ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಕೆಲಸದಿಂದ 46 ಕಾರ್ಮಿಕರ ವಜಾ, ಕಂಪನಿಯ ಮುಂದೆ ಪ್ರತಿಭಟನೆ
ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 46 ಮಂದಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ಕಾರ್ಮಿಕರು ಕಾರ್ಖಾನೆ ಹೊರಗೆ ನಿಂತು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಪ್ರತಿಭಟನೆ ಮಾಡಿದ ಘಟನೆ ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
Vijaya Karnataka Web 6 Jul 2020, 9:24 am
ದಾಬಸ್ಪೇಟೆ: ಪ್ರತಿಷ್ಠಿತ ಟಿಸಿಐ ಸಫ್ಲೆತ್ರೖ ಚೈನ್ ಸಲ್ಯೂಷನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 46 ಮಂದಿ ಕಾರ್ಮಿಕರನ್ನು ವಿನಾಕಾರಣ ಕೆಲಸದಿಂದ ತೆಗೆದುಹಾಕಲಾಗಿದೆ. ವಜಾಗೊಂಡಿರುವ ಕಾರ್ಮಿಕರು ಕಾರ್ಖಾನೆ ಹೊರಗೆ ನಿಂತು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಪ್ರತಿಭಟನೆ ಮಾಡಿದ ಘಟನೆ ಕೈಗಾರಿಕಾ ಪ್ರದೇಶದಲಿ ನಡೆದಿದೆ.
ಕೆಲಸದಿಂದ ವಜಾ
ವಜಾಗೊಂಡಿರುವ ಕಾರ್ಮಿಕ ಕರಿಯಣ್ಣ ಮಾತನಾಡಿ, ಜುಲೈ 4ರಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 46 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಕಂಪನಿಯ ಮಾಲೀಕರಾಗಲಿ, ವ್ಯವಸ್ಥಾಪಕರಾಗಲಿ, ಗುತ್ತಿಗೆದಾರರಾಗಲಿ ಕೆಲಸದಿಂದ ವಜಾ ಮಾಡುತ್ತೇವೆ ಎಂಬ ಯಾವುದೇ ಪೂರ್ವ ಮಾಹಿತಿಯನ್ನಾಗಲಿ, ಕೆಲಸದಿಂದ ತೆಗೆದಿರುವ ಮುಖ್ಯ ಉದ್ದೇಶವೆನೆಂದು ತಿಳಿಸದೇ ಏಕಾಏಕಿ ಕೆಲಸದಿಂದ ವಜಾ ಮಾಡಿದ್ದಾರೆ. ಕೆಲಸವಿಲ್ಲದೆ ನಾವು ಇಂದು ಬೀದಿಗೆ ಬಿದ್ದಿದ್ದು ಮತ್ತೆ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಾಂತಿಯುತ ಹೋರಾಟ
ಕಾರ್ಮಿಕ ಗಂಗಾಧರ್ ಮಾತನಾಡಿ, ಇದು ಪ್ರತಿಷ್ಠಿತ ಕಂಪನಿಯಾಗಿದ್ದರೂ, ಕಾರ್ಮಿಕರಿಗೆ ಮೂಲಸೌಲಭ್ಯಗಳನ್ನು ನೀಡಲು ಸತಾಯಿಸುತ್ತಿದೆ. ಹಲವು ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಇದ್ದಕ್ಕಿದಂತೆ ಕೆಲಸದಿಂದ ವಜಾ ಮಾಡಿದರೆ ಕಾರ್ಮಿಕರ, ಜೀವನ ಹಾಗೂ ಕುಟುಂಬದ ಪಾಡೇನು? ವಜಾಗೊಂಡಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ಕಂಪನಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾರ್ಮಿಕ ವಿರೋಧ ನೀತಿ
ಈ ಬಗ್ಗೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ಲಾಕ್ಡೌನ್ ನೆಪಹೇಳಿ ಕಂಪನಿಯಲ್ಲಿ ಉತ್ಪಾದನೆ ಇಲ್ಲವೆಂದು ಸಬೂಬು ಹೇಳಿ ಇದೀಗ 46 ಕಾರ್ಮಿಕರನ್ನು ಸಮರ್ಥವಾದ ಉದ್ದೇಶವಿಲ್ಲದೆ ಕೆಲಸದಿಂದ ವಜಾ ಮಾಡಿದ್ದು, ಕಂಪನಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಸಮಸ್ಯೆಯ ಬಗ್ಗೆ ಕಾರ್ಮಿಕರ ಜತೆ ಚರ್ಚಿಸಿ ಕಾರ್ಮಿಕರಿಗೆ ನ್ಯಾಯ ಸಿಗುವವರೆಗೂ ನಮ್ಮ ಪ್ರತಿಭಟನೆ ನಡೆಯುತ್ತದೆ ಎಂದರು.
ಸಬೂಬು
ಕಂಪನಿಯಲ್ಲಿ ಉತ್ಪಾದನಾ ಪ್ರಮಾಣ ಇಲ್ಲವೆಂದು ಅಗತ್ಯಕ್ಕಿಂತ ಹೆಚ್ಚಿನ ಕಾರ್ಮಿಕರು ಇದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ಕಳೆದ ಹಲವು ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಹೊರಗೆ ಹಾಕಿದ್ದಾರೆ. ಇದರಿಂದ ಕಾರ್ಮಿಕರು ಮನೆ ನಿರ್ವಹಣೆ ಹೇಗೆ ಮಾಡಬೇಕೆಂದು ತಿಳಿಯದಾಗಿದೆ. ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಂಪನಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಕೋವೀಡ್-19 ಹರಡಿರುವ ಪರಿಣಾಮ ಕೈಗಾರಿಕೆಯಲ್ಲಿ ಕೆಲಸವಿಲ್ಲ. ಮತ್ತೆ ಕಂಪನಿಯಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಾದಾಗ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ.
ಭರತ್ಬಾಬು. ಭರತ್ ಎಂಟರ್ಪ್ರೈಸಸ್ನ ಗುತ್ತಿಗೆದಾರ
ಕೆಲಸದಿಂದ ವಜಾ
ವಜಾಗೊಂಡಿರುವ ಕಾರ್ಮಿಕ ಕರಿಯಣ್ಣ ಮಾತನಾಡಿ, ಜುಲೈ 4ರಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 46 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಕಂಪನಿಯ ಮಾಲೀಕರಾಗಲಿ, ವ್ಯವಸ್ಥಾಪಕರಾಗಲಿ, ಗುತ್ತಿಗೆದಾರರಾಗಲಿ ಕೆಲಸದಿಂದ ವಜಾ ಮಾಡುತ್ತೇವೆ ಎಂಬ ಯಾವುದೇ ಪೂರ್ವ ಮಾಹಿತಿಯನ್ನಾಗಲಿ, ಕೆಲಸದಿಂದ ತೆಗೆದಿರುವ ಮುಖ್ಯ ಉದ್ದೇಶವೆನೆಂದು ತಿಳಿಸದೇ ಏಕಾಏಕಿ ಕೆಲಸದಿಂದ ವಜಾ ಮಾಡಿದ್ದಾರೆ. ಕೆಲಸವಿಲ್ಲದೆ ನಾವು ಇಂದು ಬೀದಿಗೆ ಬಿದ್ದಿದ್ದು ಮತ್ತೆ ನಮ್ಮನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಾಂತಿಯುತ ಹೋರಾಟ
ಕಾರ್ಮಿಕ ಗಂಗಾಧರ್ ಮಾತನಾಡಿ, ಇದು ಪ್ರತಿಷ್ಠಿತ ಕಂಪನಿಯಾಗಿದ್ದರೂ, ಕಾರ್ಮಿಕರಿಗೆ ಮೂಲಸೌಲಭ್ಯಗಳನ್ನು ನೀಡಲು ಸತಾಯಿಸುತ್ತಿದೆ. ಹಲವು ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಇದ್ದಕ್ಕಿದಂತೆ ಕೆಲಸದಿಂದ ವಜಾ ಮಾಡಿದರೆ ಕಾರ್ಮಿಕರ, ಜೀವನ ಹಾಗೂ ಕುಟುಂಬದ ಪಾಡೇನು? ವಜಾಗೊಂಡಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದಿದ್ದರೆ ಕಂಪನಿ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾರ್ಮಿಕ ವಿರೋಧ ನೀತಿ
ಈ ಬಗ್ಗೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜು ಮಾತನಾಡಿ, ಕೈಗಾರಿಕಾ ಪ್ರದೇಶದಲ್ಲಿ ಲಾಕ್ಡೌನ್ ನೆಪಹೇಳಿ ಕಂಪನಿಯಲ್ಲಿ ಉತ್ಪಾದನೆ ಇಲ್ಲವೆಂದು ಸಬೂಬು ಹೇಳಿ ಇದೀಗ 46 ಕಾರ್ಮಿಕರನ್ನು ಸಮರ್ಥವಾದ ಉದ್ದೇಶವಿಲ್ಲದೆ ಕೆಲಸದಿಂದ ವಜಾ ಮಾಡಿದ್ದು, ಕಂಪನಿ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಸಮಸ್ಯೆಯ ಬಗ್ಗೆ ಕಾರ್ಮಿಕರ ಜತೆ ಚರ್ಚಿಸಿ ಕಾರ್ಮಿಕರಿಗೆ ನ್ಯಾಯ ಸಿಗುವವರೆಗೂ ನಮ್ಮ ಪ್ರತಿಭಟನೆ ನಡೆಯುತ್ತದೆ ಎಂದರು.
ಸಬೂಬು
ಕಂಪನಿಯಲ್ಲಿ ಉತ್ಪಾದನಾ ಪ್ರಮಾಣ ಇಲ್ಲವೆಂದು ಅಗತ್ಯಕ್ಕಿಂತ ಹೆಚ್ಚಿನ ಕಾರ್ಮಿಕರು ಇದ್ದಾರೆ ಎಂದು ಸಬೂಬು ನೀಡುತ್ತಿದ್ದಾರೆ. ಕಳೆದ ಹಲವು ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಹೊರಗೆ ಹಾಕಿದ್ದಾರೆ. ಇದರಿಂದ ಕಾರ್ಮಿಕರು ಮನೆ ನಿರ್ವಹಣೆ ಹೇಗೆ ಮಾಡಬೇಕೆಂದು ತಿಳಿಯದಾಗಿದೆ. ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಂಪನಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಕೋವೀಡ್-19 ಹರಡಿರುವ ಪರಿಣಾಮ ಕೈಗಾರಿಕೆಯಲ್ಲಿ ಕೆಲಸವಿಲ್ಲ. ಮತ್ತೆ ಕಂಪನಿಯಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಾದಾಗ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ.
ಭರತ್ಬಾಬು. ಭರತ್ ಎಂಟರ್ಪ್ರೈಸಸ್ನ ಗುತ್ತಿಗೆದಾರ