ಆ್ಯಪ್ನಗರ

ಬೀದರ್‌ ರಸ್ತೆ ಅಪಘಾತ: ಮದುವೆ ಆಗಬೇಕಿದ್ದ ಜೋಡಿ ಸೇರಿ 4 ಸಾವು

ಮುಂದಿನ ತಿಂಗಳು ವಿವಾಹ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಬಂದಿದ್ದರು

Vijaya Karnataka Web 4 Nov 2017, 5:52 pm
ಬೀದರ್: ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮವಾಗಿ ನಾಲ್ವರು ಮೃತಪಟ್ಟಿದ್ದಾರೆ.
Vijaya Karnataka Web bidar accident kills four people
ಬೀದರ್‌ ರಸ್ತೆ ಅಪಘಾತ: ಮದುವೆ ಆಗಬೇಕಿದ್ದ ಜೋಡಿ ಸೇರಿ 4 ಸಾವು


ಈ ನಾಲ್ವರ ಪೈಕಿ ಇಬ್ಬರು ಮುಂದಿನ ತಿಂಗಳು ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಘಾಣಗಾಪುರದ ದತ್ತನ ದರ್ಶನ ಪಡೆದುಕೊಂಡು ವಾಪಸ್‌ ಹೋಗುವಾಗ ಈ ದುರ್ಘಟನೆ ನಡೆಸಿದೆ.

ಹುಮನಾಬಾದ್ ತಾಲೂಕು ಬಸಂತಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.




ಮೃತರನ್ನು ಸವಿತಾಬಾಯಿ ನಾರಾಯಣರಾವ್‌ (45), ಅನುಸಿಯಾ ಬಾಲಾಜಿ (50), ಹಣಮಂತ ನಾರಾಯಣ, (23), ಪ್ರಿಯಾ ಬಾಲಾಜಿ (21) ಎಂದು ಗುರುತಿಸಲಾಗಿದೆ.

ಹಣಮಂತ ಮತ್ತು ಪ್ರಿಯಾ ಅವರ ವಿವಾಹ ಮುಂದಿನ ನಿಶ್ಚಯವಾಗಿತ್ತು.

ಮೃತರೆಲ್ಲರೂ ಮಹಾರಾಷ್ಟ್ರದ ಉದಗೀರ್‌ ಗ್ರಾಮದವರಾಗಿದ್ದಾರೆ.

ಹುಮ್ನಾಬಾದ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bidar: Accident Kills Four People

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ