ಆ್ಯಪ್ನಗರ

ದರ ನಿಗದಿ ಮಾಡಿಯೇ ಕಬ್ಬು ನೀಡಲು ರೈತರಿಗೆ ಸಲಹೆ

ಸಕ್ತ ಸಾಲಿನಲ್ಲಿಕಬ್ಬು ನುರಿಯುವುದನ್ನು ಪ್ರಾರಂಭಿಸಿರುವ ಜಿಲ್ಲೆಯ ಸಕ್ಕರೆ ಕಾರಖಾನೆಗಳು ಪ್ರತಿ ಟನ್‌ ಕಬ್ಬಿಗೆ ದರ ನಿಗದಿ ಪಡಿಸಬೇಕು. ಕನಿಷ್ಠ ಪ್ರತಿ ಟನ್‌ಗೆ 2400 ರಿಂದ 2500 ರೂ. ದರವನ್ನು ರೈತರಿಗೆ ನೀಡಬೇಕು ಹಾಗೂ ಇಳುವರಿ ಜಾಸ್ತಿಗೊಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸಕ್ಕರೆ ಕಾರಖಾನೆಗಳ ಆಡಳಿತ ಮಂಡಳಿಯವರಿಗೆ ಸಂಸದ ಭಗವಂತ ಖೂಬಾ ಸಲಹೆ ನೀಡಿದ್ದಾರೆ.

Vijaya Karnataka 30 Nov 2019, 10:37 pm
ಬೀದರ್‌:ಪ್ರಸಕ್ತ ಸಾಲಿನಲ್ಲಿಕಬ್ಬು ನುರಿಯುವುದನ್ನು ಪ್ರಾರಂಭಿಸಿರುವ ಜಿಲ್ಲೆಯ ಸಕ್ಕರೆ ಕಾರಖಾನೆಗಳು ಪ್ರತಿ ಟನ್‌ ಕಬ್ಬಿಗೆ ದರ ನಿಗದಿ ಪಡಿಸಬೇಕು. ಕನಿಷ್ಠ ಪ್ರತಿ ಟನ್‌ಗೆ 2400 ರಿಂದ 2500 ರೂ. ದರವನ್ನು ರೈತರಿಗೆ ನೀಡಬೇಕು ಹಾಗೂ ಇಳುವರಿ ಜಾಸ್ತಿಗೊಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸಕ್ಕರೆ ಕಾರಖಾನೆಗಳ ಆಡಳಿತ ಮಂಡಳಿಯವರಿಗೆ ಸಂಸದ ಭಗವಂತ ಖೂಬಾ ಸಲಹೆ ನೀಡಿದ್ದಾರೆ.
Vijaya Karnataka Web
ದರ ನಿಗದಿ ಮಾಡಿಯೇ ಕಬ್ಬು ನೀಡಲು ರೈತರಿಗೆ ಸಲಹೆ


ನೆರೆಯ ಮಹಾರಾಷ್ಟ್ರದಲ್ಲಿಪ್ರತಿ ಟನ್‌ಗೆ 2500 ರೂ.ನಂತೆ ದರವನ್ನು ನೀಡಲಾಗುತ್ತಿದೆ. ಜತೆಗೆ ಇಳುವರಿ ಸಹ ಶೇ. 12 ರಷ್ಟಿರುತ್ತದೆ. ಹೀಗಾಗಿ, ನಮ್ಮಲ್ಲೂಪ್ರತಿ ಟನ್‌ಗೆ ದರ ನಿಗದಿಪಡಿಸಬೇಕು. ನೆರೆಯ ರಾಜ್ಯದಂತೆ ಟನ್‌ಗೆ 2500 ರೂ. ನೀಡಿ, ಇಳುವರಿ ಹೆಚ್ಚಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಯ ರೈತರ ಪರವಾಗಿ ಕೋರುತ್ತಿರುವುದಾಗಿ ತಿಳಿಸಿದ್ದಾರೆ.

''ಕ್ಷೇತ್ರದ ರೈತ ಬಂಧುಗಳು ಸಹ ಮೊದಲು ತಮ್ಮ ಕಬ್ಬಿಗೆ ಪ್ರತಿ ಟನ್‌ಗೆ 2500 ರೂ. ದರ ನಿಗದಿಪಡಿಸಿಕೊಳ್ಳಿ ಮತ್ತು ಕಬ್ಬು ಹಾಕಿದ ಮೇಲೆ ತಿಂಗಳೊಳಗಾಗಿ ಕಬ್ಬಿನ ಮೊತ್ತವನ್ನು ನೀಡುವುದಾಗಿ ಕಾರಖಾನೆ ಅವರಿಂದ ಭರವಸೆಯನ್ನು ಪಡೆದ ಮೇಲೆ ನಿಮ್ಮ ಕಬ್ಬನ್ನು ಸಕ್ಕರೆ ಕಾರಖಾನೆಗಳಿಗೆ ನೀಡಿ''ಎಂದು ಸಂಸದರು ಸಲಹೆ ನೀಡಿದ್ದಾರೆ.

ರೈತರು ಬೆಳೆದ ಕಬ್ಬಿಗೆ ಉತ್ತಮ ಬೆಲೆ ಪಡೆಯಲು ನೀವು (ರೈತರು) ಸರ್ವ ಸ್ವತಂತ್ರರು. ನೆರೆಯ ರಾಜ್ಯದವರು ಪ್ರತಿ ಟನ್‌ ಕಬ್ಬಿಗೆ 2500 ರೂ. ಬೆಲೆ ನೀಡುತ್ತಿದ್ದಾರೆ. ಈ ಎಲ್ಲಾವಿಷಯಗಳನ್ನು ಅರಿತು ಮುಂದಿನ ಹೆಜ್ಜೆಯಿಡಬೇಕು ಎಂದು ರೈತರಿಗೆ ಸಂಸದರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ