ಆ್ಯಪ್ನಗರ

ಬೀದರ್‌: ಸೂರ‍್ಯಕಾಂತಗೆ ಟಿಕೆಟ್‌ ; ಕಾರ್ಯಕರ್ತರ ಸಂಭ್ರಮ

ಬೀದರ್‌ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಇಲ್ಲಿನ ರಾಜ್ಯ ಬಿಜೆಪಿ ಕಾರ‍್ಯಕಾರಿಣಿ ಸದಸ್ಯ, ಮಾಜಿ ಸಚಿವ ದಿ.ಗುರುಪಾದಪ್ಪ ನಾಗಮಾರಪಳ್ಳಿ ಕಿರಿಯ ಪುತ್ರ ಸೂರ‍್ಯಕಾಂತ ನಾಗಮಾರಪಳ್ಳಿಗೆ ಘೋಷಿಸಿದ ಬೆನ್ನಲ್ಲೇ ಅವರ ಬೆಂಬಲಿಗರು ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Vijaya Karnataka 17 Apr 2018, 4:56 pm
ಬೀದರ್‌ : ಬೀದರ್‌ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಇಲ್ಲಿನ ರಾಜ್ಯ ಬಿಜೆಪಿ ಕಾರ‍್ಯಕಾರಿಣಿ ಸದಸ್ಯ, ಮಾಜಿ ಸಚಿವ ದಿ.ಗುರುಪಾದಪ್ಪ ನಾಗಮಾರಪಳ್ಳಿ ಕಿರಿಯ ಪುತ್ರ ಸೂರ‍್ಯಕಾಂತ ನಾಗಮಾರಪಳ್ಳಿಗೆ ಘೋಷಿಸಿದ ಬೆನ್ನಲ್ಲೇ ಅವರ ಬೆಂಬಲಿಗರು ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
Vijaya Karnataka Web bidar ticket to surayakanata activists excitement
ಬೀದರ್‌: ಸೂರ‍್ಯಕಾಂತಗೆ ಟಿಕೆಟ್‌ ; ಕಾರ್ಯಕರ್ತರ ಸಂಭ್ರಮ


ಸಹೋದರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ನೇತೃತ್ವದಲ್ಲಿ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಸೂರ‍್ಯಕಾಂತ ನಾಗಮಾರಪಳ್ಳಿ ಅಭಿಮಾನಿಗಳು, ಬಿಜೆಪಿ ಕಾರ‍್ಯಕರ್ತರು ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಬಿ.ಎಸ್‌. ಯಡಿಯೂರಪ್ಪ, ಅಮಿತ್‌ ಶಾ, ನರೇಂದ್ರ ಮೋದಿಗೆ ಜಯ ಘೋಷ ಹಾಕಿದರು.

ಉಮಾಕಾಂತ ನಾಗಮಾರಪಳ್ಳಿಯವರನ್ನು ಎತ್ತಿಕೊಂಡು ಸಂಭ್ರಮಿಸಿದ ಕಾರ‍್ಯಕರ್ತರು ಜಯ ಘೋಷ ಹಾಕಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು. ಬಿಜೆಪಿ ಮುಖಂಡ ವಿಜಯಕುಮಾರ ಪಾಟೀಲ್‌ ಗಾದಗಿ, ನಗರಸಭೆ ಸದಸ್ಯ ಕಲ್ಯಾಣರಾವ್‌ ಪಾಟೀಲ್‌ ಸೇರಿ ಹಲವರು ಪಾಲ್ಗೊಂಡಿದ್ದರು.

ತೀವ್ರ ಪೈಪೋಟಿ ನಡುವೆ ಸೂರ‍್ಯಕಾಂತ ನಾಗಮಾರಪಳ್ಳಿಗೆ ಬಿಜೆಪಿ ಟಿಕೆಟ್‌ ಫೈನಲ್‌ ಆಗಿದ್ದೇ ತಡ ನಾಗಮಾರಪಳ್ಳಿ ಕುಟುಂಬ ಹಾಗೂ ಅವರ ಆಪ್ತ ವಲಯದಲ್ಲಿ ಸಂತಸ ಮನೆ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ