Please enable javascript.ಪಟ್ಟಣದ ಸರ್ವಾಂಗೀಣ ಅಭಿವದ್ಧಿಗೆ ಬದ್ಧ - ಪಟ್ಟಣದ ಸರ್ವಾಂಗೀಣ ಅಭಿವದ್ಧಿಗೆ ಬದ್ಧ - Vijay Karnataka

ಪಟ್ಟಣದ ಸರ್ವಾಂಗೀಣ ಅಭಿವದ್ಧಿಗೆ ಬದ್ಧ

ವಿಕ ಸುದ್ದಿಲೋಕ 24 Mar 2014, 1:48 pm
Subscribe

ಜನತೆ ತಮ್ಮ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಂಡು ಪಟ್ಟಣದ ಸರ್ವಾಂಗೀಣ ಅಭಿವದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ನೂತನ ಪುರಸಭೆ ಅಧ್ಯಕ್ಷ ವಿಶ್ವನಾಥ ಮೋರೆ ಹೇಳಿದರು.

ಪಟ್ಟಣದ ಸರ್ವಾಂಗೀಣ ಅಭಿವದ್ಧಿಗೆ ಬದ್ಧ
ಭಾಲ್ಕಿ:ಜನತೆ ತಮ್ಮ ಮೇಲಿಟ್ಟಿರುವ ವಿಶ್ವಾಸ ಉಳಿಸಿಕೊಂಡು ಪಟ್ಟಣದ ಸರ್ವಾಂಗೀಣ ಅಭಿವದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ನೂತನ ಪುರಸಭೆ ಅಧ್ಯಕ್ಷ ವಿಶ್ವನಾಥ ಮೋರೆ ಹೇಳಿದರು.

ಪಟ್ಟಣದ ಶಿವಾಜಿ ವತ್ತದ ಹತ್ತಿರದ ರಾಜಮಾತೆ ಜಿಜಾವು ವಾಚನಾಲಯದಲ್ಲಿ ಸಂಭಾಜಿ ಬ್ರಿಗೇಡ್ ತಾಲೂಕು ಘಟಕದ ವತಿಯಿಂದ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಅಭಿವದ್ಧಿ ಹಾಗೂ ಸಮಾಜನ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಪಟ್ಟಣದ ಸ್ವಚ್ಛತೆ ಕಾಪಾಡಬೇಕು. ಬಡವರಿಗೆ ಮನೆ ಕೊಡಿಸಬೇಕು. ಜನಸಾಮಾನ್ಯರಿಗೆ ಒಳ್ಳೆಯ ನೆರವು ನೀಡಬೇಕು ಎಂಬ ಆಸೆಯಿದೆ. ಪುರಸಭೆಯಲ್ಲಿರುವ ಎಲ್ಲ ಯೋಜನೆಗಳನ್ನು ಬಳಸಿಕೊಂಡು ಅರ್ಹರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ವಾಚನಾಲಯಕ್ಕೆ ಬೇಕಾಗಿರುವ ಅಗತ್ಯ ಸವಲತ್ತುಗಳನ್ನು ಶೀಘ್ರವೇ ಒದಗಿಸಿ ಕೊಡುವುದಾಗಿ ಹೇಳಿದರು.

ಉಪಾಧ್ಯಕ್ಷ ಸುಶೀಲಕುಮಾರ ಸ್ವಾಮಿ ಮಾತನಾಡಿ, ಪುರಸಭೆಯ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಪಟ್ಟಣದ ಅಭಿವದ್ಧಿ ದಷ್ಠಿಯಿಂದ ಜನತೆಗೆ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಹೇಳಿದರು.ಯಾವುದೇ ಬಡಾವಣೆಯಲ್ಲಿ ಏನೇ ಸಮಸ್ಯೆ ಇದ್ದರೂ ತಮ್ಮ ಗಮನಕ್ಕೆ ತಂದರೆ ಸಂಬಂಧಿತರಿಗೆ ಸೂಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು. ವ್ಯಾಪಾರಿ ಯಾದವರಾವ ಕನಸೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಶೋಕ ರಾಜೋಳೆ, ಪುರಸಭೆ ಸದಸ್ಯ ಖಾಜಾ ಸಾಹೇಬ ಮೈನೋದ್ದಿನ್, ಡಾ.ನರಸಿಂಗರಾವ ಶಿಂದೆ, ಪಿ.ಎಸ್.ಬಿರಾದಾರ, ವಾಚನಾಲಯ ಅಧ್ಯಕ್ಷ ಬಾಲಾಜಿ ತುಕದೆ,ನಾರಾಯಣ ಸೂರ್ಯವಂಶಿ, ದತ್ತು ಸೂರ್ಯವಂಶಿ, ಜಯಕುಮಾರ ಶಿಂದೆ, ನಂದು ಬಿರದಾರ, ಪಂಚಶೀಲ ಪಾಟೀಲ, ಕಿರಣ ಠೀಗಳೆ, ಇಂದ್ರಜೀತ ಹುಪಳಾ ಸೇರಿದಂತೆ ಮುಂತಾದವರು ಇದ್ದರು.

ದತ್ತು ಕಾಟಕರ್ ಸ್ವಾಗತಿಸಿದರು. ಸಂಭಾಜಿ ಬ್ರಿಗೇಡ್ ಕಾರ್ಯದರ್ಶಿ ಸತೀಶ ಸೂರ್ಯವಂಶಿ ನಿರೂಪಿಸಿದರು.ಬಾಬುರಾವ ಜಗತಾಪ ವಂದಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ