ಆ್ಯಪ್ನಗರ

ಹಿರಿಯ ನಾಗರಿಕರ ನೆರವಿಗೆ ಸಹಾಯವಾಣಿ ಆರಂಭಿಸಲು ಸಲಹೆ

ನಗರದ ಬಿವ್ಹಿಬಿ ಕಾಲೇಜಿನಲ್ಲಿಮಂಗಳವಾರ ಆಯೋಜಿಸಿದ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದಲ್ಲಿಜಿಲ್ಲೆಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಯಿತು.

Vijaya Karnataka 27 Nov 2019, 9:57 pm
ಬೀದರ್‌:ನಗರದ ಬಿವ್ಹಿಬಿ ಕಾಲೇಜಿನಲ್ಲಿಮಂಗಳವಾರ ಆಯೋಜಿಸಿದ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದಲ್ಲಿಜಿಲ್ಲೆಅಭಿವೃದ್ಧಿ ಕುರಿತು ಚರ್ಚೆ ನಡೆಸಲಾಯಿತು.
Vijaya Karnataka Web advice to start helpline for the assistance of senior citizens
ಹಿರಿಯ ನಾಗರಿಕರ ನೆರವಿಗೆ ಸಹಾಯವಾಣಿ ಆರಂಭಿಸಲು ಸಲಹೆ


ರಾಜ್ಯ ಮಟ್ಟದ ಡಾಕ್‌ ಸೇವಾ ಪ್ರಶಸ್ತಿ ಪಡೆದ ಪ್ರಧಾನ ಅಂಚೆ ಕಚೇರಿಯ ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಅಧಿಕಾರಿ ಮಂಗಲಾ ಭಾಗವತ್‌ ಅವರು ಏರ್ಪಡಿಸಿದ ಕಾರ್ಯಕ್ರಮದಲ್ಲಿಪಾಲ್ಗೊಂಡ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ಹಾಗೂ ಗಣ್ಯರು ಮಾತನಾಡಿ, ಜಿಲ್ಲೆಯ ಹಿರಿಯ ನಾಗರಿಕರ ನೆರವಿಗೆ ಸಹಾಯವಾಣಿ ಆರಂಭಿಸುವುದು ಹಾಗೂ ಅವರ ಸೇವೆಗೆ ಆ್ಯಪ್‌ ಅಭಿವೃದ್ಧಿಪಡಿಸುವ ಬಗ್ಗೆ ಪ್ರಸ್ತಾಪಿಸಿದರು.

ಯುವಕರಿಗೆ ಕೌಶಲ ತರಬೇತಿ ಶಿಬಿರ ಆಯೋಜನೆ, ಉದ್ಯೋಗ ವಿನಿಮಯ ಕೇಂದ್ರ ಪ್ರಾರಂಭಿಸುವುದು, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲಗೆ ಕರೆತರುವುದು ಹಾಗೂ ಸರಳ ವಿವಾಹಗಳನ್ನು ಉತ್ತೇಜಿಸುವ ಬಗ್ಗೆಯು ಪ್ರಸ್ತಾಪಿಸಲಾಯಿತು. ಅಲ್ಲದೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮಂಗಲಾ ಭಾಗವತ್‌ ಮಾತನಾಡಿ, ಅಂಚೆ ಇಲಾಖೆ ನನ್ನ ಮೂರು ದಶಕಗಳ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ್ದು ಸಂತಸ ಮೂಡಿಸಿದೆ. ಅದಕ್ಕಾಗಿ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿಗಣ್ಯರು ಸಮಾಜಕ್ಕೆ ಏನನ್ನಾದರು ಕೊಡುಗೆ ನೀಡುವ ವಿಚಾರ ಪ್ರಸ್ತಾಪಿಸಿ ವೇದಿಕೆ ಮೂಲಕ ಸಾಮಾಜಿಕ ಚಟುವಟಿಕೆ ಪ್ರಾರಂಭಿಸುವ ಆಶಯ ವ್ಯಕ್ತಪಡಿಸಿದ್ದಾರೆ. ಇದ ನಿಜಕ್ಕೂ ಸಂತಸ ಮೂಡಿಸಿದೆ ಎಂದರು.

ಸಂಸದ ಭಗವಂತ ಖೂಬಾ, ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ, ತಡೋಳಾ ಮಠದ ರಾಜೇಶ್ವರ ಶಿವಾಚಾರ್ಯರು, ಕೆಆರ್‌ಇ ಸಂಸ್ಥೆ ಅಧ್ಯಕ್ಷ ಡಾ. ಬಸವರಾಜ ಅಷ್ಟೂರೆ, ಶಾಹೀನ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಅಬ್ದುಲ್‌ ಖದೀರ್‌, ಜಿಲ್ಲಾಅಭಿವೃದ್ಧಿ ವೇದಿಕೆ ಅಧ್ಯಕ್ಷ ಡಾ. ಚನ್ನಬಸಪ್ಪ ಹಾಲಹಳ್ಳಿ, ಜೆಮಿನಿ ಗ್ರಾಫಿಕ್ಸ್‌ ಸುಭಾಷ ಸಾಬಡೆ, ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಎಸ್‌.ಬಿ. ಬಿರಾದಾರ್‌, ಬಿಎಸ್‌ ಕುದರೆ, ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಸಂಜೀವಕುಮಾರ ಅತಿವಾಳೆ, ಅನಿಲಕುಮಾರ ಅಣದೂರೆ ಮತ್ತಿತರರು ಇದ್ದರು.

ಉಪಯುಕ್ತ ಸಲಹೆಗಳು

ದೊಡ್ಡ ದೊಡ್ಡ ಸಭೆ ಹಾಗೂ ಸಮಾರಂಭಗಳಲ್ಲಿವ್ಯರ್ಥವಾಗುವ ಆಹಾರ ಸಂಸ್ಕರಿಸಿ ಉಪಯೋಗಕ್ಕೆ ಬರುವ ರೀತಿಯಲ್ಲಿಪೌಡರ್‌ ರೂಪದಲ್ಲಿಸಂಗ್ರಹಿಸುವ ಘಟಕ ಸ್ಥಾಪನೆ, ವೃದ್ಧರ ಪುನಶ್ಚೇತನ ಕೇಂದ್ರ ಆರಂಭಿಸಿ ಅವರಲ್ಲಿಹೊಸ ಚೈತನ್ಯ ತುಂಬುವ ಕುರಿತು ಚರ್ಚಿಸಲಾಯಿತು.ಅಲ್ಲದೆ ಒಬ್ಬರು ತಲಾ ಎರಡು ಹಳ್ಳಿಗಳನ್ನು ದತ್ತು ಪಡೆದು ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಸಲಹೆ ಕೇಳಿ ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ