ಆ್ಯಪ್ನಗರ

7.34 ಲಕ್ಷ ರೂ ನಗದು, 5.5 ತೋಲ ಚಿನ್ನ ದರೋಡೆ

ಪಟ್ಟಣದ ಗಂಜ್‌ ಏರಿಯಾದ ಬಸವೇಶ್ವರ ವೃತ್ತದ ರಸ್ತೆಯಲ್ಲಿರುವ ಚನ್ನಬಸವ ಪಟ್ಟದ್ದೇವರ ಪತ್ತಿನ ಸಹಕಾರ ಬ್ಯಾಂಕ್‌ನ ಶಾಖೆಗೆ ದರೋಡೆಕೋರ ನುಗ್ಗಿ 7.34 ಲಕ್ಷ ರೂ. ನಗದು ಮತ್ತು 5.5 ತೊಲ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ಜರುಗಿದೆ.

ವಿಕ ಸುದ್ದಿಲೋಕ 6 Feb 2017, 9:00 am

ಭಾಲ್ಕಿ: ಪಟ್ಟಣದ ಗಂಜ್‌ ಏರಿಯಾದ ಬಸವೇಶ್ವರ ವೃತ್ತದ ರಸ್ತೆಯಲ್ಲಿರುವ ಚನ್ನಬಸವ ಪಟ್ಟದ್ದೇವರ ಪತ್ತಿನ ಸಹಕಾರ ಬ್ಯಾಂಕ್‌ನ ಶಾಖೆಗೆ ದರೋಡೆಕೋರ ನುಗ್ಗಿ 7.34 ಲಕ್ಷ ರೂ. ನಗದು ಮತ್ತು 5.5 ತೊಲ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ಜರುಗಿದೆ.

Vijaya Karnataka Web 7 34 laka r nagadu 5 5 tla cinna dare
7.34 ಲಕ್ಷ ರೂ ನಗದು, 5.5 ತೋಲ ಚಿನ್ನ ದರೋಡೆ


ಬ್ಯಾಂಕ್‌ನ ಬಾಗಿಲು ಬೀಗ ಮುರಿದು ಒಳನುಗ್ಗಿರುವ ದರೋಡೆಕೋರ ಲಾಕರ್‌ ಬೀಗ ಒಡೆದು 7 ಲಕ್ಷ ರೂ. ನಗದು, ಚಿನ್ನ ದೋಚಿದ್ದಾನೆ. ಇನ್ನೊಂದು ಲಾಕರ್‌ ತೆರೆಯಲು ವಿಫಲ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ದರೋಡಕೋರ ಒಬ್ಬನೇ ಬ್ಯಾಂಕ್‌ಗೆ ನುಗ್ಗಿದ್ದು, ಮುಖಕ್ಕೆ ಮಾಸ್ಕ್‌, ಕೈಗ್ಲೌಜ್‌ ಧರಿಸಿ ಕಳವು ಮಾಡಿರುವುದು ಪಕ್ಕದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಹೊರಭಾಗದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಭಾನುವಾರ ಬೆಳಗ್ಗೆ ದರೋಡೆ ಪ್ರಕರಣ ಗೊತ್ತಾಗಿದೆ. ಎಷ್ಟು ಹಣ ಕಳವಾಗಿದೆ ಎನ್ನುವುದನ್ನು ಬ್ಯಾಂಕ್‌ ಅಧಿಕಾರಿ ಸಂಜೆವರೆಗೆ ಲೆಕ್ಕಹಾಕಬೇಕಾಯಿತು. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ನೇತೃತ್ವದ ತಂಡ, ಶ್ವಾನದಳ ಮುಖ್ಯಸ್ಥರು ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣದ ತನಿಖೆಗಾಗಿ ಪೊಲೀಸ್‌ ಇಲಾಖೆ ವಿಶೇಷ ತಂಡ ರಚಿಸಿದ್ದು, ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ