ಆ್ಯಪ್ನಗರ

ಪ್ರವೇಶ ಪರೀಕ್ಷೆ:4090 ವಿದ್ಯಾರ್ಥಿಗಳು ಹಾಜರು, 253 ಗೈರು

ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ ಖಾಲಿಯಿರುವ 910 ಸೀಟುಗಳಿಗೆ 6ನೇ ತರಗತಿಯ ಪ್ರವೇಶಕ್ಕಾಗಿ ಭಾನುವಾರ ಜಿಲ್ಲೆಯ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ವಿಕ ಸುದ್ದಿಲೋಕ 7 Mar 2016, 3:52 pm
ಬೀದರ್:ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಲ್ಲಿ ಖಾಲಿಯಿರುವ 910 ಸೀಟುಗಳಿಗೆ 6ನೇ ತರಗತಿಯ ಪ್ರವೇಶಕ್ಕಾಗಿ ಭಾನುವಾರ ಜಿಲ್ಲೆಯ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.
Vijaya Karnataka Web  4090 253
ಪ್ರವೇಶ ಪರೀಕ್ಷೆ:4090 ವಿದ್ಯಾರ್ಥಿಗಳು ಹಾಜರು, 253 ಗೈರು


ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 4343 ವಿದ್ಯಾರ್ಥಿಗಳ ಪೈಕಿ 4090 ವಿದ್ಯಾರ್ಥಿಗಳು ಹಾಜರಾಗಿದ್ದು, 253 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಈ ಮೂಲಕ ಒಟ್ಟು ಶೇ. 94.17 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದಂತಾಗಿದೆ.

ಜಿಲ್ಲೆಯ ಔರಾದ್ ತಾಲೂಕಿನ ಸರಕಾರಿ ಪಿಯು ಕಾಲೇಜು, ಬಸವ ಗುರುಕುಲ ಹಿರಿಯ ಪ್ರಾಥಮಿಕ ಶಾಲೆ ಪಾರ್ಟ್ 1 ಹಾಗೂ ಪಾರ್ಟ್ 2, ನವಚೇತನ ಗುರುಕುಲ ಶಾಲೆ ಹೀಗೆ ಒಟ್ಟು ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ 920 ವಿದ್ಯಾರ್ಥಿಗಳ ಪೈಕಿ 871 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು.

ಬಸವಕಲ್ಯಾಣ ತಾಲೂಕಿನ ಶಾಂತಿನಿಕೇತನ ಹಿರಿಯ ಪ್ರಾಥಮಿಕ ಶಾಲೆ, ಬಾಲಕರ ಸರಕಾರಿ ಪಿಯು ಕಾಲೇಜು ಹಾಗೂ ನೀಲಾಂಬಿಕಾ ಬಾಲಕಿಯರ ಪಿಯು ಕಾಲೇಜು ಸೇರಿದಂತೆ ಒಟ್ಟು 3 ಪರೀಕ್ಷಾ ಕೇಂದ್ರಗಳಲ್ಲಿ 837 ವಿದ್ಯಾರ್ಥಿಗಳ ಪೈಕಿ ಭಾನುವಾರ 796 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಭಾಲ್ಕಿ ತಾಲೂಕಿನ ಕೆಎಚ್‌ಬಿ ಕಾಲೊನಿಯ ಸತ್ಯ ಸಾಯಿ ಪಬ್ಲಿಕ್ ಶಾಲೆ ಹಾಗೂ ಮಹರ್ಷಿ ದಯಾನಂದ ಸರಸ್ವತಿ ಪಬ್ಲಿಕ್ ಶಾಲೆ ಹೀಗೆ ಎರಡು ಪರೀಕ್ಷಾ ಕೇಂದ್ರಗಳಲ್ಲಿ 669 ವಿದ್ಯಾರ್ಥಿಗಳ ಪೈಕಿ ಭಾನುವಾರ ಒಟ್ಟು 609 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಬೀದರ್‌ನ ಪನ್ನಾಲಾಲ್ ಹೀರಾಲಾಲ್ ಪ್ರೌಢ ಶಾಲೆ, ಸಾಯಿ ಆದರ್ಶ್ ಪ್ರೌಢ ಶಾಲೆ, ವಿದ್ಯಾರಣ್ಯ ಪ್ರೌಢ ಶಾಲೆ ಹಾಗೂ ಸಿದ್ಧಾರ್ಥ ಪ್ರೌಢ ಶಾಲೆ ಹೀಗೆ ಒಟ್ಟು ನಾಲ್ಕು ಕೇಂದ್ರಗಳಲ್ಲಿ ನೋಂದಾಯಿಸಿಕೊಂಡಿದ್ದ 1005 ವಿದ್ಯಾರ್ಥಿಗಳ ಪೈಕಿ 942 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ.

ಹುಮನಾಬಾದ್ ತಾಲೂಕಿನ ಬೀಬೀ ಗಲ್ಲಿಯಲ್ಲಿನ ಅಲ್ ಅಮೀನ್ ಉರ್ದು ಪ್ರೌಢ ಶಾಲೆಯ ಪಾರ್ಟ್ 1 ಹಾಗೂ ಪಾರ್ಟ್ 2 ಹಾಗೂ ತೇರ ಮೈದಾನ ಬಳಿಯ ಸರಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ನೋಂದಾಯಿಸಿಕೊಂಡಿದ್ದ 912 ವಿದ್ಯಾರ್ಥಿಗಳ ಪೈಕಿ 872 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ರಾಜ್ಯ ನೋಡಲ್ ಅಧಿಕಾರಿ ದಶರಥ ಎಖ್ಖೆಳ್ಳಿಕರ್, ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ಚನ್ನಬಸವ ಹೇಡೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಕೋಬಾಳಕರ್, ಬೀದರ್ ತಾಲೂಕಿನ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ್, ಔರಾದ್‌ನ ಶಿವಾಜಿ ಪವಾರ್, ಹುಮನಾಬಾದ್‌ನ ಫೂಲಸಿಂಗ್ ರಾಠೋಡ್, ಬಸವಕಲ್ಯಾಣದ ಶರಣಬಸಪ್ಪ ದಂಡೆ ಹಾಗೂ ಭಾಲ್ಕಿಯ ಗೋವಿಂದ ಶಾಮಗೋಳೆ ನೇತೃತ್ವದಲ್ಲಿ ಪರೀಕ್ಷೆ ಸುಗಮವಾಗಿ ನಡೆದವು ಎಂದು ಚನ್ನಬಸವ ಹೇಡೆ ವಿಕಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ