ಆ್ಯಪ್ನಗರ

ನಡೆಯಲಿ ಮತ್ತೊಂದು ಸರ್ಜಿಕಲ್‌ ದಾಳಿ; ಎಬಿವಿಪಿ

ಜಮ್ಮು- ಕಾಶ್ಮಿರದ ಪುಲ್ವಾಮಾ ಜಿಲ್ಲೆಯ ಅವಂತಿಪುರ ಪ್ರದೇಶದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿ ಬಲಿ ಪಡೆದ ಭಯೋತ್ಪಾದಕರ ಹೇಯ ಘಟನೆ ಖಂಡಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ನಗರದ ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿತು.

Vijaya Karnataka 16 Feb 2019, 5:00 am
ಬೀದರ್‌ ;ಜಮ್ಮು- ಕಾಶ್ಮಿರದ ಪುಲ್ವಾಮಾ ಜಿಲ್ಲೆಯ ಅವಂತಿಪುರ ಪ್ರದೇಶದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿ ಬಲಿ ಪಡೆದ ಭಯೋತ್ಪಾದಕರ ಹೇಯ ಘಟನೆ ಖಂಡಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ನಗರದ ಅಂಬೇಡ್ಕರ್‌ ವೃತ್ತದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಿತು.
Vijaya Karnataka Web another surgical attack to take place abvp
ನಡೆಯಲಿ ಮತ್ತೊಂದು ಸರ್ಜಿಕಲ್‌ ದಾಳಿ; ಎಬಿವಿಪಿ


ಸರ್ಜಿಕಲ್‌ ದಾಳಿ ಬಳಿಕ ಹೆದರಿ ಬಿಲ ಸೇರಿಕೊಂಡಿದ್ದ ಪಾಕ್‌ನ ಉಗ್ರರು ಗುರುವಾರ ಕಾಶ್ಮೀರದಲ್ಲಿ ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರನೋರ್ವ ಸಿಆರ್‌ಪಿಎಫ್‌ ವಾಹನವನ್ನೇ ಗುರಿಯಾಗಿಸಿಕೊಂಡು ನಡೆಸಿದ ಅತ್ಮಾಹುತಿ ದಾಳಿಗೆ 42 ಯೋಧರು ಹುತಾತ್ಮರಾಗಿದ್ದು, 40ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಭಾರತ ಸರಕಾರ ತಕ್ಷಣ ಎಚ್ಚೆತ್ತುಕೊಂಡು ಭಾರತೀಯ ಸೈನ್ಯಕ್ಕೆ ಸೂಕ್ತ ನೆರವು ನೀಡಬೇಕು. ಈ ಹಿಂದೆ ನಡೆಸಿದ ಸರ್ಜಿಕಲ್‌ ದಾಳಿಯ ರೀತಿಯಲ್ಲೇ ಮತ್ತೊಮ್ಮೆ ಸರ್ಜಿಕಲ್‌ ದಾಳಿ ನಡೆಸುವುದರ ಮೂಲಕ ಉಗ್ರರನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಎಬಿವಿಪಿ ಪ್ರಮುಖರು ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.

ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೇವಣಸಿದ್ಧ ಜಾಡರ್‌, ರಾಜ್ಯ ಕಾರ್ಯಕಾರಿಣಿ ಸದಸ್ಯ ಅನಂದ್‌ ಡೊಂಬಾಳಿ, ತಾಲೂಕು ಪ್ರಮುಖ ಅರವಿಂದ ಸುಂಧಾಳಕರ, ನಗರ ಉಪಾಧ್ಯಕ್ಷ ಅನಿಲ್‌ ಚೌದ್ರಿ, ಉಪನ್ಯಾಸಕಿ ಮಮತಾ ಕೆನಡಿಕರ್‌, ಅಭಿಲಾಶ್‌, ಸಪ್ನಾ ಕುಲಕರ್ಣಿ, ಸಾಯಿ ಮೂಲಗೆ, ಸಂತೋಶ್‌ ಹಾಲಹಿಪ್ಪರ್ಗೆ, ಉಮೇಶ್‌ ಲಾಡಗಿರೆ, ಅಭಿಶೇಕ್‌, ಶಿವರಾಜ್‌, ವಿಷ್ಣು, ಸಂದೀಪ್‌, ಶೈಲೇಂದ್ರ, ಪವನ್‌, ಪ್ರಿತಮ್‌, ಅಂಬಿಕಾ, ಜಗದೇವಿ, ಬಸವಾಂಜಲಿ ಸೇರಿದಂತೆ ಪಟ್ಟಣದ ಸಿದ್ಧಿ ವಿನಾಯಕ ಹಾಗೂ ಮಹಿಳಾ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ