ಆ್ಯಪ್ನಗರ

ಸಾಧನೆಗೆ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ಸಿದ್ಧತೆ ಅಗತ್ಯ

ವಿದ್ಯಾರ್ಥಿಗಳು ಸಂಪೂರ್ಣ ಸಿದ್ಧತೆಯೊಂದಿಗೆ ಜೀವನದ ಯಾವುದೇ ಕ್ಷೇತ್ರದಲ್ಲಿ ಧೈರ್ಯದಿಂದ ಮುಂದೆ ನಡೆಯುವುದನ್ನು ರೂಢಿಸಿಕೊಳ್ಳಬೇಕು, ಆಗಲೇ ಯಶಸ್ಸು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಖ್ಯಾತ ಮನೋವೈದ್ಯ ಡಾ. ಸಿ.ಆರ್‌.ಚಂದ್ರಶೇಖರ ಹೇಳಿದರು.

Vijaya Karnataka 20 Sep 2018, 5:17 pm
ಹುಮನಾಬಾದ್‌ : ವಿದ್ಯಾರ್ಥಿಗಳು ಸಂಪೂರ್ಣ ಸಿದ್ಧತೆಯೊಂದಿಗೆ ಜೀವನದ ಯಾವುದೇ ಕ್ಷೇತ್ರದಲ್ಲಿ ಧೈರ್ಯದಿಂದ ಮುಂದೆ ನಡೆಯುವುದನ್ನು ರೂಢಿಸಿಕೊಳ್ಳಬೇಕು, ಆಗಲೇ ಯಶಸ್ಸು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಖ್ಯಾತ ಮನೋವೈದ್ಯ ಡಾ. ಸಿ.ಆರ್‌.ಚಂದ್ರಶೇಖರ ಹೇಳಿದರು.
Vijaya Karnataka Web achievement needs complete preparation for students
ಸಾಧನೆಗೆ ವಿದ್ಯಾರ್ಥಿಗಳಲ್ಲಿ ಸಂಪೂರ್ಣ ಸಿದ್ಧತೆ ಅಗತ್ಯ


ತಾಲೂಕು ಕನ್ನಡ ಸಾಹಿತ್ಯ ಪರಿಷತ್‌, ವಿಕಾಸ ಅಕಾಡೆಮಿ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಯುವ ಮಾನಸಿಕ ಸ್ವಾಸ್ಥ್ಯಕ್ಕೊಂದು ಮಾರ್ಗದರ್ಶನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಆತ್ಮ ವಿಶ್ವಾಸ ಸಾಧನೆ ಮಾಡಿದರೆ ಸ್ವಾವಲಂಬಿ ಜೀವನ ನಡೆಸಬಹುದು. ಅದಕಾರಣ ಸರಳ ಜೀವನಕ್ಕೆ ಆರೋಗ್ಯ ಸಂಪಾದನೆ ಅವಶ್ಯಕವಾಗಿದೆ. ಸಾಧನೆ ಹಾಗೂ ಆರೋಗ್ಯಕ್ಕೆ ಇಂದಿನ ಪೀಳಿಗೆಗಳು ಬೆವರು ಸುರಿಸಲೇ ಬೇಕು. ಅಲ್ಲದೆ ಪ್ರತಿಯೊಂದು ವಿಷಯವನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುತ್ತಿದ್ದು, ಇದರ ಪರಿಣಾಮವಾಗಿ ಮಾನಸಿಕ ಖಿನ್ನತೆ ಹೆಚ್ಚಾಗುತ್ತಿದೆ ಎಂದರು.

ಇಂದಿನ ಯುವಕರು ಅಭ್ಯಾಸದ ಸಮಯದಲ್ಲಿ ಆಕರ್ಷಕ ವಸ್ತುಗಳಾದ ಮೊಬೈಲ್‌, ಟಿವಿ ಸೇರಿದಂತೆ ವಸ್ತುಗಳನ್ನು ನೀರಂತರ ಬಳಕೆ ಮಾಡುವುದರಿಂದ ಖಿನ್ನತೆ ಬೇಗ ಬರುತ್ತದೆ. ಅಭ್ಯಾಸದ ಸಮಯದಲ್ಲಿ ಗುಂಪು ಚರ್ಚೆ ಮಾಡಿದಲ್ಲಿ ವಿಷಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಗುತ್ತದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿದ್ರೆ ಮಾಡುವುದರಿಂದ ಶರೀರದಲ್ಲಿ ನವಚೈತನ್ಯ ಹುಟ್ಟುತ್ತದೆ. ಜ್ಞಾಪನ ಶಕ್ತಿ ಹೆಚ್ಚುತ್ತದೆ. ಅಲ್ಲದೆ ವಿದ್ಯಾರ್ಥಿಗಳು ಪ್ರತಿನಿತ್ಯ ಅರ್ಧ ತಾಸು ಅಭ್ಯಾಸ ಮಾಡಿದರೆ ಒಂದು ತಾಸು ಅಭ್ಯಾಸದ ವಿಷಯದ ಕುರಿತು ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ಜತೆಗೆ ಏಕಾಗ್ರತೆಯು ಅತಿ ಮುಖ್ಯ ಎಂದು ಮಾರ್ಗದರ್ಶನ ಮಾಡಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾಚಾರ್ಯ ಡಾ. ವೀರಣ್ಣಾ ತುಪ್ಪದ, ವೀರಭದ್ರೇಶ್ವರ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಶಿವಾನಂದ ಮಠಪತಿ, ಕಸಾಪ ತಾಲೂಕಾಧ್ಯಕ್ಷ ಸಚ್ಚಿದಾನಂದ ಮಠಪತಿ ಮಾತನಾಡಿದರು.

ಸ್ವಾಮಿ ವಿವೇಕಾನಂದ ಶಿಕ್ಷ ಣ ಸಂಸ್ಥೆಯ ಮುಖ್ಯದತ್ತಿ ರಮೇಶ ಗಾದಾ, ವಿಕಾಸ ಅಕಾಡೆಮಿ ಸಂಚಾಲಕ ಶಿವಶಂಕರ ತರನಳ್ಳಿ, ಡಾ. ಸದಾಶಿವಯ್ಯಾ ಹಿರೇಮಠ, ಬಸವರಾಜ ರಾಜು ಬತಲಿ, ಡಾ. ಜಯಕುಮಾರ ಸಿಂದೆ ಅಲ್ಕಾ, ಪ್ರೇಮಲತಾ, ಡಾ. ಶಾಂತಕುಮಾರ, ಡಾ.ಅರುಣಕುಮಾರ, ಡಾ.ಸಂಜೀವಕುಮರ, ಡಾ.ಜಯಶ್ರಿ ಶಟ್ಟಿ, ಡಾ.ಸಂಪತಕುಮರಿ, ಡಾ.ವಿರೇಶ ಹಳೆಮನಿ, ಡಾ.ಡಿ.ಕೆ. ಬಿರಾದಾರ ಇದ್ದರು.

ವಿದ್ಯಾರ್ಥಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಂವಾದ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ