ಆ್ಯಪ್ನಗರ

ಮಕ್ಕಳಿಗೆ ಹಾಲು ಕುಡಿಸಿ ಬಸವ ಪಂಚಮಿ

ನಗರದ ಸಿಎಂಸಿ ಕಾಲೊನಿಯಲ್ಲಿ ಇಲ್ಲಿನ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಮಿತಿಯಿಂದ ನಾಗರ ಪಂಚಮಿ ಹಬ್ಬದ ಬದಲಾಗಿ ಬಸವ ಪಂಚಮಿ ಹಬ್ಬವನ್ನು ಆಚರಿಸಲಾಯಿತು.

Vijaya Karnataka 15 Aug 2019, 9:38 pm
ಬೀದರ್‌ :ನಗರದ ಸಿಎಂಸಿ ಕಾಲೊನಿಯಲ್ಲಿ ಇಲ್ಲಿನ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಮಿತಿಯಿಂದ ನಾಗರ ಪಂಚಮಿ ಹಬ್ಬದ ಬದಲಾಗಿ ಬಸವ ಪಂಚಮಿ ಹಬ್ಬವನ್ನು ಆಚರಿಸಲಾಯಿತು.
Vijaya Karnataka Web basava panchami for milk for children
ಮಕ್ಕಳಿಗೆ ಹಾಲು ಕುಡಿಸಿ ಬಸವ ಪಂಚಮಿ


ಈ ಹಿನ್ನೆಲೆಯಲ್ಲಿ ಬಡಾವಣೆಯ ಬಡ ಮಕ್ಕಳಿಗೆ ಹಾಲನ್ನು ವಿತರಿಸುವ ಮೂಲಕ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆಯನ್ನು ಮೂಡಿಸಲಾಯಿತು.

ಜನರ, ಮಕ್ಕಳ ಹೊಟ್ಟೆಗೆ ಸೇರಬೇಕಾದ ಪೌಷ್ಟಿಕವಾದ ಹಾಲನ್ನು ಹುತ್ತಕ್ಕೆ ಎರೆಯುವ ಬದಲು ಬಡ ಮಕ್ಕಳಿಗೆ ನೀಡಬೇಕು. ಹುತ್ತಕ್ಕೆ ಹಾಲು ಎರೆಯುವುದರಿಂದ ಯಾವುದೇ ಲಾಭವಿಲ್ಲ. ಇದನ್ನು ಎಲ್ಲರೂ ಮನಗಾಣಬೇಕು ಎಂಬ ಸಂದೇಶವನ್ನು ಈ ಮೂಲಕ ಸಾರಲಾಯಿತು.

ವೇದಿಕೆ ಜಿಲ್ಲಾ ಸಲಹೆಗಾರ ಅರುಣ ಪಟೇಲ್‌ ನೇತೃತ್ವದಲ್ಲಿ ನಡೆದ ಕಾರ‍್ಯಕ್ರಮದಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಭಾಲ್ಕಿ ತಾಪಂ ಸದಸ್ಯ ಜಗನ್ನಾಥ ಪೂಜಾರಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಚಾಲನೆ ನೀಡಿದರು. ಪ್ರಮುಖರಾದ ಗೌತಮ ಮತ್ತಂಗಿಕರ್‌, ಶಿವಕುಮಾರ ಗುನ್ನಳಿಕರ್‌, ಬಸವರಾಜ ಭಾವಿಕಟ್ಟಿ, ಹರ್ಷವರ್ಧನ ಬೌದ್ಧೆ ಹಾಗೂ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ