತಾನಾ ಎಂದು ಪ್ರಶ್ನಿಸಿದ ಅಶೋಕ್, ಅವರಿಗೆ ದ್ರೋಹ ಬಗೆದರೆ ನಿಮಗೆ ಒಳ್ಳೆಯದಾಗಲ್ಲ ಎಂದು ಬಂಡಾಯ ಅಭ್ಯರ್ಥಿ ಶರತ್‌ ಬಚ್ಚೇಗೌಡಗೆ ಟಾಂಗ್ ಕೊಟ್ಟರು.

ಎದೆ ಕೊಯ್ದುಕೊಂಡ ಎಂಟಿಬಿ ಅಭಿಮಾನಿ..!

ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಕೆ ವೇಳೆ ಎಂಟಿಬಿಗೆ ಜೈಕಾರ ಹಾಕಿದ ಅಭಿಮಾನಿಯೊಬ್ಬ ಎದೆ ಕೊಯ್ದುಕೊಂಡ ಘಟನೆ ನಡೆದಿದೆ. ಎದೆ ಭಾಗಕ್ಕೆ ಚುಚ್ಚಿಕೊಂಡ ಕಾರ್ಯಕರ್ತ, ರಕ್ತ ಸೋರುತ್ತಿದ್ದರೂ ಎಂಟಿಬಿಗೆ ಜೈಕಾರ ಹಾಕುತ್ತಿದ್ದ. ಕೂಡಲೇ ಕಾರ್ಯಕರ್ತರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು.

ಸರಕಾರದ ಭವಿಷ್ಯ ಕಾದು ನೋಡಿ : ಕೋಡಿಹಳ್ಳಿ ಶ್ರೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ