ಆ್ಯಪ್ನಗರ

ಬೀದರ್‌ | ಕಾರು-ಕಂಟೈನರ್‌ ಡಿಕ್ಕಿ: ದೇವರ ದರ್ಶನಕ್ಕೆ ಹೊರಟಿದ್ದ ಒಂದೇ ಕುಟಂಬದ ಐವರ ದುರ್ಮರಣ

Accident in Bidar: ಹೈದರಾಬಾದ್‌ ಮೂಲದವರಾದ ದೀನೇಶ (35), ಗಿರಿಧರ (45), ಪ್ರಿಯಾ (15), ಅನೀತಾ (36) ಹಾಗೂ 2 ವರ್ಷದ ಮಗು ಮಯಾಂಕ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕಾಗಿ ಹೈದರಾಬಾದ್‌ನಿಂದ ಒಂದೇ ಕುಟುಂಬದ 10 ಸಂಬಂಧಿಕರು ಕಾರಿನಲ್ಲಿ ಹೊಗುತ್ತಿರುವಾಗ ದಾರಿ ಮಧ್ಯೆ ಭಂಗೂರ ಫ್ಲೈ ಓವರ ಮೇಲೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕಾರ್‌ ಓವರ ಸ್ಪೀಡ್‌ನಿಂದ ಕಂಟೈನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

Edited byಹೇಮಂತ್ ಕುಮಾರ್ ಎಸ್ | Vijaya Karnataka 15 Aug 2022, 9:46 pm

ಹೈಲೈಟ್ಸ್‌:

  • ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಭೀಕರ ಅಪಘಾತ
  • ಭಂಗೂರ ಫ್ಲೈ ಓವರನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಕಾರು
  • ಗಾಯಗೊಂಡಿರುವ ಉಳಿದವರ ಸ್ಥಿತಿ ಗಂಭೀರ
  • ಕಾರ್‌ ಓವರ ಸ್ಪೀಡ್‌ನಿಂದ ಕಂಟೈನರ್‌ಗೆ ಡಿಕ್ಕಿಯಾಗಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web accident
ಪ್ರಾತಿನಿಧಿಕ ಚಿತ್ರ
ಚಿಟಗುಪ್ಪ (ಬೀದರ್‌): ಕಾರ್‌ ಮತ್ತು ಕಂಟೈನರ್‌ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಐದು ಜನರ ದಾರುಣ ಸಾವು ಸಂಭವಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 65ರ ಭಂಗೂರ ಗ್ರಾಮದ ಫ್ಲೈ ಒವರ್‌ನಲ್ಲಿ ಸೋಮವಾರ ಸಂಜೆ ಜರುಗಿದೆ.

ಘಟನೆಯಲ್ಲಿ ನಾಲ್ಕು ಜನ ಸ್ಥಳದಲ್ಲಿಯೇ ಮೃತಪಟ್ಟರೆ ಎರಡು ವರ್ಷದ ಮಗು ಮನ್ನಾಎಖ್ಖೇಳ್ಳಿ ಸಮುದಾಯ ಆಸ್ಪತ್ರೆಯಲ್ಲಿಅಸುನೀಗಿದ ವರದಿಯಾಗಿದೆ. ಇನ್ನುಳಿದವರ ಸ್ಥಿತಿ ಗಂಭಿರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕಾಲೇಜಿಗೆ ಹೋಗೋದು ಬಿಟ್ಟು ಪಾರ್ಟಿ ಮಾಡಿದ್ರು: ಪಾನಮತ್ತರಾಗಿ ಜಾಲಿ ರೈಡ್‌ ಮಾಡಿ ಕೆರೆಗೆ ಬಿತ್ತು ಕಾರು! ಐವರ ರಕ್ಷಣೆ
ಹೈದರಾಬಾದ್‌ ಮೂಲದವರಾದ ದೀನೇಶ (35), ಗಿರಿಧರ (45), ಪ್ರಿಯಾ (15), ಅನೀತಾ (36) ಹಾಗೂ 2 ವರ್ಷದ ಮಗು ಮಯಾಂಕ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕಾಗಿ ಹೈದರಾಬಾದ್‌ನಿಂದ ಒಂದೇ ಕುಟುಂಬದ 10 ಸಂಬಂಧಿಕರು ಕಾರಿನಲ್ಲಿ ಹೊಗುತ್ತಿರುವಾಗ ದಾರಿ ಮಧ್ಯೆ ಭಂಗೂರ ಫ್ಲೈ ಓವರ ಮೇಲೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಪಘಾತಕ್ಕೀಡಾಗಿರುವ ಕಾರು


ಕಾರ್‌ ಓವರ ಸ್ಪೀಡ್‌ನಿಂದ ಕಂಟೈನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಇನ್ನು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಬೀದರ್‌ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಪಿಎಸ್‌ಐ ಕಾಳಪ್ಪ ಅವರು ಭೇಟಿ ನೀಡಿದ್ದು, ಈ ಕುರಿತು ಮನ್ನಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vinayak Mete Dies: ಕಾರು ಅಪಘಾತದಲ್ಲಿ ಮರಾಠಾ ನಾಯಕ ವಿನಾಯಕ್ ಮೇಟೆ ನಿಧನ
ಗೃಹ ಸಚಿವರ ಬೆಂಗಾವಲು ವಾಹನ ಅಪಘಾತ
ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ತುಮಕೂರಿನಿಂದ ತೀರ್ಥಹಳ್ಳಿಗೆ ಆಗಮಿಸುತ್ತಿದ್ದ ಸಂದರ್ಭ ಉಂಬ್ಳೆಬೈಲು ಬಳಿ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಹೆಚ್ಚಿನ ಅನಾಹುತ ಸಂಭವಿಸದೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ತುಮಕೂರಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ತೀರ್ಥಹಳ್ಳಿಗೆ ವಾಪಸ್ಸಾಗುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಹೊಸನಗರ ತಾಲೂಕು ನಗರ ಮೂಲದವರ ಕಾರು ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬೆಂಗಾವಲು ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ಎರಡೂ ವಾಹನಗಳು ಸಣ್ಣ ಪ್ರಮಾಣದಲ್ಲಿನಜಖಂಗೊಂಡಿವೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳದಲ್ಲಿದ್ದು, ಎರಡೂ ವಾಹನಗಳಲ್ಲಿದ್ದವರಿಗೆ ಧೈರ್ಯ ಹೇಳಿ ಶಿವಮೊಗ್ಗಕ್ಕೆ ತೆರಳಿದರು.
ಬೈಕ್, ಆಟೋಗೆ ಅಪ್ಪಳಿಸಿದ ಕಾಂಗ್ರೆಸ್ ಶಾಸಕನ ಅಳಿಯನ ಕಾರು: ಆರು ಮಂದಿ ದುರ್ಮರಣ
ಬೇಲೂರು: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂವರ ಸಾವು

ಬೇಲೂರು ತಾಲೂಕಿನ ಹಳೇಬೀಡು ರಸ್ತೆಯ ಹುಣಸೆಕೆರೆ ಬಳಿ ಬಸ್ ಹಾಗೂ ಬೈಕ್ ನಡುವೆ ಮುಕಾಮುಕಿ ಡಿಕ್ಕಿಯಾಗಿದ್ದು, ಸ್ಥಳದಲ್ಲಿ ಗಂಗೂರು ಗ್ರಾಮದ ರಂಗಸ್ವಾಮಿ ಹಾಗೂ ಭಾನುಪ್ರಕಾಶ್ ಮೃತಪಟ್ಟಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬಂಟನಹಳ್ಳಿ ಬಳಿ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಮುತ್ತಗನ್ನೇ ಗ್ರಾಮದ ಪರಮೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಬೇಲೂರು ವೃತ ನಿರೀಕ್ಷಿಕ ರವಿಕಿರಣ್, ಪಿಎಸ್ಐ ಎಸ್.ಜಿ, ಪಾಟೀಲ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ