ಬಸವಣ್ಣನವರೇ ಲಿಂಗಾಯತ ಪ್ರವರ್ತಕರು: ಅಕ್ಕ
ಬಸವಣ್ಣನವರೆ ಲಿಂಗಾಯತದ ಪ್ರವರ್ತಕರೆಂದು ಲಿಂಗಾಯತ ಮಹಾಮಠದ ಶ್ರೀ ಅಕ್ಕ ಅನ್ನಪೂರ್ಣತಾಯಿ ಪ್ರತಿಪಾದಿಸಿದರು.
Vijaya Karnataka 16 Jan 2019, 10:01 pm
ಭಾಲ್ಕಿ :ಬಸವಣ್ಣನವರೆ ಲಿಂಗಾಯತದ ಪ್ರವರ್ತಕರೆಂದು ಲಿಂಗಾಯತ ಮಹಾಮಠದ ಶ್ರೀ ಅಕ್ಕ ಅನ್ನಪೂರ್ಣತಾಯಿ ಪ್ರತಿಪಾದಿಸಿದರು.
ತಾಲೂಕಿನ ಸೈದಾಪೂರ ವಾಡಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿವಯೋಗಿ ಸಿದ್ದರಾಮೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಮಕರ ಸಂಕ್ರಾಂತಿ ಬಸವಣ್ಣನವರು ಇಷ್ಟಲಿಂಗ ಆವಿಷ್ಕರಿಸಿದ ಮಹತ್ವದ ದಿನ. ದೇಹವೇ ದೇವಾಲಯವನ್ನಾಗಿ ಮಾಡಿಕೊಂಡು ಶ್ರೇಷ್ಠ, ಕನಿಷ್ಠ, ಹೆಣ್ಣು - ಗಂಡೆಂಬ ಭೇದವಿಲ್ಲದೆ ಎಲ್ಲರಿಗೂ ಸ್ವತಂತ್ರವಾಗಿ ದೇವರನ್ನು ಪೂಜಿಸುವ ಅವಕಾಶ ಕಲ್ಪಿಸುವ ಇಷ್ಟಲಿಂಗವನ್ನು ಕರಕ್ಕೆ ತಂದು ಕೊಟ್ಟ ದಿನದಿಂದಲೇ ಲಿಂಗಾಯತ ಧರ್ಮ ಉಗಮವಾಯಿತು ಎಂದರು.
ಅಲ್ಲಮ, ಸಿದ್ಧರಾಮರ ವಚನಗಳನ್ನು ಹರಿಹರ - ರಾಘವಾಂಕರ ಸಾಹಿತ್ಯದ ಉಲ್ಲೆಯಗಳನ್ನು ನೀಡಿ, ಸಾಕ್ಷಾಧಾರಗಳ ಸಮೇತ ವಿವರಿಸಿದರು. ಬಸವಣ್ಣನವರಿಗೆ ಪೇಜಾವರ ಶ್ರೀಗಳ ಪ್ರಮಾಣ ಪತ್ರ ಬೇಕಿಲ್ಲ. ಪೇಜಾವರ ಶ್ರೀಗಳು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಬಸವಾದಿ ಶರಣರ ವಚನಗಳ ಅಧ್ಯಯನ ಮಾಡಿದರೆ ಬಸವಕಾರ್ಯ ಅವರಿಗೆ ಮನವರಿಕೆಯಾಗುವುದು. ಅಗ್ರಜನಿಂದ ಅಂತ್ಯಭನವರೆಗೆ ಸಮಾನರೆಂದು ಸಾರಿ, ಸಮಾನತೆಯ ಭಾವುಟ ಬಾನೆತ್ತರಕ್ಕೆ ಹಾರಿಸಿ, ಆಚಾರಣೆಯಲ್ಲಿ ತಂದ ಮಹಾನುಭಾವರು ಬಸವಣ್ಣನವರು ಎಂದು ಬಣ್ಣಿಸಿದರು.
ಬಸವಗಿರಿಯ ಪ್ರಭುದೇವರು ನೇತೃತ್ವವಹಿಸಿ ಸಿದ್ಧರಾಮೇಶ್ವರ ಜೀವನ ಮತ್ತು ಸಂದೇಶಗಳನ್ನು ತಿಳಿಸಿ ಹೇಳಿದರು. ಪ್ರಾರಂಭದಲ್ಲಿ ಇಂ.ಅಶೋಕ ಖೇಮಶೆಟ್ಟಿ ಉದ್ಘಾಟಿಸಿದರು. ಇಂ.ವಿರೇಂದ್ರ ಶೆಟಕಾರ, ಶರಣಪ್ಪ ದೇಶಮುಖ, ಪಂಡಿತ ಶಂಭು, ಮಾಣಿಕರಾವ ಕೆರೂರ ಪಾಲ್ಗೊಂಡಿದ್ದರು. ಕಲ್ಯಾಣರಾವ ಡಾವಣಗಾಂವೆ ಅಧ್ಯಕ್ಷ ತೆವಹಿಸಿದ್ದರು. ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು ಮಲ್ಲಿಕಾರ್ಜುನ ಪಾಟೀಲ ನಿರೂಪಿಸಿದರು. ಓಂಕಾರ ಪಾಟೀಲ್ ವಂದಿಸಿದರು.
ತಾಲೂಕಿನ ಸೈದಾಪೂರ ವಾಡಿಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿವಯೋಗಿ ಸಿದ್ದರಾಮೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಮಕರ ಸಂಕ್ರಾಂತಿ ಬಸವಣ್ಣನವರು ಇಷ್ಟಲಿಂಗ ಆವಿಷ್ಕರಿಸಿದ ಮಹತ್ವದ ದಿನ. ದೇಹವೇ ದೇವಾಲಯವನ್ನಾಗಿ ಮಾಡಿಕೊಂಡು ಶ್ರೇಷ್ಠ, ಕನಿಷ್ಠ, ಹೆಣ್ಣು - ಗಂಡೆಂಬ ಭೇದವಿಲ್ಲದೆ ಎಲ್ಲರಿಗೂ ಸ್ವತಂತ್ರವಾಗಿ ದೇವರನ್ನು ಪೂಜಿಸುವ ಅವಕಾಶ ಕಲ್ಪಿಸುವ ಇಷ್ಟಲಿಂಗವನ್ನು ಕರಕ್ಕೆ ತಂದು ಕೊಟ್ಟ ದಿನದಿಂದಲೇ ಲಿಂಗಾಯತ ಧರ್ಮ ಉಗಮವಾಯಿತು ಎಂದರು.
ಅಲ್ಲಮ, ಸಿದ್ಧರಾಮರ ವಚನಗಳನ್ನು ಹರಿಹರ - ರಾಘವಾಂಕರ ಸಾಹಿತ್ಯದ ಉಲ್ಲೆಯಗಳನ್ನು ನೀಡಿ, ಸಾಕ್ಷಾಧಾರಗಳ ಸಮೇತ ವಿವರಿಸಿದರು. ಬಸವಣ್ಣನವರಿಗೆ ಪೇಜಾವರ ಶ್ರೀಗಳ ಪ್ರಮಾಣ ಪತ್ರ ಬೇಕಿಲ್ಲ. ಪೇಜಾವರ ಶ್ರೀಗಳು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಬಸವಾದಿ ಶರಣರ ವಚನಗಳ ಅಧ್ಯಯನ ಮಾಡಿದರೆ ಬಸವಕಾರ್ಯ ಅವರಿಗೆ ಮನವರಿಕೆಯಾಗುವುದು. ಅಗ್ರಜನಿಂದ ಅಂತ್ಯಭನವರೆಗೆ ಸಮಾನರೆಂದು ಸಾರಿ, ಸಮಾನತೆಯ ಭಾವುಟ ಬಾನೆತ್ತರಕ್ಕೆ ಹಾರಿಸಿ, ಆಚಾರಣೆಯಲ್ಲಿ ತಂದ ಮಹಾನುಭಾವರು ಬಸವಣ್ಣನವರು ಎಂದು ಬಣ್ಣಿಸಿದರು.
ಬಸವಗಿರಿಯ ಪ್ರಭುದೇವರು ನೇತೃತ್ವವಹಿಸಿ ಸಿದ್ಧರಾಮೇಶ್ವರ ಜೀವನ ಮತ್ತು ಸಂದೇಶಗಳನ್ನು ತಿಳಿಸಿ ಹೇಳಿದರು. ಪ್ರಾರಂಭದಲ್ಲಿ ಇಂ.ಅಶೋಕ ಖೇಮಶೆಟ್ಟಿ ಉದ್ಘಾಟಿಸಿದರು. ಇಂ.ವಿರೇಂದ್ರ ಶೆಟಕಾರ, ಶರಣಪ್ಪ ದೇಶಮುಖ, ಪಂಡಿತ ಶಂಭು, ಮಾಣಿಕರಾವ ಕೆರೂರ ಪಾಲ್ಗೊಂಡಿದ್ದರು. ಕಲ್ಯಾಣರಾವ ಡಾವಣಗಾಂವೆ ಅಧ್ಯಕ್ಷ ತೆವಹಿಸಿದ್ದರು. ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು ಮಲ್ಲಿಕಾರ್ಜುನ ಪಾಟೀಲ ನಿರೂಪಿಸಿದರು. ಓಂಕಾರ ಪಾಟೀಲ್ ವಂದಿಸಿದರು.