ಬಸವಕಲ್ಯಾಣ ಉಪಚುನಾವಣೆ:'ಕೈ' ಅಭ್ಯರ್ಥಿ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸಿದ ಕೆಪಿಸಿಸಿ ಸಮಿತಿ
ಕೆಪಿಸಿಸಿಯಿಂದ ರಚಿಸಲಾಗಿರುವ ಅಭ್ಯರ್ಥಿ ಆಯ್ಕೆ ಸಮಿತಿಯು ಶನಿವಾರ ಬೀದರ್ನ ಖಾಸಗಿ ಹೊಟೆಲ್ನಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅಭಿಪ್ರಾಯ ಸಂಗ್ರಹಿಸಿತು. ಕ್ಷೇತ್ರದ 18 ಜನ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ಗಾಗಿ ಮನವಿ ಮಾಡಿದರು.
Vijaya Karnataka Web 28 Nov 2020, 9:30 pm
ಬೀದರ್: ಕೆಪಿಸಿಸಿಯಿಂದ ರಚಿಸಲಾಗಿರುವ ಅಭ್ಯರ್ಥಿ ಆಯ್ಕೆ ಸಮಿತಿಯು ಶನಿವಾರ ಬೀದರ್ನ ಖಾಸಗಿ ಹೊಟೆಲ್ನಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅಭಿಪ್ರಾಯ ಸಂಗ್ರಹಿಸಿತು.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರವೇ ಉಪ ಚುನಾವಣೆ ನಡೆಯಲಿರುವ ನಿಮಿತ್ತ ಕ್ಷೇತ್ರದ 18 ಜನ ಟಿಕೆಟ್ ಆಕಾಂಕ್ಷಿಗಳು ತಮಗೆ ಯಾಕೆ ಟಿಕೆಟ್ ನೀಡಬೇಕು ಎಂಬ ಕುರಿತು ಸಮಿತಿಯ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟರು.
ಕೈ ಟಿಕೆಟ್ ಆಕಾಂಕ್ಷಿಗಳಾದ ದಿ. ಬಿ. ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಬಿ. ನಾರಾಯಣರಾವ್, ಪುತ್ರ ಗೌತಮ್ ಬಿ. ನಾರಾಯಣರಾವ್, ಎಂಎಲ್ಸಿ ವಿಜಯಸಿಂಗ್, ಪ್ರಮುಖರಾದ ಶಾಂತಪ್ಪ ಜಿ. ಪಾಟೀಲ್, ಬಸವರಾಜ ಬುಳ್ಳಾ, ಶಿವಶರಣ ಬಿರಾದಾರ್, ಬಾಬು ಹೊನ್ನಾನಾಯಕ, ಆನಂದ್ ದೇವಪ್ಪ, ಮರುಳೀಧರ ಏಕಲಾರಕರ್, ಅಮೃತರಾವ್ ಚಿಮಕೋಡೆ, ಶಂಕರ ಜಮಾದಾರ್, ಸುಧಾಕರ ಗುರ್ಜರ್, ಶಿವರಾಜ ನರಶೆಟ್ಟಿ, ಏಜಾಜ್ ಲಾತೂರೆ, ಸುನಿಲ್ ಬಿರಾದಾರ್, ಅಲಿಸಾಬ್ ಖಾದ್ರಿ, ಅರ್ಜುನ ಕನಕ, ಡಿ.ಕೆ. ದಾವೂದ್ ಅವರುಗಳು ಸಮಿತಿಯ ಮುಂದೆ ಹಾಜರಾಗಿ ಚುನಾವಣೆಗೆ ಸ್ಪರ್ದಿಸಲು ತಮಗಿರುವ ಶಕ್ತಿ, ಸಂಪರ್ಕ, ಸಾಮರ್ಥ್ಯದ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.
ಬೀದರ್: ಕಾಂಗ್ರೆಸ್ನಿಂದ ಬಸವಣ್ಣನವರ ತತ್ವ ಸಿದ್ಧಾಂತ ಪಾಲನೆ ಎಂದ ಡಿಕೆಶಿ
ಸಮಿತಿಯ ಅಧ್ಯಕ್ಷರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಯೋಜಕರಾದ ಶಾಸಕ ರಾಜಶೇಖರ ಪಾಟೀಲ್, ಸದಸ್ಯರಾದ ನಾಸಿರ್ ಹುಸೇನ್, ಡಾ. ಶರಣಪ್ರಕಾಶ್ ಪಾಟೀಲ್, ಬಿ.ಆರ್. ಪಾಟೀಲ್, ರಹಿಂ ಖಾನ್, ನರಸಿಂಗರಾವ್ ಸೂರ್ಯವಂಶಿ, ಸಂತೋಷ್ ಲಾಡ್, ಅಲ್ಲಮಪ್ರಭು ಪಾಟೀಲ್ ಅವರುಗಳು ಆಸಕ್ತ ಟಿಕೆಟ್ ಆಕಾಂಕ್ಷಿಗಳಿಂದ ಮಾಹಿತಿ ಸಂಗ್ರಹಿಸಿದರು. 10 ಜನರನ್ನೊಳಗೊಂಡ ಆಯ್ಕೆ ಸಮಿತಿಯಲ್ಲಿ ಸಭೆಗೆ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಗೈರಾಗಿದ್ದರು.
ಸಿಎಂ ಸ್ಥಾನದಿಂದ ಬಿಎಸ್ವೈ ಬದಲಿಸಿದರೆ ರಾಜ್ಯದಲ್ಲಿ ಕ್ರಾಂತಿ: ಶಿವಾನಂದ ಶ್ರೀ ಎಚ್ಚರಿಕೆ
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಶೀಘ್ರವೇ ಉಪ ಚುನಾವಣೆ ನಡೆಯಲಿರುವ ನಿಮಿತ್ತ ಕ್ಷೇತ್ರದ 18 ಜನ ಟಿಕೆಟ್ ಆಕಾಂಕ್ಷಿಗಳು ತಮಗೆ ಯಾಕೆ ಟಿಕೆಟ್ ನೀಡಬೇಕು ಎಂಬ ಕುರಿತು ಸಮಿತಿಯ ಪ್ರಮುಖರಿಗೆ ಮನವರಿಕೆ ಮಾಡಿಕೊಟ್ಟರು.
ಕೈ ಟಿಕೆಟ್ ಆಕಾಂಕ್ಷಿಗಳಾದ ದಿ. ಬಿ. ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಬಿ. ನಾರಾಯಣರಾವ್, ಪುತ್ರ ಗೌತಮ್ ಬಿ. ನಾರಾಯಣರಾವ್, ಎಂಎಲ್ಸಿ ವಿಜಯಸಿಂಗ್, ಪ್ರಮುಖರಾದ ಶಾಂತಪ್ಪ ಜಿ. ಪಾಟೀಲ್, ಬಸವರಾಜ ಬುಳ್ಳಾ, ಶಿವಶರಣ ಬಿರಾದಾರ್, ಬಾಬು ಹೊನ್ನಾನಾಯಕ, ಆನಂದ್ ದೇವಪ್ಪ, ಮರುಳೀಧರ ಏಕಲಾರಕರ್, ಅಮೃತರಾವ್ ಚಿಮಕೋಡೆ, ಶಂಕರ ಜಮಾದಾರ್, ಸುಧಾಕರ ಗುರ್ಜರ್, ಶಿವರಾಜ ನರಶೆಟ್ಟಿ, ಏಜಾಜ್ ಲಾತೂರೆ, ಸುನಿಲ್ ಬಿರಾದಾರ್, ಅಲಿಸಾಬ್ ಖಾದ್ರಿ, ಅರ್ಜುನ ಕನಕ, ಡಿ.ಕೆ. ದಾವೂದ್ ಅವರುಗಳು ಸಮಿತಿಯ ಮುಂದೆ ಹಾಜರಾಗಿ ಚುನಾವಣೆಗೆ ಸ್ಪರ್ದಿಸಲು ತಮಗಿರುವ ಶಕ್ತಿ, ಸಂಪರ್ಕ, ಸಾಮರ್ಥ್ಯದ ಮಾಹಿತಿ ನೀಡಿದರು ಎಂದು ತಿಳಿದು ಬಂದಿದೆ.
ಬೀದರ್: ಕಾಂಗ್ರೆಸ್ನಿಂದ ಬಸವಣ್ಣನವರ ತತ್ವ ಸಿದ್ಧಾಂತ ಪಾಲನೆ ಎಂದ ಡಿಕೆಶಿ
ಸಮಿತಿಯ ಅಧ್ಯಕ್ಷರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಯೋಜಕರಾದ ಶಾಸಕ ರಾಜಶೇಖರ ಪಾಟೀಲ್, ಸದಸ್ಯರಾದ ನಾಸಿರ್ ಹುಸೇನ್, ಡಾ. ಶರಣಪ್ರಕಾಶ್ ಪಾಟೀಲ್, ಬಿ.ಆರ್. ಪಾಟೀಲ್, ರಹಿಂ ಖಾನ್, ನರಸಿಂಗರಾವ್ ಸೂರ್ಯವಂಶಿ, ಸಂತೋಷ್ ಲಾಡ್, ಅಲ್ಲಮಪ್ರಭು ಪಾಟೀಲ್ ಅವರುಗಳು ಆಸಕ್ತ ಟಿಕೆಟ್ ಆಕಾಂಕ್ಷಿಗಳಿಂದ ಮಾಹಿತಿ ಸಂಗ್ರಹಿಸಿದರು. 10 ಜನರನ್ನೊಳಗೊಂಡ ಆಯ್ಕೆ ಸಮಿತಿಯಲ್ಲಿ ಸಭೆಗೆ ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಗೈರಾಗಿದ್ದರು.
ಸಿಎಂ ಸ್ಥಾನದಿಂದ ಬಿಎಸ್ವೈ ಬದಲಿಸಿದರೆ ರಾಜ್ಯದಲ್ಲಿ ಕ್ರಾಂತಿ: ಶಿವಾನಂದ ಶ್ರೀ ಎಚ್ಚರಿಕೆ