ಆ್ಯಪ್ನಗರ

150 ಕ್ವಿಂಟಾಲ್‌ ತೊಗರಿ ಬೇಳೆ ಲಾರಿ ಸಮೇತ ಕಳವು

ತೊಗರಿ ಬೇಳೆ ಸಾಗಿಸುತ್ತಿರುವ ಲಾರಿಯನ್ನು ತಡೆದು, ಚಾಲಕನನ್ನು ಬಂಧಿಸಿ ಲಾರಿ ಸಮೇತ ಮಾಲು ದೋಚಿರುವ ಪ್ರಕರಣ ಬೀದರ ಹುಮನಾಬಾದ್‌ ರಸ್ತೆಯ ಕಬೀರಾಬಾದ ಕ್ರಾಸ್‌ ಬಳಿ ಸಂಭವಿಸಿದೆ.

Vijaya Karnataka 27 Sep 2018, 3:58 pm
ಹುಮನಾಬಾದ್‌ : ತೊಗರಿ ಬೇಳೆ ಸಾಗಿಸುತ್ತಿರುವ ಲಾರಿಯನ್ನು ತಡೆದು, ಚಾಲಕನನ್ನು ಬಂಧಿಸಿ ಲಾರಿ ಸಮೇತ ಮಾಲು ದೋಚಿರುವ ಪ್ರಕರಣ ಬೀದರ ಹುಮನಾಬಾದ್‌ ರಸ್ತೆಯ ಕಬೀರಾಬಾದ ಕ್ರಾಸ್‌ ಬಳಿ ಸಂಭವಿಸಿದೆ.
Vijaya Karnataka Web 150 quintal wheat valuables worth rs 5 50 lac lorry robbery
150 ಕ್ವಿಂಟಾಲ್‌ ತೊಗರಿ ಬೇಳೆ ಲಾರಿ ಸಮೇತ ಕಳವು


ಬೀದರ್‌ನಿಂದ ಬಿಳಿ ಕಾರಿನಲ್ಲಿ ಬರುತ್ತಿದ್ದ ನಾಲ್ಕು ಜನ ಅಪರಿಚಿತರು,ಮಾರ್ಗ ಮಧ್ಯೆ ಲಾರಿ ಅಡ್ಡಗಟ್ಟಿ, 150 ಕ್ವಿಂಟಾಲ್‌ ತೊಗರಿ ಬೇಳೆ ತುಂಬಿದ ಲಾರಿ ಸಮೇತ ಲೂಟಿ ಮಾಡಿದ್ದಾರೆ ಎಂದು ಚಾಲಕ ಹಳ್ಳಿಖೇಡ (ಬಿ) ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯಲ್ಲಿ 5.50 ಲಕ್ಷ ರೂ.ಮೌಲ್ಯದ ಬೇಳೆ ಹಾಗೂ 4 ಲಕ್ಷ ರೂ.ಗಳ ಲಾರಿ ಸೇರಿ ಒಟ್ಟು 9.50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಬೀದರನ ಗುಂಪಾದಲ್ಲಿ ವಾಸಿಸುತ್ತಿರುವ ಹಣಮಂತರೆಡ್ಡಿ ಗರಣೆ ಎಂಬುವವರ ಲಾರಿಯಲ್ಲಿ ಸ್ಟೇಟ್‌ ಏರ್‌ ಹೌಸ್‌ ಬೆಳ್ಳೂರದಲ್ಲಿ 150 ಕ್ವಿಂಟಾಲ ತೊಗರಿ ಬೇಳೆಯನ್ನು ತುಂಬಿಕೊಂಡು ಹುಮನಾಬಾದ್‌ನ ದಾಲಮಿಲ್‌ಗೆ ಅನ್‌ಲೋಡ್‌ ಮಾಡುವ ಸಲುವಾಗಿ ಬೆಳ್ಳೂರದಿಂದ ಬರುತ್ತಿರವಾಗ ಕಬೀರಾಬಾದವಾಡಿ ಕ್ರಾಸ್‌ ಹತ್ತಿರ ಈ ಘಟನೆ ನಡೆದಿದೆ.

ಘಟನೆ ಹಿನ್ನೆಲೆ:

ಕಾರಿನಲ್ಲಿದ್ದ ಮೂವರು ಕೆಳಗಡೆ ಇಳಿದು ಲಾರಿ ತಡೆದು, ಕ್ಯಾಬಿನ್‌ನ ಎಡ ಡೋರ್‌ನಿಂದ ಇಬ್ಬರು ತಮ್ಮ ಕೈಯಲ್ಲಿ ಚಾಕು ಹಿಡಿದು ಮತ್ತು ಬಲ ಡೋರ್‌ನಿಂದ ಒಬ್ಬ ವ್ಯಕ್ತಿ ಮೇಲೆ ಹತ್ತಿ ಲಾರಿ ಚಾಲಕನಿಗೆ ಹೆದರಿಸಿ, ಹೊಡೆದಿದ್ದಾರೆ.

ಚಾಲಕನ ಬಳಿಯಿರುವ 350 ರೂ.ನಗದು ಮತ್ತು ಮೊಬೈಲ್‌ ಕಸಿದುಕೊಂಡು ನಾಲ್ಕು ಜನರ ತಂಡವು ಲಾರಿ ಚಾಲಕನನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗಿದ್ದಾರೆ. ಬಟ್ಟೆ ಬಿಚ್ಚಿಸಿ, ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರಿಕಿ ಮಾಲು ಸಮೇತ ಲಾರಿ ದೋಚಿದ್ದಾರೆ. ನಂತರ ಚಾಲಕ ಕಿರುಚಿದಾಗ ದಾರಿಯಲ್ಲಿ ಹೋಗುತ್ತಿರುವವರು ನೋಡಿ ಬಚಾವ್‌ ಮಾಡಿದ್ದಾರೆ ಎಂದು ಚಾಲಕನು ದೂರಿನಲ್ಲಿ ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಪದೇಪದೆ ಕಳವು ನಡೆಯುತ್ತಿದ್ದು, ತನಿಖೆ ನಡೆಸುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ