ಆ್ಯಪ್ನಗರ

ಸ್ವತಂತ್ರ ಧರ್ಮಕ್ಕಾಗಿ 2018 ಬೈಕ್‌ಗಳ ಮಹಾರ‍್ಯಾಲಿ

ಲಿಂಗಾಯತ ಮಾನ್ಯತೆಗೆ ಸರಕಾರ ಈ ವರ್ಷದಲ್ಲೇ ಶಿಫಾರಸು ಮಾಡಿರುವ ನೆನಪಿಗಾಗಿ ಬಸವ ಜಯಂತಿ ನಿಮಿತ್ತ ಬೀದರ್‌ನಲ್ಲಿ ಬಸವ ಜಯಂತಿ ಉತ್ಸವ ಸಮಿತಿಯಿಂದ ಭಾನುವಾರ 2018 ಬೈಕ್‌ಗಳ ರ‍್ಯಾಲಿ ನಡೆಯಿತು.

Vijaya Karnataka 16 Apr 2018, 10:54 am
ಬೀದರ್‌: ಲಿಂಗಾಯತ ಮಾನ್ಯತೆಗೆ ಸರಕಾರ ಈ ವರ್ಷದಲ್ಲೇ ಶಿಫಾರಸು ಮಾಡಿರುವ ನೆನಪಿಗಾಗಿ ಬಸವ ಜಯಂತಿ ನಿಮಿತ್ತ ಬೀದರ್‌ನಲ್ಲಿ ಬಸವ ಜಯಂತಿ ಉತ್ಸವ ಸಮಿತಿಯಿಂದ ಭಾನುವಾರ 2018 ಬೈಕ್‌ಗಳ ರ‍್ಯಾಲಿ ನಡೆಯಿತು.
Vijaya Karnataka Web rally


ಎಲ್ಲೆಡೆ ಬಸವ ಧ್ವಜಗಳು. ವಿಭೂತಿ ಧರಿಸಿ, ತಲೆ ಮೇಲೆ ಟೋಪಿ, ಪಗಡಾ ಕಟ್ಟಿಕೊಂಡ ಯುವಕ, ಯುವತಿಯರು ಏಕ ಕಾಲಕ್ಕೆ 2018 ಬೈಕ್‌ಗಳನ್ನು ಓಡಿಸಿ ಮಹಾರಾರ‍ಯಲಿ ನಡೆಸಿದರು. ರಾರ‍ಯಲಿಯುದ್ದಕ್ಕೂ ವಿಶ್ವ ಗುರು ಬಸವಣ್ಣಗೆ ಜಯಘೋಷ ಹಾಕಿದ ಬೈಕ್‌ ಸವಾರರು, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಜೈಕಾರ ಹೇಳಿದರು. ನೆಹರೂ ಕ್ರೀಡಾಂಗಣದಿಂದ ಹೊರಟು ಪಾಪನಾಶ ಮಂದಿರದಲ್ಲಿ ರ‍್ಯಾಲಿ ಅಂತ್ಯಗೊಂಡಿತು.

ಉತ್ಸವ ಸಮಿತಿ ಪ್ರಧಾನ ಕಾರ‍್ಯದರ್ಶಿ ಬಸವರಾಜ್‌ ಧನ್ನೂರು ಮಾತನಾಡಿ, ‘‘2018 ಲಿಂಗಾಯತ ಧರ್ಮೀಯರ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯಲಿದೆ. 900 ವರ್ಷಗಳ ಹಿಂದೆ ಹುಟ್ಟಿದ ಧರ್ಮಕ್ಕೆ, ಈಗ 900 ವರ್ಷಗಳ ತರುವಾಯ 2018ರಲ್ಲಿ ಸ್ವತಂತ್ರ ಧರ್ಮ ಮಾನ್ಯತೆಗೆ ಸರಕಾರ ಶಿಫಾರಸು ಮಾಡಿದೆ. ಹೀಗಾಗಿ, ಈ ವರ್ಷ ನಮಗೆ ಐತಿಹಾಸಿಕ ಬಸವ ಜಯಂತಿ. ಇದೇ ಕಾರಣಕ್ಕೆ 2018 ಬೈಕ್‌ಗಳ ರಾರ‍ಯಲಿ ಆಯೋಜಿಸಲಾಗಿದೆ’’ ಎಂದು ಹೇಳಿದರು.

ಡಾ.ಗಂಗಾಂಬಿಕೆ ಅಕ್ಕ ಮಾತನಾಡಿ, ರಾಜ್ಯ ಸರಕಾರವು ಕೇಂದ್ರಕ್ಕೆ ಲಿಂಗಾಯತ ಸ್ವತಂತ್ರ ಧರ್ಮ ಎಂಬ ವರದಿ ಕಳುಹಿಸಿದೆ. ಅದಕ್ಕೆ ಕೇಂದ್ರವೂ ಮಾನ್ಯತೆ ನೀಡಬೇಕು ಎಂದು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಶರಣಪ್ಪ ಮಿಠಾರೆ ಸೇರಿ ಸಾವಿರಾರು ಬಸವಾಭಿಮಾನಿಗಳು ರಾರ‍ಯಲಿಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ