ಆ್ಯಪ್ನಗರ

ಮನೆ ತೆರವುಗೊಳಿಸಿದ ಪೊಲೀಸರು

ತಾಲೂಕಿನ ಕಳಗಾಪೂರ್‌ದಲ್ಲಿ ಸವರ್ಣೀಯ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ನೀಡಿದ ಹಣ ವಾಪಸ್ಸು ನೀಡುವಂತೆ ಕಿರುಕುಳ ಮತ್ತು ಜೀವ ಬೆದರಿಕೆ, ಮನೆಗೆ ಬೀಗ ಹಾಕಿರುವ ಕುರಿತು ಪ್ರಕರಣ ದಾಖಲಾಗಿದೆ.

Vijaya Karnataka 22 Feb 2019, 5:25 pm
ಕಮಲನಗರ :ತಾಲೂಕಿನ ಕಳಗಾಪೂರ್‌ದಲ್ಲಿ ಸವರ್ಣೀಯ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಅದೇ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ನೀಡಿದ ಹಣ ವಾಪಸ್ಸು ನೀಡುವಂತೆ ಕಿರುಕುಳ ಮತ್ತು ಜೀವ ಬೆದರಿಕೆ, ಮನೆಗೆ ಬೀಗ ಹಾಕಿರುವ ಕುರಿತು ಪ್ರಕರಣ ದಾಖಲಾಗಿದೆ. ಡಿಎಸ್‌ಪಿ ವೆಂಕನಗೌಡ ಪಾಟೀಲರು ಗುರುವಾರ ಗ್ರಾಮಕ್ಕೆ ತೆರಳಿ ಮನೆಯ ಬೀಗ ತೆರವುಗೊಳಿಸಿದ ಪ್ರಕರಣ ವರದಿಯಾಗಿದೆ.
Vijaya Karnataka Web atrocity case police locked up house
ಮನೆ ತೆರವುಗೊಳಿಸಿದ ಪೊಲೀಸರು

ಪಂಡರಿ ಕೇಶವರಾವ ಅವರು ಅದೆ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಗೋವಿಂದ ಕೊಂಡಿಬಾ ಅವರಿಗೆ ಮೂರು ವರ್ಷಗಳ ಹಿಂದೆ ಬಡ್ಡಿ ರೂಪದಲ್ಲಿ 35 ಸಾವಿರ ರೂ.ಹಣ ನೀಡಿದ್ದಾರೆ.

ಬಡ್ಡಿ ಸಮೇತ ಒಟ್ಟು 2ಲಕ್ಷ ರೂ.ಹಣ ನೀಡುವಂತೆ ಕೇಳುತ್ತಿದ್ದಾರೆ. ಇದಕ್ಕೆ ಒಪ್ಪದ ಗೋವಿಂದ ಭಯ ಭೀತರಾಗಿ ಮನೆ ಬಿಟ್ಟು ಪರಾರಿಯಾಗಿದ್ದಾರೆ. ಆಗ ಕೆರಳಿದ ಪಂಡರಿ ಅವರು ಗೋವಿಂದನ ಮನೆಯ ಆರು ಕೋಣೆಗಳಿಗೆ ಬೀಗ ಹಾಕಿದ್ದಾನೆ. ಅಲ್ಲದೆ ಕುಟುಂಬದ ಸದಸ್ಯ ಧಮ್ಮಪಾಲನಿಗೆ ಜೀವ ಬೆದರಿಕೆ ಹಾಕಿದ್ದಾನೆ. ಈ ಹಿನ್ನೆಲೆಯಲ್ಲಿ ಗೋವಿಂದನ ಪತ್ನಿ ಕವಿತಾ ಪಂಡರಿ ಅವರು ಬುಧವಾರ ಕಮಲನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಭಾಲ್ಕಿ ಉಪ ವಿಭಾಗದ ಡಿಎಸ್‌ಪಿ ವೆಂಕನಗೌಡ ಪಾಟೀಲ, ಕಮಲನಗರ ಸಿಪಿಐ ದಿಲೀಪ ಸಾಗರ ನೇತೃತ್ವದಲ್ಲಿ ಪೊಲೀಸರು ಗುರುವಾರ ಗ್ರಾಮಕ್ಕೆ ತೆರಳಿ ಗೋವಿಂದ ಅವರ ಮನೆಯÜ ಬೀಗ ತೆರವುಗೊಳಿಸಿದ್ದಾರೆ. ಅಲ್ಲದೆ ಆರೋಪಿ ವಿರುದ್ಧ ಅಟ್ರಾಸಿಟಿ ಕೇಸು ದಾಖಲಿಸಿ, ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ