ಆ್ಯಪ್ನಗರ

371(ಜೆ) ಸಮಗ್ರ ಅನುಷ್ಠಾನಕ್ಕೆ ಸಿಎಂಗೆ ಆಗ್ರಹ

ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ವಿಧೇಯಕ 371 (ಜೆ) ಅನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಇಲ್ಲಿನ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಹಾಗೂ ಕಲಂ 371 (ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.

Vijaya Karnataka 30 Jun 2019, 5:00 am
ಬೀದರ್‌ :ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ವಿಧೇಯಕ 371 (ಜೆ) ಅನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಇಲ್ಲಿನ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಹಾಗೂ ಕಲಂ 371 (ಜೆ) ಸಮಗ್ರ ಅನುಷ್ಠಾನ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
Vijaya Karnataka Web 371 j request for comprehensive implementation of cm
371(ಜೆ) ಸಮಗ್ರ ಅನುಷ್ಠಾನಕ್ಕೆ ಸಿಎಂಗೆ ಆಗ್ರಹ


ಕಲಂ 371 (ಜೆ) ಸಮಗ್ರ ಅನುಷ್ಠಾನಕ್ಕಾಗಿ ಕ್ರಮ ತೆಗೆದುಕೊಳ್ಳಬೇಕು. ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿವಿಧ ಇಲಾಖೆಗಳ ಕಚೇರಿಗಳನ್ನು ಕಲಬುರಗಿಗೆ ವರ್ಗಾಯಿಸಬೇಕು. (ಹೈದರಾಬಾದ್‌ ಕರ್ನಾಟಕಕ್ಕೆ ಸಂಬಂಧಿಸಿದ ಕಚೇರಿಗಳು) ಎಚ್‌.ಕೆ.ಸೆಲ್‌ ವಿಧಾನ ಸೌಧದ ಅಧಿಕಾರಿ ಹೈದರಾಬಾದ್‌ ಕರ್ನಾಟಕದವರಾಗಿರಬೇಕು. ಪ್ರತಿಯೊಂದು ಹುದ್ದೆಗಳ ವಿವಿಧ ಇಲಾಖೆಗಳಲ್ಲಿ ಹೈಕಕ್ಕೆ ಮೀಸಲಿಡಬೇಕು. 2019ರ ಮಾರ್ಚ್‌ 07 ರಂದು ಸಹಾಯಕ ಎಂಜಿನಿಯರ್‌ ಮತ್ತು ಕಿರಿಯ ಎಂಜಿನಿಯರ್‌ ಹುದ್ದೆಗಳಿಗೆ ಹೈಕಕ್ಕೆ ಯಾವುದೇ ಮೀಸಲಿಟ್ಟಿರುವುದಿಲ್ಲ. ಕೂಡಲೇ ಈ ಭಾಗಕ್ಕೆ ಮೀಸಲಿಡಬೇಕು ಮತ್ತು ಹೊಸ ನೋಟಿಸ್‌ ಹೊರಡಿಸಬೇಕು. ಡಾಟಾ ಎಂಟ್ರಿ ಹುದ್ದೆಯಲ್ಲಿ ಹೈಕಗೆ ಮೀಸಲಿಡಬೇಕು. ಹೈಕಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಪ್ರತ್ಯೇಕ ಟ್ರಿಬ್ಯೂನಲ್‌ ಸ್ಥಾಪಿಸಬೇಕು ಎಂದು ಕೋರಿದರು.

371 (ಜೆ) ಕಲಂ ಪ್ರಮಾಣ ಪತ್ರವನ್ನು ಎಲ್ಲಾ ಉದ್ದೇಶಕ್ಕಾಗಿ ಒಂದೇ ಪ್ರಮಾಣ ಪತ್ರ ಒದಗಿಸಬೇಕು. ಹೈಕ ಭಾಗದ ಅಭ್ಯರ್ಥಿಗಳಿಗೆ ಪದೋನ್ನತಿ ನೀಡುವಲ್ಲಿ ನಿಯಮ ಸಡಿಲಿಸಬೇಕು. ಶಿಕ್ಷ ಣ ಮತ್ತು ಹುದ್ದೆಯಲ್ಲಿ ಗ್ರೇಸಿಂಗ್‌ ಅಂಕ ನೀಡಬೇಕು. ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಬೇಕು ಎಂದು ಸಿಎಂ ಅವರಿಗೆ ಮನವಿ ಮಾಡಲಾಯಿತು. ಈ ವೇಳೆ ಸಮಿತಿಯ ಪ್ರಮುಖರಾದ ಅಶೋಕ ಮಾನೂರೆ, ಜಿತೇಂದ್ರ ಬೆಳಕೇರಿ, ನರೇಶ್‌ ಪಾಠಕ್‌, ಘಾಳೆಪ್ಪಾ ಸೋರಳ್ಳಿ, ಉಮೇಶ್‌ ಪಾಂಡರೆ ಇದ್ದರು.

ಸ್ಥಳದಲ್ಲೇ ಸಿಎಂ ಸೂಚನೆಗೆ ಸ್ವಾಗತ

ಹೈದರಾಬಾದ್‌ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ರಾಜ್ಯದ ಇತರೆ ಭಾಗಗಳಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಾಗೂ ಹುದ್ದೆಗಳ ನೇಮಕಾತಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ 870 ಎಂಜಿನಿಯರಿಂಗ್‌ ಹುದ್ದೆಗಳಲ್ಲಿ ತಕ್ಷ ಣವೇ ಜಾರಿಗೆ ಬರುವಂತೆ ಶೇ. 8 ಸ್ಥಳದಲ್ಲಿಯೇ ಸಿಎಂ ಕುಮಾರಸ್ವಾಮಿ ತೀರ್ಮಾನ ತೆಗೆದುಕೊಂಡು ಅಧಿಕಾರಿಗಳಿಗೆ ಆದೇಶಿರುವುದನ್ನು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಬೀದರ್‌ ಸ್ವಾಗತಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ