Please enable javascript.ಅರಿವಿನ ಜ್ಯೋತಿಯಿಂದ ವಿಶ್ವಕ್ಕೆ ಭಕ್ತಿ,ಜ್ಞಾನದ ಬೆಳಕು - ಅರಿವಿನ ಜ್ಯೋತಿಯಿಂದ ವಿಶ್ವಕ್ಕೆ ಭಕ್ತಿ,ಜ್ಞಾನದ ಬೆಳಕು - Vijay Karnataka

ಅರಿವಿನ ಜ್ಯೋತಿಯಿಂದ ವಿಶ್ವಕ್ಕೆ ಭಕ್ತಿ,ಜ್ಞಾನದ ಬೆಳಕು

ವಿಕ ಸುದ್ದಿಲೋಕ 26 Jun 2014, 11:30 am
Subscribe

ಶರಣರು ಹಚ್ಚಿ ಹೋದ ಅರಿವಿನ ಜ್ಯೋತಿ ಇಡೀ ವಿಶ್ವಕ್ಕೆ ಭಕ್ತಿ, ಜ್ಞಾನ, ವೈರಾಗ್ಯದ ಬೆಳಕನ್ನು ನೀಡುತ್ತಿದೆ ಎಂದು ವೈದ್ಯ ಬಸವರಾಜ ಪಂಡಿತ್ ಹೇಳಿದರು.

ಅರಿವಿನ ಜ್ಯೋತಿಯಿಂದ ವಿಶ್ವಕ್ಕೆ ಭಕ್ತಿ,ಜ್ಞಾನದ ಬೆಳಕು
ಬಸವಕಲ್ಯಾಣ: ಶರಣರು ಹಚ್ಚಿ ಹೋದ ಅರಿವಿನ ಜ್ಯೋತಿ ಇಡೀ ವಿಶ್ವಕ್ಕೆ ಭಕ್ತಿ, ಜ್ಞಾನ, ವೈರಾಗ್ಯದ ಬೆಳಕನ್ನು ನೀಡುತ್ತಿದೆ ಎಂದು ವೈದ್ಯ ಬಸವರಾಜ ಪಂಡಿತ್ ಹೇಳಿದರು.

ನಗರದ ಮದೀನಾ ಕಾಲೋನಿಯ ಮಂಜುಳಾ ಪುಂಡಲೀಕ ರೆಡ್ಡಿ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗುರು ಬಸವಣ್ಣನವರ 103ನೇ ಅರಿವಿನ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಜ್ಯೋತಿ ಜಾತಿ ಭೇದಗಳ ತಾರತಮ್ಯವನ್ನು ಹೊಡೆದೂಡಿಸಿ,ಜಗತ್ತಿಗೆ ಏಕತೆಯ ಸಂದೇಶವನ್ನು ಸಾರುತ್ತಿದೆ ಎಂದರು.

ವಿಶ್ವಕ್ಕೆ ಸೂರ್ಯನೊಬ್ಬನೇ ಬೆಳಕು ನೀಡುತ್ತಿದ್ದಾನೆ.ಜಾತಿಗೊಬ್ಬ ಸೂರ್ಯನಿಲ್ಲ .ಜಾತಿ ಮಾನವ ನಿರ್ಮಿತ ಎಂದು ತಿಳಿಸಿದರು. ಧನರಾಜಗಿರಿ ಅಧ್ಯಕ್ಷತೆವಹಿಸಿದ್ದರು. ಭೀಮಶೆಟ್ಟಿ ಎಂ.ಮುಗನೂರು,ಲಕ್ಷ್ಮೀಬಾಯಿ ಪಾಟೀಲ್, ಪಾರ್ವತಿ ಪಂಡಿತ, ಹಣಮಂತರಾವ ವಿಸಾಜಿ, ಶಿವಕುಮಾರ ಬಿರಾದಾರ ಇದ್ದರು.

ಪುಷ್ಪ ಕೋರೆ, ಮಂಗಲಾಬಾಯಿ ಹೆಂಬಡೆ, ರೇಖಾ ಬಸವರಾಜ ಪಾಟೀಲ್,ಸುವರ್ಣ ಸಂಜುಕುಮಾರ ದಲಾಲೆ, ಲಕ್ಷ್ಮೀಬಾಯಿ ಮಲ್ಲರೆಡ್ಡಿ, ಕನ್ಯಾಕುಮಾರಿ, ರಾಜಶೇಖರ ಬಿರಾದಾರ, ಮೌನೇಶ್ವರಿ ರೇವಣಸಿದ್ದ ಪಂಚಾಳ, ಪ್ರಿಯಾಂಕ ರೆಡ್ಡಿ, ಭಾಗ್ಯಶ್ರೀ ರೆಡ್ಡಿ, ಪೂರ್ಣಿಮಾ, ರಾಜಶೇಖರ ಉಮರಗೆ, ಶಿವರಾಜ ಪಾಟೀಲ್ ಸೇರಿದಂತೆ ಅನೇಕರಿದ್ದರು. ಮೃತ್ಯುಂಜಯ ಪ್ರಾರ್ಥನೆ ಗೀತೆ ಹಾಡಿದರು.ಪುಂಡಲೀಕ ರಡ್ಡಿ ಸ್ವಾಗತಿಸಿದರು. ಗುರುಪ್ರಸಾದ ನಿರೂಪಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ