ಆ್ಯಪ್ನಗರ

ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ 1 ಕೋಟಿ ರೂ

ತಾಲೂಕಿನ ಉಜಳಂಬ ಗ್ರಾಮದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಒಂದು ಕೋಟಿ ರೂ. ನೀಡುವುದಾಗಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪುರ ಸೋಮವಾರ ಘೋಷಿಸಿದರು.

Vijaya Karnataka 18 Jun 2019, 5:00 am
ಬಸವಕಲ್ಯಾಣ:ತಾಲೂಕಿನ ಉಜಳಂಬ ಗ್ರಾಮದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಒಂದು ಕೋಟಿ ರೂ. ನೀಡುವುದಾಗಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪುರ ಸೋಮವಾರ ಘೋಷಿಸಿದರು.
Vijaya Karnataka Web 1 crore for rural rural market construction
ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ 1 ಕೋಟಿ ರೂ


ಜೂ.27ರಂದು ತಾಲೂಕಿನ ಉಜಳಂಬ ಗ್ರಾಮಕ್ಕೆ ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಸೋಮವಾರ ಸಚಿವರು ಉಜಳಂಬನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಪೂರ್ವಸಿದ್ಧತೆ ಕುರಿತು ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.

ಮುಖ್ಯಮಂತ್ರಿ ಅವರ ಕೆಲಸದ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ 27ರೊಳಗಾಗಿ ಬಾಕಿ ಉಳಿದಿರುವ ವಿಧವಾ ವೇತನ, ವೃದ್ಧಾಪ್ಯ ವೇತ, ವಿಶೇಷಚೇತನರ ವೇತನವನ್ನು ಆಯಾ ಪಿಂಚಣಿದಾರರಿಗೆ ಪಾವತಿಸಬೇಕು. ಬಸವಕಲ್ಯಾಣದಲ್ಲಿರುವ ಹೆಲಿಪ್ಯಾಡ್‌ ವ್ಯವಸ್ಥೆಗೊಳಿಸಬೇಕು, ಮುಖ್ಯಮಂತ್ರಿಯವರ ಜತೆ ಉನ್ನತ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಆಗಮಿಸಲಿದ್ದು, ಅವರಿಗೆ ತಂಗಲು ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸೂಚಿಸಿದರು.

ಪತ್ರಕರ್ತರರಿಗೆ ಮೀಡಿಯಾ ಹೌಸ್‌ನ ವ್ಯವಸ್ಥೆ ಮಾಡಲು ಸಹಾಯಕ ಆಯುಕ್ತ ಗ್ಯಾನೇಂದ್ರಕುಮಾರ್‌ ಗಂಗವಾರ್‌ ಅವರಿಗೆ ಸೂಚಿಸಿದರು.

ಸಿಎಂ ಅವರ ಜೂ.27ರಂದು 24 ತಾಸು ಗ್ರಾಮವಾಸ್ತವ್ಯ ಕೇವಲ ಗ್ರಾಮಕ್ಕೆ ಸೀಮಿತವಾಗಿರದೆ ಸಂಪೂರ್ಣ ಬೀದರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸದುಪಯೋಗ ಮಾಡಿಕೊಳ್ಳೋಣ ಎಂದರು.

ಸಿಎಂ ದಿನಚರಿ ಹೀಗಿದೆ:

ಜೂ.27ರಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿ ಅವರನ್ನು ಸಾಂಪ್ರದಾಯಿಕ ಪದ್ಧತಿ ಮೂಲಕ ಗ್ರಾಮಕ್ಕೆ ಸ್ವಾಗತಿಸಲಾಗುವುದು. ಬೆಳಗ್ಗೆ 10 ರಿಂದ ಸಂಜೆವರೆಗೆ ಜನಸ್ಪಂದನ ಕಾರ್ಯಕ್ರಮದ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಪ್ರಯತ್ನ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಸಚಿವ ಕಾಶಂಪುರ ಹೇಳಿದರು.

28ರ ಕಾರ್ಯಕ್ರಮ:

ಸಿಎಂ ಕುಮಾರಸ್ವಾಮಿ ಅವರು ಮರುದಿನ 28ರಂದು ಬೆಳಗ್ಗೆ ಉಜಳಂಬ ಗ್ರಾಮದಲ್ಲಿರುವ ಬಿಸಿಎಂ ಹಾಸ್ಟೆಲ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಉಪಾಹಾರ ಸೇವನೆ ಹಾಗೂ ಅವರೊಂದಿಗೆ ಸಂವಾದ ನಡೆಸುವರು ಎಂದು ಜಿಪಂ ಸಿಇಒ ಮಹಾಂತೇಶ್‌ ಬೀಳಗಿ ಸಭೆಗೆ ತಿಳಿಸಿದರು.

ಇದಕ್ಕಿಂತ ಮುಂಚೆ ದಲಿತರ ಗ್ರಾಮವೆಂದು ಹೇಳಲಾಗುವ ಪಕ್ಕದ ಧಾಮುರಿ ಗ್ರಾಮಕ್ಕೆ ಸಿಎಂ ಭೇಟಿ ನೀಡಲಿದ್ದಾರೆ.

ಜಿಲ್ಲಾಧಿಕಾರಿ ಡಾ. ಹೆಚ್‌.ಆರ್‌. ಮಹಾದೇವ್‌ ಅವರು ಮಾತನಾಡಿ, ಉಜಳಂಬ ಗ್ರಾಮಸ್ಥರ ಬೇಡಿಕೆಗಳನ್ನು ಈಗಾಗಲೇ ಅಧ್ಯಯನ ಮಾಡಲಾಗಿದೆ. ಗ್ರಾಮಸ್ಥರಿಂದ ವಿವಿಧ ಅಹವಾಲುಗಳನ್ನು ಮತ್ತು ಮನವಿ ಪತ್ರಗಳನ್ನು ಸ್ವೀಕರಿಸುವ ಕಾರ್ಯ ನಡೆಯುತ್ತಿದೆ. ಗ್ರಾಮಸ್ಥರ ಬೇಡಿಕೆಯಂತೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕಾಗಿ ಗ್ರಾಮದಲ್ಲಿ ಎಂಟು ಎಕರೆ ಸರಕಾರಿ ಜಮೀನು ಲಭ್ಯ ಇದೆ. ಸಿಎಂ ಅವರ ಆದೇಶದ ಮೇರೆಗೆ ಅದನ್ನು ಒದಗಿಸಲಾಗುವುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ