ಆ್ಯಪ್ನಗರ

3 ಹೊಸ ತಾಲೂಕುಗಳಿಗೆ 30 ಕೋಟಿ :ಐವಾನ್‌ ಡಿ ಸೋಜಾ

ಬೀದರ್‌ ಜಿಲ್ಲೆಯ ಮೂರು ನೂತನ ತಾಲೂಕುಗಳಾದ ಚಿಟಗುಪ್ಪಾ, ಹುಲಸೂರು ಹಾಗೂ ಕಮಲನಗರ ಪಟ್ಟಣಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ತಲಾ 10 ಕೋಟಿಯಂತೆ 30 ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವಾನ್‌ ಡಿ ಸೋಜಾ ಹೇಳಿದರು.

Vijaya Karnataka 4 Jul 2019, 6:02 pm
ಬೀದರ್‌:ಬೀದರ್‌ ಜಿಲ್ಲೆಯ ಮೂರು ನೂತನ ತಾಲೂಕುಗಳಾದ ಚಿಟಗುಪ್ಪಾ, ಹುಲಸೂರು ಹಾಗೂ ಕಮಲನಗರ ಪಟ್ಟಣಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ತಲಾ 10 ಕೋಟಿಯಂತೆ 30 ಕೋಟಿ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವಾನ್‌ ಡಿ ಸೋಜಾ ಹೇಳಿದರು.
Vijaya Karnataka Web 30 crores for 3 new talukas
3 ಹೊಸ ತಾಲೂಕುಗಳಿಗೆ 30 ಕೋಟಿ :ಐವಾನ್‌ ಡಿ ಸೋಜಾ


ಬುಧವಾರ ಬೀದರ್‌ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರವೇ 30 ಕೋಟಿ ರೂ.ಗೆ ಮಂಜೂರಾತಿ ನೀಡಲಾಗುವುದು ಎಂದರು.

ಹೊಸ ತಾಲೂಕುಗಳಿಗೆ ಎಲ್ಲ ಕಚೇರಿಗಳು ಹೋಗಬೇಕು. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ಕಚೇರಿಗಳನ್ನು ನೂತನ ತಾಲೂಕುಗಳಿಗೆ ಕೊಂಡೊಯ್ಯಬೇಕು. ನಾನೂ ಸಹ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಪರಿಶೀಲಿಸುವೆ. ಹೊಸ ತಾಲೂಕುಗಳ ಜನರಿಗೆ ಯಾವುದೇ ಸಮಸ್ಯೆಯಾಗಕೂಡದು.ಇಲ್ಲಿನ ಜನರ ಸರಕಾರದ ಕೆಲಸಗಳು ಸರಳವಾಗಿ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಬೀದರ್‌ನಿಂದ ಬೆಂಗಳೂರಿಗೆ ಹೋದ ಕೂಡಲೇ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸುವೆ ಎಂದು ಭರವಸೆ ನೀಡಿದರು. ಅಲ್ಲದೆ, ಬೀದರ್‌ ನಗರದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಹಾಗೂ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಬೀದರ್‌ ಜಿಲ್ಲೆಯಲ್ಲಿ 1.90 ಲಕ್ಷ ಪಿಂಚಣಿದಾರರು ಇದ್ದಾರೆ. ಗ್ರಾಮ ಲೆಕ್ಕಿಗರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜನರ ಬಳಿಗೆ ಖುದ್ದು ಹೋಗಿ ಅರ್ಜಿಗಳನ್ನು ಪಡೆದುಕೊಳ್ಳಬೇಕು. ಅದಾಲತ್‌ ನಡೆಸಿ, ಇವರ ಅರ್ಜಿಗಳನ್ನು ಇತ್ಯರ್ಥಪಡಿಸಿ ಅರ್ಹರಿಗೆ ಪಿಂಚಣಿ ಸಿಗುವಂತೆ ನೋಡಿಕೊಳ್ಳಬೇಕು. ಇನ್ನು ನಮ್ಮ ಸರಕಾರದ ಹಾಗೂ ನಮ್ಮ ಉದ್ದೇಶವೂ ಆಗಿದೆ ಎಂದರು. ಪಿಂಚಣಿ ಅದಾಲತ್‌, ಕಂದಾಯ ಅದಾಲತ್‌ ಹಾಗೂ ಪಿಂಚಣಿದಾರರ ಸಮ್ಮೇಳನವನ್ನು ಹೋಬಳಿ, ತಾಲೂಕು ಮಟ್ಟಗಳಲ್ಲಿ ನಡೆಸಿ, ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.ಎಂಎಲ್ಸಿ ಅರವಿಂದಕುಮಾರ ಅರಳಿ ಸೇರಿ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ