ಆ್ಯಪ್ನಗರ

ಟಿಆರ್‌ಪಿಗಾಗಿ ಟಿವಿಯವರು ತಾಯಿಯನ್ನೂ ಮಾರುತ್ತಾರೆ: ಅಶೋಕ್ ಖೇಣಿ ವಿವಾದ

ಕ್ಷೇತ್ರದಲ್ಲಿ ನಾನು ಒಟ್ಟು 813 ಕಿಮೀ ರಸ್ತೆ ನಿರ್ಮಿಸಿದ್ದರೂ ಯಾರೂ ಮಾತನಾಡಲ್ಲ. ನಿರ್ಣಾ ಗ್ರಾಮದಲ್ಲಿ ಒಂದು ಕಿಮೀ ರಸ್ತೆ ಮಾತ್ರ ಕಳಪೆ ಎನ್ನುವ ಟಿವಿಯವರು, ಟಿಆರ್‌ಪಿಗಾಗಿ ತಮ್ಮ ತಾಯಿಯನ್ನು ಮಾರುತ್ತಾರೆ

Vijaya Karnataka 12 Mar 2018, 10:57 am
ಬೀದರ್‌: ‘ಕ್ಷೇತ್ರದಲ್ಲಿ ನಾನು ಒಟ್ಟು 813 ಕಿಮೀ ರಸ್ತೆ ನಿರ್ಮಿಸಿದ್ದರೂ ಯಾರೂ ಮಾತನಾಡಲ್ಲ. ನಿರ್ಣಾ ಗ್ರಾಮದಲ್ಲಿ ಒಂದು ಕಿಮೀ ರಸ್ತೆ ಮಾತ್ರ ಕಳಪೆ ಎನ್ನುವ ಟಿವಿಯವರು, ಟಿಆರ್‌ಪಿಗಾಗಿ ತಮ್ಮ ತಾಯಿಯನ್ನು ಮಾರುತ್ತಾರೆ’ ಎಂದು ಶಾಸಕ ಅಶೋಕ ಖೇಣಿ ವಿವಾದಾತ್ಮಕ ಹೇಳಿಕೆ ನೀಡಿ, ಮರುಕ್ಷಣದಲ್ಲೆ ‘‘ಸಾರಿ’’ ಎಂದರು.
Vijaya Karnataka Web ashok kheny angry on electronic media
ಟಿಆರ್‌ಪಿಗಾಗಿ ಟಿವಿಯವರು ತಾಯಿಯನ್ನೂ ಮಾರುತ್ತಾರೆ: ಅಶೋಕ್ ಖೇಣಿ ವಿವಾದ


ಬೀದರ್‌ ಜಿಲ್ಲಾ ಕಾಂಗ್ರೆಸ್‌ ಏರ್ಪಡಿಸಿದ್ದ ಸನ್ಮಾನ ಕಾರ‍್ಯಕ್ರಮದಲ್ಲಿ ಮಾತನಾಡಿ, ‘ಸಿದ್ದರಾಮಯ್ಯನವರ ಬದ್ಧತೆ, ಅಭಿವೃದ್ಧಿ ಹಾಗೂ ಜಾತ್ಯತೀತತೆಯನ್ನು ಮೆಚ್ಚಿ ಕಾಂಗ್ರೆಸ್‌ ಸೇರಿದೆ,’ಎಂದೂ ಖೇಣಿ ಹೇಳಿದರು.

ಮೋದಿ ಹೇಳಿಕೆಯಂತೆ ನಾನು ಘರ್‌ ವಾಪಸಿ: ಖೇಣಿ

‘ನನ್ನ ತಂದೆ, ಅಜ್ಜ ಅವರುಗಳು ಕಾಂಗ್ರೆಸ್‌ನಲ್ಲಿದ್ದರು. ಪ್ರಧಾನಿ ಮೋದಿ ಅವರು ಘರ್‌ ವಾಪಸಿ ಬಗ್ಗೆ ಹೇಳಿದ್ದರು. ಅಂತೆಯೇ ನಾನು ಕಾಂಗ್ರೆಸ್‌ ಸೇರುವ ಮೂಲಕ ಘರ್‌ ವಾಪಸಿ ಮಾಡಿದ್ದೇನೆ,’ ಎಂದು ಕಾಂಗ್ರೆಸ್‌ ಸೇರ್ಪಡೆಯನ್ನು ಶಾಸಕ ಅಶೋಕ್‌ ಖೇಣಿ ಸಮರ್ಥನೆ ನೀಡಿದರು.

ನೋಟು ಹಾರಿಸಿ ನೃತ್ಯ; ಕಾಂಗ್ರೆಸ್ಸಿಗರಿಂದ ಕಪ್ಪು ಪಟ್ಟಿ

ಕಾಂಗ್ರೆಸ್‌ ಸೇರಿದ ನಂತರ ನಗರಕ್ಕೆ ಆಗಮಿಸಿದ ಖೇಣಿಯನ್ನು ಮೆರವಣಿಗೆ ಮೂಲಕ ಕರೆ ತರುವಾಗ ಕಾರ‍್ಯಕರ್ತರು ನೋಟುಗಳನ್ನು ಎಸೆದು ಕುಣಿದು ಕುಪ್ಪಳಿಸಿದರು.

ಕಪ್ಪುಪಟ್ಟಿ ಧರಿಸಿ ಅಕ್ರೋಶ

ಬೀದರ್‌ ದಕ್ಷಿಣ ಕ್ಷೇತ್ರದ ಮೂಲ ಕಾಂಗ್ರೆಸ್‌ ಕಾರ‍್ಯಕರ್ತರು ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು. ಖೇಣಿ ಹಠಾವೋ, ಕಾಂಗ್ರೆಸ್‌ ಬಚಾವೋ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಖೇಣಿ ಜಿಲ್ಲೆಯ ಗಡಿಗೆ ಬಂದ ಬಳಿಕ ಸ್ವಾಗತಿಸುವಾಗ, ಮೆರವಣಿಗೆಯುದ್ದಕ್ಕು ಒಬ್ಬ ಕಾಂಗ್ರೆಸ್‌ನವರು ಕಾಣಿಸಿಕೊಳ್ಳಲಿಲ್ಲ. ಹುಮನಾಬಾದ್‌ ಶಾಸಕ, ರಾಜ್ಯ ಭೂ ಸೇನಾ ನಿಗಮದ ಅಧ್ಯಕ್ಷ ರಾಜಶೇಖರ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ವಿಜಯ್‌ಸಿಂಗ್‌ ಗೈರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ