ಆ್ಯಪ್ನಗರ

ಮೋದಿ ಜನ್ಮದಿನದಂದು ಜನ್ಮ ತಾಳಿದ ಪುತ್ರನಿಗೆ 'ನರೇಂದ್ರ' ಎಂದು ಹೆಸರಿಟ್ಟ ದಂಪತಿ

ಬೀದರ್‌ನ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಮಲ್ಟಿ ಸೂಪರ್‌ ಸ್ಪೆ ಷಾಲಿಟಿ ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವಾದ ಸೆ. 17ರ ಶುಕ್ರವಾರ ಜನಿಸಿದ ನವಜಾತ ಶಿಶು ಈಗ ಎಲ್ಲರ ಗಮನ ಸೆಳೆದಿದೆ.

Vijaya Karnataka Web 17 Sep 2021, 8:30 pm
ಬೀದರ್‌: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವಾದ ಶುಕ್ರವಾರ ಇಲ್ಲಿಯ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿಜನಿಸಿದ ಪುತ್ರನಿಗೆ 'ನರೇಂದ್ರ 'ಎಂದು ಹೆಸರಿಟ್ಟು ದಂಪತಿ ಗಮನ ಸೆಳೆದಿದ್ದಾರೆ.
Vijaya Karnataka Web ಕಲಬುರಗಿ
ಕಲಬುರಗಿ


ಚಿಟಗುಪ್ಪ ತಾಲೂಕಿನ ನಿರ್ಣಾವಾಡಿ ಗ್ರಾಮದ ಅಂಬಿಕಾ ವೀರಶೆಟ್ಟಿ ರಂಜೇರಿ ದಂಪತಿ ತಮ್ಮ ಮಗನಿಗೆ ನರೇಂದ್ರ ಎಂದು ನಾಮಕರಣ ಮಾಡಿದವರು. ಪ್ರಧಾನಿ ಜನ್ಮದಿನದಂದು ಪುತ್ರ ಜನಿಸಿದ್ದಕ್ಕೆ ಸಂತಸವಾಗಿದೆ. ಹೀಗಾಗಿ, ಈ ದಿನದ ಸವಿನೆನಪಿಗಾಗಿ ಮಗನಿಗೆ ನರೇಂದ್ರ ಎಂದು ಹೆಸರಿಟ್ಟಿದ್ದೇವೆ ಎಂದು ಅಂಬಿಕಾ ಹೇಳಿದರು.

ಹಣ್ಣುಹಂಪಲು ವಿತರಣೆ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್‌, ಉಪಾಧ್ಯಕ್ಷರಾದ ಪ್ರಕಾಶ ಟೊಣ್ಣೆ, ಪ್ರಸನ್ನಲಕ್ಷ್ಮೇ ದೇಶಪಾಂಡೆ, ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್‌ ಗೌಳಿ, ಅನಿಲ್‌ ರಾಜಗೀರಾ, ಯುವ ಮೋರ್ಚಾ ಜಿಲ್ಲಾಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ್‌ ಶೇಕಾಪುರ, ಮಾಹಿತಿ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಸಚ್ಚಿದಾನಂದ ಚಿದ್ರೆ, ಡಾ. ಕಪಿಲ್‌ ಪಾಟೀಲ್‌, ನಿತಿನ್‌ ಕರ್ಪೂರ, ಕೈಲಾಶನಾಥ ಕಾಜಿ, ಸುನೀಲ್‌ ದಳವೆ, ಆಸ್ಪತ್ರೆ ಸಿಇಒ ಕೃಷ್ಣಾರೆಡ್ಡಿ, ರಾಮಶೆಟ್ಟಿ ಹಾವಶೆಟ್ಟಿ ಇದ್ದರು.

ದಂಪತಿ ತಮ್ಮ ಪುತ್ರನಿಗೆ ನರೇಂದ್ರ ಎಂದು ಹೆಸರು ಇಟ್ಟಿರುವುದು ತಮಗೆ ಅಪಾರ ಖುಷಿ ನೀಡಿದೆ. ಪ್ರಧಾನಿ ಜನ್ಮದಿನದಂದು ತಮ್ಮ ಕರುಳಬಳ್ಳಿಗೆ ನರೇಂದ್ರ ಎಂದು ನಾಮಕರಣ ಮಾಡಿರುವುದು ದೇಶದ ಜನ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ.
- ಸೂರ್ಯಕಾಂತ ನಾಗಮಾರಪಳ್ಳಿ, ಆಸ್ಪತ್ರೆ ಅಧ್ಯಕ್ಷರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ