ಆ್ಯಪ್ನಗರ

ಪಾಪನಾಶ ಕೆರೆಯ ಸ್ವಚ್ಛತೆಗೆ ಸಚಿವರಿಗೆ ಮನವಿ

ನಗರ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಪಾಪನಾಶ ಕೆರೆಯನ್ನು ಸ್ವಚ್ಛಗೊಳಿಸಬೇಕು. ಈ ಕೆರೆಯೊಳಗೆ ಸೇರುತ್ತಿರುವ ಮನೆ ಬಳಕೆಯ ಚರಂಡಿ ಹಾಗೂ ತ್ಯಾಜ್ಯದ ನೀರಿಗೆ ಪರಾರ‍ಯಯ ಮಾರ್ಗವನ್ನು ಮಾಡಬೇಕು ಎಂದು ಕಂದಾಯ ಮತ್ತು ಪೌರಾಡಳಿತ ಸಚಿವ ಆರ್‌. ಅಶೋಕ್‌ ಅವರಿಗೆ ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಸೂರ‍್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.

Vijaya Karnataka 16 Oct 2019, 10:21 pm
ಬೀದರ್‌:ನಗರ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಪಾಪನಾಶ ಕೆರೆಯನ್ನು ಸ್ವಚ್ಛಗೊಳಿಸಬೇಕು. ಈ ಕೆರೆಯೊಳಗೆ ಸೇರುತ್ತಿರುವ ಮನೆ ಬಳಕೆಯ ಚರಂಡಿ ಹಾಗೂ ತ್ಯಾಜ್ಯದ ನೀರಿಗೆ ಪರಾರ‍ಯಯ ಮಾರ್ಗವನ್ನು ಮಾಡಬೇಕು ಎಂದು ಕಂದಾಯ ಮತ್ತು ಪೌರಾಡಳಿತ ಸಚಿವ ಆರ್‌. ಅಶೋಕ್‌ ಅವರಿಗೆ ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಸೂರ‍್ಯಕಾಂತ ನಾಗಮಾರಪಳ್ಳಿ ಮನವಿ ಮಾಡಿದ್ದಾರೆ.
Vijaya Karnataka Web appeal to the minister for the cleanup of the papanash lake
ಪಾಪನಾಶ ಕೆರೆಯ ಸ್ವಚ್ಛತೆಗೆ ಸಚಿವರಿಗೆ ಮನವಿ


ಪಾಪನಾಶ ಕೆರೆಯೊಳಗೆ ಶಿವನಗರ ಉತ್ತರ, ದಕ್ಷಿಣ, ಮಹಾದೇವ ನಗರ, ಜ್ಯೋತಿ ಕಾಲೊನಿ, ಗೌಳಿ ಲೇ ಔಟ್‌, ಆನಂದ ನಗರ, ಗುರು ನಗರ ಬಡಾವಣೆಗಳ ಮನೆಗಳ ಬಳಕೆಯ ಕಲುಷಿತ ನೀರು ಸೇರುತ್ತಿದೆ. ಪಾಪನಾಶ ಮಂದಿರಕ್ಕೆ ಬರುವ ಭಕ್ತರು ಕೆರೆಯನ್ನು ವೀಕ್ಷಿಸಲು ಹೋಗುತ್ತಾರೆ. ಆದರೆ, ಕೆರೆಯ ನೀರು ಸಂಪೂರ್ಣ ಕಲುಷಿತಗೊಂಡಿರುವುದರಿಂದ ವಾಸನೆ ಬರುತ್ತಿದ್ದು, ಭಕ್ತರಿಗೆ ಕಿರಿಕಿರಿಯಾಗುತ್ತಿದೆ. ಜನ, ಜಾನುವಾರು, ಪಕ್ಷಿ ಸಂಕುಲಕ್ಕು ಸಮಸ್ಯೆಯಾಗುತ್ತಿದೆ ಎಂದು ಸೂರ‍್ಯಕಾಂತ ತಿಳಿಸಿದ್ದಾರೆ.

ಕಲುಷಿತವಾದ ನೀರು ಪಾಪನಾಶ ಕೆರೆಗೆ ಹೋಗದಂತೆ ಪರ್ಯಾಯ ಮಾರ್ಗ ಮಾಡಬೇಕು. ಕೆರೆಯ ಹತ್ತಿರದಲ್ಲಿಕಲುಷಿತ ನೀರಿನ ಶುದ್ಧೀಕರಣ ಘಟಕವನ್ನು ನಿರ್ಮಿಸಬೇಕು ಎಂದು ನಾಗಮಾರಪಳ್ಳಿ ಸಚಿವ ಅಶೋಕ ಅವರಿಗೆ ಕೋರಿದ್ದಾರೆ. ಸುರಪುರ ಶಾಸಕ ರಾಜು ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ